ಹಿರೇಕೆರೂರ:ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.ತಾಲೂಕಿನ ನೂಲಗೇರಿ ಗ್ರಾಮದಲ್ಲಿ 2024-25ನೇ ಸಾಲಿನ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡ ಯೋಜನೆಯಡಿ ₹ 10 ಲಕ್ಷ ವೆಚ್ಚದಲ್ಲಿ ಕಳಗೊಂಡ ರಸ್ತೆಯಿಂದ ಮಲ್ಲಮ್ಮ ಚಲವಾದಿ ಮನೆವರೆಗೆ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ, ಗ್ರಾಪಂ ಉಪಾಧ್ಯಕ್ಷೆ ರೂಪಾ ನಿಂಬೆಗೊಂದಿ, ಸದಸ್ಯರಾದ ವಿನಯ ದಳವಾಯಿ, ಮನೋಹರ ಕಮ್ಮಾರ, ಉಮಾ ಚಕ್ರಸಾಲಿ, ತಾಪಂ ಮಾಜಿ ಸದಸ್ಯ ಮಲ್ಲಪ್ಪ ಚಲವಾದಿ, ವಿ.ಎಸ್. ಪುರದ, ರಾಜಶೇಖರ ಕೋರಿ, ಬಸವರಾಜ ಚಲವಾದಿ, ಉಜ್ಜಪ್ಪ ನಿಂಗಾಪುರ, ವಿರೂಪಾಕ್ಷಯ್ಯ ಮಠದ, ಸೋಮು ಪುರದ, ಈರನಗೌಡ ದಳವಾಯಿ, ಸಿದ್ಧಲಿಂಗಯ್ಯ ಹಿರೇಮಠ, ಗಣೇಶ ಚಲವಾದಿ, ಈರಪ್ಪ ಚಿಕ್ಕೇರಿ, ವೀರೇಶ ಕೋರಿ, ಬಿ.ಸಿ.ಚಿಕ್ಕೇರಿ, ಕರಬಸಪ್ಪ ಕೋರಿ, ರಮೇಶ ಹಿಂದಿನಮನಿ, ಮಾಲತೇಶ ಕಮ್ಮಾರ, ರಾಜಪ್ಪ ಬಂಗೇರ, ರಾಜು ಅರಳಿಕಟ್ಟಿ, ಸೋಮಯ್ಯ ಮಠದ ಸೇರಿದಂತೆ ಗ್ರಾಮಸ್ಥರು ಇದ್ದರು.