ಕನ್ನಡಪ್ರಭ ವಾರ್ತೆ ಮೈಸೂರು
ನಗರದ ನಂಜರಾಜ ಬಹದ್ದೂರ್ ಛತ್ತದಲ್ಲಿ ಸಹಜ ಸಮೃದ್ಧ, ದೇಸಿ ಸೀಡ್ಸ್ ಪ್ರಡ್ಯೂಸರ್ ಕಂಪನಿ ಮತ್ತು ತೋಟಗಾರಿಕೆ ಇಲಾಖೆ– ಕಿಸಾನ್ ಮಾಲ್ ಆಶ್ರಯದಲ್ಲಿ ನಡೆದ ಹಲಸಿನ ಹಬ್ಬದ ಅಂಗವಾಗಿ ಭಾನುವಾರ ಆಯೋಜಿಸಿದ್ದ ‘ನಾ ಕಂಡಂತೆ ಹಲಸು’ ಚಿತ್ರಕಲಾ ಸ್ಪರ್ಧೆಯ ಮಕ್ಕಳಿಗೆ ಅವರು ಬಹುಮಾನ ವಿತರಿಸಿದರು.
ಮಕ್ಕಳಿಗೆ ಹಲಸಿನ ಬಗ್ಗೆ ಅರಿವು ಮೂಡಿಸಿ ಅವರಿಗೆ ನಮ್ಮ ಸ್ಥಳೀಯ ಸಸ್ಯ ಸಂಪತ್ತಿನ ಪರಿಚಯ ಮಾಡಿಕೊಡುತ್ತಿರುವುದು, ಮೇಳಗಳನ್ನು ಆಯೋಜಿಸುವ ಮೂಲಕ, ಗ್ರಾಹಕರಲ್ಲಿ ಹಲಸಿನ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಮಾದರಿಯಾಗಿದೆ ಎಂದು ಅವರು ಶ್ಲಾಘಿಸಿದರು.ಈ ಚಿತ್ರಕಲಾ ಸ್ಪರ್ಧೆಯ 5 ರಿಂದ 9 ವರ್ಷದ ವಿಭಾಗದಲ್ಲಿ ಎಸ್. ಮೌಲ್ಯ( ಪ್ರಥಮ), ಎಸ್.ಕೆ. ರಿಷಿಕಾ ನಂದಿ (ದ್ವಿತೀಯ) ಮತ್ತು ಎ. ವಿಹಾನ್ (ತೃತೀಯ) ಬಹುಮಾನ ಗಳಿಸಿದರು. 10 ರಿಂದ 12 ವರ್ಷದ ವಿಭಾಗದಲ್ಲಿ ಆದ್ಯ ಎ. ಶ್ರೀವತ್ಸ (ಪ್ರಥಮ), ಧೀರಜ್ (ದ್ವಿತೀಯ) ಮತ್ತು ಗೋಕುಲ್ ಆರ್ಯನ್ (ತೃತೀಯ) ಬಹುಮಾನ ಗಳಿಸಿದರು.
ಭರತನಾಟ್ಯ ಕಲಾವಿದರಾದ ಪೂಜಶ್ರೀ ಮತ್ತು ಎಸ್. ವರಮಹಾಲಕ್ಷಿ ಅವರಿಂದ ಭರತನಾಟ್ಯ ಪ್ರದರ್ಶನ ಜರುಗಿತು. ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ. ಮಂಜುನಾಥ ಅಂಗಡಿ, ಸಹಜ ಸಮೃದ್ಧದ ನಿರ್ದೇಶಕ ಜಿ. ಕೃಷ್ಣಪ್ರಸಾದ್ ಮೊದಲಾದರು ಇದ್ದರು.
ಬಾಕ್ಸ್...
ಎರಡು ದಿನಗಳ ಹಲಸಿನ ಹಬ್ಬ ಜನರನ್ನು ಆಕರ್ಷಿಸಲು ಯಶಸ್ವಿಯಾಯಿತು. ಆರು ಸಾವಿರಕ್ಕೂ ಹೆಚ್ಚಿನ ಜನರು ಮೇಳಕ್ಕೆ ಭೇಟಿ ನೀಡಿದರು. ಕೆಂಪಲಸು ತಳಿಗಳಾದ ಸಿದ್ದು, ಮತ್ತು ಶಂಕರ ತಳಿಗಳ ಒಂದು ಸಾವಿರ ಗಿಡಗಳು ಮಾರಾಟವಾದವು. ಕರ್ನಾಟಕದ ವಿವಿಧ ಭಾಗಗಳಿಂದ ಬಂದಿದ್ದ ಹಲಸು ಬೆಳೆಗಾರರು ತಂದಿದ್ದ ಹಲಸು ಮಾರಾಟವಾಯಿತು. ಕೆಂಪು ಬಣ್ಣದ ಚಂದ್ರ ಹಲಸು ಕೊಳ್ಳಲು ಗ್ರಾಹಕರು ಮುಗಿಬಿದ್ದರು. ಹಲಸಿನ ಮೌಲ್ಯವರ್ಧಿತ ಪದಾರ್ಥಗಳನ್ನು ಜನರು ಆಸಕ್ತಿಯಿಂದ ಖರೀದಿ ಮಾಡಿದ್ದು ವಿಶೇಷ. ದಶೇರಿ ಮತ್ತು ಇತರೆ ಸಾವಯವ ಮಾವು ಮಾರಾಟಕ್ಕೂ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಎರಡು ದಿನಗಳ ಮೇಳದಲ್ಲಿ 30 ಲಕ್ಷದ ವಹಿವಾಟು ನಡೆಯಿತು.