- ಮೌಲಾನಾ ಸಾಬ್ಕನ್ನಡಪ್ರಭ ವಾರ್ತೆ ಬೀದರ್
ನರಸಿಂಹಲು ಅವರು ಅಂಧನಾಗಿದ್ದರೂ ಕೂಡ ಮೈಸೂರು ವಿಶ್ವ ವಿದ್ಯಾಲಯದಿಂದ ಕರ್ನಾಟಕ ಶಾಸ್ತ್ರಿಯ ಸಂಗೀತ, ಹಿಂದುಸ್ತಾನಿ ಸಂಗೀತದಲ್ಲಿ ಪದವಿ ಪಡೆದಿದ್ದಾರೆ ಸುಮಾರು 30 ವರ್ಷಗಳಿಂದ ಜಾನಪದ ಗಾಯನ, ತತ್ವಪದ, ಹಂತಿ ಪದ, ಮೋಹರಂ ಪದ ಮತ್ತು ಸುಗಮ ಸಂಗೀತದಲ್ಲಿ ರಾತ್ರಿ ಹಗಲು ಎನ್ನದೆ ಸತತವಾಗಿ ಸಂಗೀತ ಸೇವೆಯಲ್ಲಿ ತೊಡಗಿ ಕೊಂಡಿದ್ದಾರೆ.
ಈಗಾಗಲೇ ಅವರಿಗೆ ಡಾ.ಪಂಡಿತ ಪುಟ್ಟರಾಜ ಗವಾಯಿ ಪುರಸ್ಕಾರ, ಕಲ್ಯಾಣ ಕರ್ನಾಟಕ ಕಲಾರತ್ನ ಪ್ರಶಸ್ತಿ, ಜಿಲ್ಲಾಡಳಿತದ ಕರ್ನಾಟಕ ರಾಜ್ಯೋತ್ಸವ, ವಿಶೇಷ ಚೇತನ ಕಲಾವಿದರಿಂದ ರಾಜ್ಯ ಮಟ್ಟದ ಕಲಾ ಪ್ರತಿಭೋತ್ಸವ, ರಾಜ್ಯ ಮಟ್ಟದ ಜನಪದ ಉತ್ಸವದಲ್ಲಿ ಪ್ರಮಾಣ ಪತ್ರ ಹೀಗೆ ಅನೇಕ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.ಅವರು ಕನ್ನಡ, ಹಿಂದಿ ಹಾಗೂ ಇಗ್ಲೀಷ ಭಾಷೆಯ ಜ್ಞಾನ ಹೊಂದಿದ್ದ ನರಸಿಂಹಲು ರಾಜ್ಯೋತ್ಸವ ಪ್ರಶಸ್ತಿ ಬಂದಿದಕ್ಕೆ ಸಂತೋಷ ವ್ಯಕ್ತಪಡಿಸಿದ್ದು ರಾಜ್ಯ ಸರ್ಕಾರ ನನ್ನಂತಹ ಅಂಧ ಕಲಾವಿದರನ್ನು ಗುರಿತಿಸಿದಕ್ಕೆ ಅಭಿನಂದನೆಗಳು ತಿಳಿಸಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಅಂಧ ಜಾನಪದ ಕಲಾವಿದರಾದ ನರಸಿಂಹಲು ಅವರಿಗೆ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಮನೆ-ಮಠ ಇಲ್ಲದ ಹೀರಾಚಂದ ವಾಘಮಾರೆ ಸದ್ಯ ಭಾಲ್ಕಿ ಪಟ್ಟಣದ ಭಾಲ್ಕೇಶ್ವರ ಮಂದಿರ ಬಳಿಯ ರಾಮದಾಸ ಮಠದಲ್ಲಿ ವಾಸವಾಗಿದ್ದು, ಶಿಕ್ಷಕ ವೃತ್ತಿಯಿಂದ ಹೊರಬಂದು ಪಿಂಚಣಿಗೂ ಕೂಡ ಅರ್ಜಿ ಹಾಕದ ಅವರು, ಸಮಾಜ ಸೇವೆಯಲ್ಲಿ ತೊಡಗಿ ಹೊಟ್ಟೆಗೆ ಒಂದು ತುತ್ತು ಅನ್ನ ಇಲ್ಲದಿದ್ದರೂ ಅಳ್ಳು-ಪುಟಾಣಿ. ಪೆರಳೆ ಹಣ್ಣು ತಿಂದು ದಿನ ಕಳೆಯುತ್ತ ದೇಶದ ಹಾಗೂ ಯುವಕರ ಬಗ್ಗೆ ಚಿಂತನೆ ಮಾಡುತ್ತಲೇ ಇರುವವರು. ಜಿಲ್ಲೆಯಲ್ಲಿ ಬರಗಾಲದ ಸಮಯದಲ್ಲಿ ಜಾನರುವಾರುಗಳಿಗಾಗಿ ಮೇವು, ನೀರು ಪೂರೈಸಬೇಕೆಂದು ಅಂದು ಜಿಲ್ಲೆಗೆ ಬಂದಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು
ನಾನು ಅರ್ಜಿ ಹಾಕಿಲ್ಲ, ನನಗೆ ಪ್ರಶಸ್ತಿ ಮಾಹಿತಿಯೂ ಇಲ್ಲ!: