- ಚಂದ್ರಬಂಡಾ ಗ್ರಾಪಂಗೆ ಸಿಇಒ ಭೇಟಿ ಪರಿಶೀಲನೆಕನ್ನಡಪ್ರಭ ವಾರ್ತೆ ರಾಯಚೂರು
ತಾಲೂಕಿನ ಚಂದ್ರಬಂಡಾ ಗ್ರಾಪಂ ವ್ಯಾಪ್ತಿಯ ನಲ್ಲೋನಿಕುಂಟ ಕೆರೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಲಿಕಾರರು ಕೆಲಸ ನಿರ್ವಹಿಸುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ವೀಕ್ಷಣೆ ಮಾಡಿದರು. ನಂತರ ತಾಪಂ ಇಒ ರವರೊಂದಿಗೆ ಮಾತನಾಡಿ, ಕಾಮಗಾರಿ ಸ್ಥಳದಲ್ಲಿ ಒದಗಿಸಿರುವ ಕುಡಿಯುವ ನೀರು, ನೆರಳಿನ ಸೌಲಭ್ಯಗಳ ಬಗ್ಗೆ ಚರ್ಚೆ ಮಾಡಿದರು.
ಮಹಿಳಾ ಕೂಲಿಕಾರರೊಂದಿಗೆ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಿದರು. ಕೂಲಿಕಾರರ ಮಕ್ಕಳ ರಕ್ಷಣೆಗಾಗಿ ಗ್ರಾಪಂ ಹಂತದಲ್ಲಿ ಶಿಶುಪಾಲನಾ ಕೇಂದ್ರ ಕೂಸಿನ ಮನೆ ತೆರೆಯಲಾಗಿದೆ. ಅದರ ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಿದರು. ನಂತರ ಕೆರೆ ಕಾಮಗಾರಿ ಕಡತದ ದಾಖಲೆ ಪರಿಶೀಲನೆ ನಡೆಸಿದರು.ಎಲ್ಲ್ಲ ಕೂಲಿಕಾರರಿಗೆ ನಿರಂತರವಾಗಿ ಕೆಲಸ ಒದಗಿಸಬೇಕು ಮತ್ತು ಎನ್ಎನ್ಆರ್ಗಳ ಸೇವ್ ಮಾಡುವಲ್ಲಿ ವಿಳಂಭವಾಗಬಾರದು. ಅದೇ ರೀತಿ ಕೂಲಿಕಾರರ ಹಾಜರಾತಿ ಎನ್ಎಮ್ಎಮ್ಎಸ್ ಆ್ಯಪ್ನಲ್ಲಿ ತೆಗೆದುಕೊಂಡು ಶೇ.100ರಷ್ಟು ಪ್ರಗತಿ ಸಾಧಿಸುವಂತೆ ಕ್ರಮವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.