ಕನ್ನಡಪ್ರಭ ವಾರ್ತೆ, ಹಾಸನ
ಅದಕ್ಕೆ ಪ್ರತಿಕ್ರಿಯಿಸಿದ ರಂಗಕರ್ಮಿ ಪ್ರಕಾಶ್ ಗರುಡ, ರಂಗಭೂಮಿ ಯಾವತ್ತಿಗೂ ನಿಂತ ನೀರಲ್ಲ. ವರ್ತಮಾನದೊಂದಿಗೆ ಚಲಿಸುತ್ತಿರುತ್ತದೆ. ಆಧುನಿಕತೆಗೆ ತಕ್ಕಂತೆ ರಂಗಭೂಮಿಯಲ್ಲೂ ಕೆಲವು ಬದಲಾವಣೆಗಳಾಗಿವೆ. ಉತ್ತರ ಕರ್ನಾಟಕದಲ್ಲಿ ರಂಗಭೂಮಿ ಇವತ್ತಿಗೂ ಪ್ರಾಬಲ್ಯ ಉಳಿಸಿಕೊಂಡಿದೆ. ಜನವರಿಯಲ್ಲಿ ನಡೆಯುವ ಬನಶಂಕರಿ ಜಾತ್ರೆಯಲ್ಲಿ ಅಂದಾಜು ೫೦ ರಿಂದ ೬೦ ಕೋಟಿ ರು.ಗಳನ್ನು ವಹಿವಾಟು ನಾಟಕಗಳಿಂದ ನಡೆಯುತ್ತದೆ. ಮೊದಲಿನ ದಿನಮಾನಗಳಿಗೆ ಹೋಲಿಸಿದರೆ ಅದರ ಸ್ವರೂಪ ಬದಲಾಗಿರಬಹುದು. ಹೊರತು ಸಂಪೂರ್ಣ ರಂಗಭೂಮಿ ನಶಿಸಿದೆ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ಮರಾಠಿಯಲ್ಲಿ ನಾಟ್ಯ ಸಂಗೀತ ಇನ್ನೂ ಇದೆ. ಉತ್ತರ ಕರ್ನಾಟಕದಲ್ಲಿ ದೊಡ್ಡ ದೊಡ್ಡ ಸಂಗೀತಗಾರರು ಇದ್ದರು. ದಕ್ಷಿಣ ಕರ್ನಾಟಕದ ರಂಗಕರ್ಮಿಗಳು ಸಿನಿಮಾ ಕ್ಷೇತ್ರದತ್ತ ವಾಲಿದರೆ ಉತ್ತರ ಕರ್ನಾಟಕದ ಕಲಾವಿದರು ಸಂಗೀತ ಕ್ಷೇತ್ರವನ್ನು ಆಯ್ದುಕೊಂಡರು. ಹೀಗಾಗಿ ಆ ಅಪವಾದ ಬಂದಿರಬಹುದು ಎಂದರು.ರಂಗಕಲೆ ರಕ್ಷಣೆ ಅವಶ್ಯ: ಅಕ್ಷತಾ ಪಾಂಡವಪುರ ಮಾತನಾಡಿ, ರಂಗಕಲೆಯನ್ನು ಉಳಿಸುವ ಅವಶ್ಯಕತೆ ಎದುರಾಗಿದೆ. ಈ ಕ್ಷೇತ್ರದ ಬಗ್ಗೆ ನಕಾರಾತ್ಮಕ ಮಾತುಗಳೇ ಹೆಚ್ಚಾಗಿ ಕೇಳಿಬರುತ್ತಿವೆ. ಇದೆಲ್ಲವನ್ನೂ ನೋಡಿದರೆ ರಂಗಭೂಮಿ ಉಳಿಯುತ್ತಾ ಎಂಬ ಪ್ರಶ್ನೆ ಮೂಡಿದೆ ಎಂದರು.
ರಂಗಕರ್ಮಿ ಬೇಲೂರು ರಘುನಂದನ್ ಮಾತನಾಡಿ, ನಾವು ಯಾವುದನ್ನು ಜಾಸ್ತಿ ನಂಬಿರುತ್ತೇವೆ ಅಲ್ಲಿ ಆಸಕ್ತಿ ಹುಟ್ಟುತ್ತದೆ. ಬೆಂಗಳೂರಿನಲ್ಲಿ ಬಹುತೇಕರು ರಂಗಭೂಮಿಯನ್ನು ಅನ್ನದ ದಾರಿ ಮಾಡಿಕೊಂಡಿದ್ದಾರೆ. ಆಸಕ್ತಿ ಇರುವವರಿಗೆ ಅದು ವೇದಿಕೆ ಕಲ್ಪಿಸುತ್ತಿದೆ. ರಂಗಭೂಮಿ ಯುವ ಸಮುದಾಯವನ್ನು ಹೆಚ್ಚು ಆಕರ್ಷಿಸುತ್ತಿದೆ. ಸಮಾಜದ ಅನೇಕ ಬದಲಾವಣೆಗೆ ಇದು ನೆರವಾಗಿದೆ. ಅಭದ್ರತೆಯನ್ನು ಹೋಗಲಾಡಿಸಲು, ಸಾಂಸ್ಕೃತಿಕ ವಿಚಾರವನ್ನು ಹೇಳಲು, ಚಿಂತನೆ ಮೂಡಿಸಲು ರಂಗಭೂಮಿ ಪ್ರೋತ್ಸಾಹಿಸುತ್ತದೆ ಎಂದರು. ಉಲಿವಾಲ ಮೋಹನ್ ಗೋಷ್ಠಿ ನಿರ್ವಹಿಸಿದರು.