ಕನ್ನಡಪ್ರಭ ವಾರ್ತೆ ಮಂಡ್ಯ
ನಿತ್ಯ ಸಚಿವ ಕೆ.ವಿ.ಶಂಕರಗೌಡರವರು ಸ್ಥಾಪಿಸಿರುವ ಆರ್ಎಪಿಸಿಎಂಎಸ್ ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಾಜಿ ಸಚಿವ ಸಿ.ಎಸ್ .ಪುಟ್ಟರಾಜು ಜೊತೆ ಆಗಮಿಸಿ ನಿರ್ಮಿತಿ ಕೇಂದ್ರ ಸಿದ್ಧಪಡಿಸಿರುವ ಯೋಜನಾ ವರದಿಯನ್ನು ಪರಿಶೀಲಿಸಿ ಸ್ಥಳದಲ್ಲೇ ಬೇಕಾದ ಅಗತ್ಯ ಹಣಕಾಸು ನೆರವನ್ನು ನೀಡುವುದಾಗಿ ಪ್ರಕಟಿಸಿದರು.
ಸಂಘದ ಅಧ್ಯಕ್ಷ ಯು.ಸಿ.ಶೇಖರ್ ಮಾತನಾಡಿ, ಶ್ರೀ ನಿರ್ಮಲಂದನಾಥ ಸ್ವಾಮೀಜಿಯವರ ಆಸೆಯಂತೆ, ಕರ್ನಾಟಕ ಸಂಘದ ಜಯಪ್ರಕಾಶ್ ಗೌಡರ ಅಭಿಲಾಷೆಯಂತೆ, ಆಡಳಿತ ಮಂಡಳಿಯ ನಿರೀಕ್ಷೆಯಂತೆ ಅತ್ಯಾಧುನಿಕವಾಗಿ ನವೀಕರಿಸುವ ಸಲುವಾಗಿ ಕೇಂದ್ರ ಸಚಿವ ಕುಮಾರಸ್ವಾಮಿಯವರು, ಮಾಜಿ ಸಚಿವ ಪುಟ್ಟರಾಜು ಜೊತೆ ಸೇರಿ ಪರಿಶೀಲನೆ ನಡೆಸಿದ್ದಾರೆ ಎಂದರು.ಮಾಜಿ ಸಚಿವ ಪುಟ್ಟರಾಜುರವರು ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಯೋಜನೆಗೆ ಹಣಕಾಸಿನ ನೆರವು ಕೋರಿದ್ದರು. ಅದರಂತೆ ಕುಮಾರಸ್ವಾಮಿ ಅವರನ್ನು ಕರೆದುಕೊಂಡು ಬಂದು ಸ್ಥಳ ಪರಿಶೀಲಿಸಿ ಯೋಜನೆಗೆ ಹಸಿರು ನಿಶಾನೆ ತೋರಿಸುವುದರಲ್ಲಿ ಯಶಸ್ವಿಯಾದರು ಎಂದು ನುಡಿದರು.