ಸಿದ್ದಾಪುರ: ಸ್ಥಳೀಯ ನೈಸರ್ಗಿಕ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಸಂಸ್ಥೆಯಲ್ಲಿ ಆರೋಗ್ಯ ಜಾಗೃತಿ ಶಿಬಿರ ಆಯೋಜಿಸಲಾಗಿತ್ತು.ಅಂತಾರಾಷ್ಟ್ರೀಯ ಥ್ರೋಬಾಲ್ ಫೆಡರೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಕ್ಕೂಟದ ಸಹಾಯಕ ಕಾರ್ಯದರ್ಶಿ ಸಂಪೂರ್ಣಾ ಹೆಗಡೆ ಪಾಲ್ಗೊಂಡು ಥ್ರೋಬಾಲ್ ಆಟದ ಮಹತ್ವ ವಿವರಿಸಿದರು. ಥ್ರೋಬಾಲ್ ಹಿಡಿಯುವುದರಿಂದ ಉಂಟಾಗುವ ಆಕ್ಯುಪ್ರೆಷರ್ ನಿಂದಾಗಿ ರಕ್ತ ಸಂಚಾರ ಹೆಚ್ಚುತ್ತದೆ. ಜತೆಗೆ ಮಿದುಳಿನ ಎರಡು ಭಾಗದ ಚಟುವಟಿಕೆ ಉತ್ತೇಜಿಸುವ ಮೂಲಕ ಬುದ್ಧಿಮತ್ತೆ ಸುಧಾರಣೆಯಾಗುತ್ತದೆ ಎಂದರು.
ಪ್ರಾಂಶುಪಾಲೆ ಡಾ.ವಾಣಿ ಜೀರಗಲ್ ಮಾತನಾಡಿ, ಥ್ರೋಬಾಲ್ ಆಡುವುದರಿಂದ ಹಲವು ಹಾರ್ಮೋನ್ ಗಳ ಸಮತೋಲನದಿಂದ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಗೊಳ್ಳುತ್ತದೆ ಎಂದರು.
ಶಿಕ್ಷಣ ಪ್ರಸಾರಕ ಸಮಿತಿಯ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ, ಡೀನ್ ಡಾ. ರಾಘವೇಂದ್ರ ಎಲ್., ಸಿದ್ದಾಪುರ ಎಂ.ಜಿ.ಸಿ. ಕಾಲೇಜಿನ ಪ್ರಾಂಶುಪಾಲ ಜಗನ್ನಾಥ ಮೊಗೇರ, ಥ್ರೋಬಾಲ್ ಆಟಗಾರರಾದ ರೀನಾ ಎಲ್. ಜೆ., ಶ್ರೀರಾಜ್ ಕುಮಾರ್, ರಕ್ಷಿತ್ ಇದ್ದರು.ಸಿದ್ದಾಪುರದ ನೈಸರ್ಗಿಕ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಸಂಸ್ಥೆಯಲ್ಲಿ ಆರೋಗ್ಯ ಜಾಗೃತಿ ಶಿಬಿರ ಜರುಗಿತು.