ಕನ್ನಡಪ್ರಭ ವಾರ್ತೆ, ತಿಪಟೂರುನಮ್ಮ ತಾತ ಡಾ. ರಾಜ್ ಹಾಗೂ ನಮ್ಮ ಕುಟುಂಬದವರೆಲ್ಲರಿಗೂ ತಿಪಟೂರಿನ ಮೇಲೆ ವಿಶೇಷ ಪ್ರೀತಿ, ಗೌರವ ಎಂದು ಡಾ. ರಾಜ್ ಕುಟುಂಬದ ಯುವಕುಡಿ ನಟ ವಿನಯ್ ರಾಜಕುಮಾರ್ ಹೇಳಿದರು.
ಲ್ಪತರು ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾದ ಬಾಗೇಪಲ್ಲಿ ನಟರಾಜು ಮಾತನಾಡಿ ಪುಟ್ಟಸ್ವಾಮಯ್ಯ ಮುತ್ತುರಾಜ್ ಡಾ.ರಾಜ್ಕುಮಾರ್ ರವರ ಮೊಮ್ಮಗ ರಾಘವೇಂದ್ರ ರಾಜಕುಮಾರ್ ರವರ ಮಗ ವಿನಯ್ ರಾಜಕುಮಾರ್, ಡಾ. ರಾಜ್ಕುಮಾರ್ ಕುಟುಂಬವು ಕೇವಲ ಒಂದು ಕುಟುಂಬವಲ್ಲ. ಅದು ಕನ್ನಡ ಚಿತ್ರರಂಗದ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ. ಡಾ.ರಾಜ್ಕುಮಾರ್ ಅವರು ತಮ್ಮ ಅಭಿನಯ ಮತ್ತು ಮೌಲ್ಯಗಳ ಮೂಲಕ ಕನ್ನಡ ಜನರ ಹೃದಯಗಳಲ್ಲಿ ಅಚ್ಚಳಿಯದ ಗುರುತು ಬಿಟ್ಟಿದ್ದಾರೆ. ಈ ಮಹಾನ್ ಪರಂಪರೆಯನ್ನು ಅವರ ಮಕ್ಕಳು, ಮೊಮ್ಮಕ್ಕಳು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದು ಆ ನಿಟ್ಟಿನಲ್ಲಿ ವಿನಯ್ ರಾಜ್ಕುಮಾರ್ ರವರು ಪರಂಪರೆ ಮತ್ತು ಆಧುನಿಕತೆಯನ್ನು ಸಂಯೋಜಿಸಿಕೊಂಡು ತಮ್ಮದೇ ಆದ ಗುರುತನ್ನು ನಿರ್ಮಿಸುತ್ತಿದ್ದಾರೆ ಎಂದು ತಿಳಿಸಿದರು.ಚಿತ್ರ ನಿರ್ದೇಶಕರಾದ ದೇವನೂರು ಚಂದ್ರು ಗ್ರಾಮಾಯಣ ಇವರು ಮಾತನಾಡಿ, ನನ್ನ ಕಾಲೇಜಿನ ದಿನಗಳಲ್ಲಿ ನನ್ನಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ನನ್ನ ಸ್ನೇಹಿತರು ನನಗೆ ಸಹಾಯವನ್ನು ಮಾಡಿ ಇಷ್ಟು ಎತ್ತರಕ್ಕೆ ಬರಲಿಕ್ಕೆ ಅವರೇ ಕಾರಣಕರ್ತರು ಅದರಿಂದ ನೀವುಗಳು ಕೂಡ ಜೀವನದಲ್ಲಿ ಒಳ್ಳೆಯ ಸ್ನೇಹಿತರನ್ನು ಗಳಿಸಿಕೊಂಡು ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕೆಂದು ಹೇಳಿದರು.ಸಮಾರಂಭದಲ್ಲಿ ಕೆವಿಎಸ್ ಉಪಾಧ್ಯಕ್ಷರುಗಳಾದ ಬಾಗೇಪಲ್ಲಿ ನಟರಾಜು, ಬಿ.ಎಸ್.ಉಮೇಶ್, ಜಿ.ಪಿ.ದೀಪಕ್, ಟಿ.ಎಸ್.ಬಸವರಾಜು ಕಾರ್ಯದರ್ಶಿಗಳಾದ ಜಿ.ಎಸ್.ಉಮಾಶಂಕರ್, ಆರ್.ಎಂ.ಸಂಗಮೇಶ್, ಟಿ.ಯು.ಜಗದೀಶಮೂರ್ತಿ, ಹೆಚ್.ಜಿ.ಸುಧಾಕರ್, ಹಾಗೂ ರಾಷ್ಟ್ರೀಯ ಕ್ರೀಡಾಪಟು ಮತ್ತು ಖಜಾಂಚಿಗಳಾದ ಟಿ.ಎಸ್.ಶಿವಪ್ರಸಾದ್, ಪ್ರಾಂಶುಪಾಲರು ಡಾ.ಹೆಚ್.ಸಿ. ಸತೀಶ್ಕುಮಾರ್. ಹಾಗೂ ಕೆ.ಐ.ಟಿ. ದೈಹಿಕ ಶಿಕ್ಷಣ ನಿರ್ದೇಶಕರಾದ ಎಂ.ಎಸ್. ಜಯಂತ್, sಸಾಂಸ್ಕೃತಿಕ ಸಂಯೋಜಕಿ ಡಾ.ಚಂದ್ರಕಲಾ ಇತರರು ಇದ್ದರು.