ಸಿ.ಕೆ. ನಾಗರಾಜ
ನಾಗರತ್ನಮ್ಮ ರಂಗಕಲೆಯನ್ನೇ ಉಸಿರಾಗಿಸಿಕೊಂಡವರು. ಉತ್ತರ ಕರ್ನಾಟಕ ಬಹುತೇಕ ಊರುಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿದ ಖ್ಯಾತಿ ಅವರದ್ದು. ಕೆ.ಮಾರೆಪ್ಪ- ಕೆ.ಸಿದ್ದಮ್ಮ ಅವರ ಏಳು ಮಕ್ಕಳಲ್ಲಿ ಹಿರಿಯ ಮಗಳೇ ನಾಗರತ್ನಮ್ಮ. 1952ರ ಜೂನ್ 5ರಂದು ಜನಿಸಿದರು. ಎಸ್ಎಸ್ಎಲ್ಸಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ರಂಗಭೂಮಿಯ ಬಗ್ಗೆ ಬಾಲ್ಯದಿಂದಲೇ ಸೆಳೆತವಿತ್ತು. ಶಿಕ್ಷಕಿಯಾಗಬೇಕು ಅಂದುಕೊಂಡಿದ್ದ ಇವರು ರಂಗಭೂಮಿಯ ಕಲಾವಿದೆಯಾದರು.
ರಂಗಭೂಮಿಯ ಗುರುಗಳಾದ ಗೌಳೇರ್ ಮೈಲಾರಪ್ಪ ಅವರು ಒಂದು ವಯಸ್ಸಿನ ಹುಡುಗಿಯರನ್ನೆಲ್ಲ ಕಲೆಹಾಕಿ ನಾಟಕ ಕಲಿಸುತ್ತಿದ್ದರು. ಅವರ ಗರಡಿಯಲ್ಲಿರಿವರು ಬೆಳೆದು, 1967ರಲ್ಲಿ ರಂಗಭೂಮಿ ಪ್ರವೇಶಿಸಿದರು.ಅಭಿನಯಿಸಿದ ನಾಟಕಗಳು:
74 ವರ್ಷಗಳಾದರೂ ಇಂದಿಗೂ ರಂಗಚಟುವಟಿಕೆಯಲ್ಲಿ ನಿರಂತರ ತೊಡಗಿಕೊಂಡಿದ್ದಾರೆ. ಚಲನಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಮದರ್, ಇದುವೇ ಜೀವನ, ಗಂಡುಗೂಳಿಗಳು, ಪ್ರತಿಭಟನೆ ಪ್ರಮುಖ ಚಿತ್ರಗಳು. ಕಿನ್ನಾರಿ ಮತ್ತು ಶರಣು ವಾಹಿನಿ ಧಾರಾವಾಹಿಗಳಲ್ಲಿ ಅಭಿನಯ, ದೂರದರ್ಶನ, ಚಂದನವಾಹಿನಿಯಲ್ಲಿ ಪ್ರಸಾರವಾದ ರಕ್ತರಾತ್ರಿ ನಾಟಕದಲ್ಲಿ ಅಭಿನಯ, ಆಕಾಶವಾಣಿಯಲ್ಲಿ ಧ್ವನಿ ಮುದ್ರಿತ ನಾಟಕಗಳಲ್ಲಿ ಅಭಿನಿಸಿದ್ದಾರೆ.
ವಾಲ್ಮೀಕಿ ಪ್ರಶಸ್ತಿ, ಶ್ರೀಕೃಷ್ಣ ದೇವರಾಯ ವಿವಿಯಿಂದ ಗೌರವ ಡಾಕ್ಟರೇಟ್, ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾವಿತ್ರಮ್ಮ ದೇಜಗೌ ಪ್ರಶಸ್ತಿ, ನಾಡಚೇತನ ಪ್ರಶಸ್ತಿ, ಸಾಮಾಜಿಕ ಸೇವಾ ಭಾರ್ಗವ ಪ್ರಶಸ್ತಿ, ಕೈಲಾಸಂ ಪ್ರಶಸ್ತಿ, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಉಡುಪಿಯ ರಂಗಭೂಮಿಯಿಂದ ಶ್ರೇಷ್ಠ ನಟಿ ಪ್ರಶಸ್ತಿ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳಿಂದ ಪ್ರಶಸ್ತಿ ನೀಡಿವೆ.
ಇವರ ಕುರಿತು "ನನ್ನ ನಾ ಕಂಡಂತೆ " ಆತ್ಮಚರಿತ್ರೆ 1994ರಲ್ಲಿ ‘ಸುಧಾ‘ ವಾರ ಪತ್ರಿಕೆಯಲ್ಲಿ 19 ವಾರಗಳ ಕಾಲ ಧಾರಾವಾಹಿಯಾಗಿ ಪ್ರಕಟವಾಗಿದೆ. ಮೊದಲ ಗ್ರಾಮೀಣ ರಂಗನಟಿಯ ಆತ್ಮಚರಿತ್ರೆ ರಂಗಸಿರಿ ಹಂಪಿ ವಿವಿಯಿಂದ ಪುಸ್ತಕ ಪ್ರಕಟವಾಗಿದೆ. ರಂಗಸಿರಿ ಸಾಕ್ಷ್ಯಚಿತ್ರ ಗುಲ್ಬರ್ಗ ವಿವಿ ಎಂಎ ವಿದ್ಯಾರ್ಥಿಗಳಿಗೆ ಪಠ್ಯವೆಂದು ಆಯ್ಕೆಯಾಗಿದೆ.