ಹೊಳೆಹೊನ್ನೂರು: ಸಮೀಪದ ಕೂಡ್ಲಿ ಗ್ರಾಮದಿಂದ ಹೊಳೆಹೊನ್ನೂರಿಗೆ ಬೈಕ್ನಲ್ಲಿ ಗೋಮಾಂಸ ಸಾಗಾಟ ಮಾಡುವಾಗ ಹೊಳೆಹೊನ್ನೂರು ಪೊಲೀಸ್ ಠಾಣೆ ಪಿಐ ಲಕ್ಷ್ಮಿಪತಿ ಮತ್ತವರ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ತಪಾಸಣೆಯ ವೇಳೆ 7 ಕೆಜಿ ಗೋಮಾಂಸ ಪತ್ತೆಯಾಗಿದೆ ಎಲ್ಲಿಂದ ತಂದಿರೋದು ಎಂದು ಪರಿಶೀಲಿಸಿದ ಪಿಐ ಲಕ್ಷ್ಮಿಪತಿ ತಂಡಕ್ಕೆ ಮತ್ತೊಂದು ಮಾಹಿತಿ ದೊರೆತಿದೆ. ಮಾಂಸವನ್ನು ಸೈಫ್ ಅಲಿ ಖಾನ್ ಮನೆಯಿಂದ ಮಾಂಸ ಖರೀದಿಸಲಾಗಿದೆ ಎಂದು ಶೋಯೆಬ್ ತಪಾಸಣೆ ವೇಳೆ ಪೊಲೀಸರಿಗೆ ಬಾಯಿಬಿಟ್ಟಿದ್ದಾನೆ.
ಸೈಫ್ ಅಲಿ ಖಾನ್ ಮನೆ ಮೇಲೂ ಪಿಎಸ್ಐ ರಮೇಶ ಅವರ ನೇತೃತ್ವದ ತಂಡ ದಾಳಿ ನಡೆಸಿದೆ. ದಾಳಿಯಲ್ಲಿ 30 ಕೆಜಿಗೂ ಹೆಚ್ಚು ಗೋಮಾಂಸ ಪತ್ತೆಯಾಗಿದೆ. ಶೋಯೆಬ್ ಹಾಗೂ ಕಸಬ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಿದ್ದಾರೆ.