ಜನಸಾಮಾನ್ಯರ ಉನ್ನತಿಗೆ ಸಂಘಗಳು ಆಧಾರಸ್ತಂಭ

KannadaprabhaNewsNetwork |  
Published : Jan 31, 2025, 12:47 AM IST
ಲೋಕಾಪುರ ಪ್ರಗತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಹಾರೂಗೇರಿ, ಲೋಕಾಪುರ ಶಾಖೆಯನ್ನು ಐ.ಆರ್.ಮಠಪತಿ, ಬಸವಪ್ರಭು ಸ್ವಾಮೀಜಿ, ತಿಪ್ಪಣ್ಣ ಪಾಟೀಲ, ಬಿ.ವಿ.ಬಿರಾದಾರ ಹಾಗೂ ಆಡಳಿತ ಮಂಡಳಿ ಸರ್ವಸದಸ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಲೋಕಾಪುರದಲ್ಲಿ ಆರಂಭವಾದ ಶಾಖೆಯು ಇಲ್ಲಿನ ರೈತರಿಗೆ ಮತ್ತು ನಿರ್ಗತಿಕರಿಗೆ, ವ್ಯಾಪಾರಸ್ಥರಿಗೆ ಆರ್ಥಿಕ ನೆರವು ನೀಡಲು ಉಪಯುಕ್ತವಾಗಲಿದೆ

ಕನ್ನಡಪ್ರಭ ವಾರ್ತೆ ಲೋಕಾಪುರ

ಸಹಕಾರ ಮತ್ತು ಸೌಹಾರ್ದ ಕ್ಷೇತ್ರದಲ್ಲಿ ಸಹಕಾರ, ಸಹಯೋಗ, ಸೌಹಾರ್ದತೆ ಭಾವನೆಗಳಿರುತ್ತವೆ. ಸಹಕಾರ, ಸೌಹಾರ್ದ ಸಂಸ್ಥೆಗಳು ನಿಸ್ವಾರ್ಥದಿಂದ ಕೆಲಸ ಮಾಡುತ್ತಿರುವುದರಿಂದ ಇಂತಹ ಸಂಸ್ಥೆಗಳು ಜನಸಾಮಾನ್ಯರ ಉನ್ನತಿಗೆ ಆಧಾರಸ್ತಂಭವಾಗುತ್ತಿವೆ ಎಂದು ಹಾರೋಗೇರಿ ಶರಣ ವಿಚಾರ ವಾಹಿನಿ ಅಧ್ಯಕ್ಷ ಐ.ಆರ್.ಮಠಪತಿ ಹೇಳಿದರು.

ಪಟ್ಟಣದಲ್ಲಿ ಹಾರೂಗೇರಿ ಪ್ರಗತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನೂತನ ೮ನೇ ಶಾಖೆಯನ್ನು ಲೋಕಾಪುರ ಪಟ್ಟಣದಲ್ಲಿ ಉದ್ಘಾಟಿಸಿ, ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಪ್ರಗತಿ ಸೌಹಾರ್ದ ಸಂಘವು ವಿವಿಧ ಕ್ಷೇತ್ರಗಳಲ್ಲಿ ಜನ ಸಾಮಾನ್ಯರಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅದರ ಭಾಗವಾಗಿ ಲೋಕಾಪುರದಲ್ಲಿ ಆರಂಭವಾದ ಶಾಖೆಯು ಇಲ್ಲಿನ ರೈತರಿಗೆ ಮತ್ತು ನಿರ್ಗತಿಕರಿಗೆ, ವ್ಯಾಪಾರಸ್ಥರಿಗೆ ಆರ್ಥಿಕ ನೆರವು ನೀಡಲು ಉಪಯುಕ್ತವಾಗಲಿದೆ ಎಂದರು.

ಕಲ್ಮಡ ಲಕ್ಷಾನಟ್ಟಿಯ ಬಸವಪ್ರಭು ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಸಹಕಾರ ವಲಯವು ಪ್ರಸ್ತುತ ಜನರ ಬಹುತೇಕ ಬೇಡಿಕೆಗಳನ್ನು ಪೂರೈಸುವ ಮಹತ್ವದ ವ್ಯವಸ್ಥೆಯಾಗಿ ಕೆಲಸ ಮಾಡುತ್ತಿದೆ. ಸಹಕಾರ ಕ್ಷೇತ್ರದ ಭಾಗವಾಗಿ ಎರಡು ದಶಕದಿಂದ ಆರಂಭವಾದ ಸೌಹಾರ್ದ ವ್ಯವಸ್ಥೆ ಇದೀಗ ಹೆಚ್ಚಿನ ವೇಗ ಪಡೆದುಕೊಂಡಿದೆ ಎಂದರು.

ಸಂಘದ ಸಂಸ್ಥಾಪಕ ಬಿ.ವಿ.ಬಿರಾದಾರ ಮಾತನಾಡಿ, ಅಲ್ಪಾವಧಿಯಲ್ಲಿ ಸಂಸ್ಥೆ ಅಧಿಕ ಠೇವಣೆ ಹೊಂದಿದ್ದು, ಉತ್ತಮ ಬೆಳವಣೆಗೆಯತ್ತ ಸಾಗುತ್ತಿದೆ. ವಿಶೇಷವಾಗಿ ರೈತರಿಗೆ ಸಂಸ್ಥೆ ಹೆಚ್ಚಿನ ಆದ್ಯತೆ ನೀಡುತ್ತಿದೆ,. ಲೋಕಾಪುರ ಶಾಖೆಯೂ ಕೂಡ ಎಲ್ಲರ ನೆರವಿನಿಂದ ಉತ್ತಮ ಬೆಳವಣೆಗೆ ಕಾಣಲಿದೆ ಎಂಬ ವಿಶ್ವಾಸವಿದೆ. ವಿವಿಧ ಸ್ಥಳಗಳಲ್ಲಿರುವ ಸಂಘದ ಶಾಖೆಗಳು ಉತ್ತಮ ಏಳ್ಗೆ ಕಂಡಿದ್ದು ಬಡವರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲೆನ್ನುವ ಉದ್ದೇಶದಿಂದ ಈ ಸಹಕಾರಿ ಸಂಘವನ್ನು ಆರಂಭಿಸಲಾಗಿದೆ ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಲು ಮನವಿ ಮಾಡಿದರು.

ಸದಸ್ಯರ ಠೇವಣೆಗಳನ್ನು ಗಣ್ಯರು ಈ ವೇಳೆ ವಿತರಿಸಿದರು. ವೇದಿಕೆಯಲ್ಲಿ ಡಾ. ಎಂ.ವೈ.ಕಟ್ಟಿ, ಶಾಖಾ ಆಡಳಿತ ಮಂಡಳಿ ಅಧ್ಯಕ್ಷ ತಿಪ್ಪಣ್ಣ ಪಾಟೀಲ, ಗಿರೀಶ ಕೊಪ್ಪದ, ಲೋಕಣ್ಣ ಪಾಟೀಲ ವೆಂಕಣ್ಣ ಕತ್ತಿ, ವೆಂಕಪ್ಪ ಕೆಂಚರಡ್ಡಿ, ನಿಂಗಣ್ಣ ಮುದ್ದಾಪುರ, ಹಣಮಂತ ಚಿಚಖಂಡಿ, ಪಾಂಡು ಅರಕೇರಿ, ಸದಾಶಿವ ಹಣಮನ್ನವರ, ಹಣಮಮತ ಪಡಮೂಲಿ, ಭೀಮಪ್ಪ ಕೆಂಚರಡ್ಡಿ, ಬಾಲನಗೌಡ ಪಾಟೀಲ, ಶಾಖಾ ಸಲಹಾ ಮಂಡಳಿಯ ವೆಂಕಣ್ಣ ಪಾಟೀಲ, ರವಿ ಪಾಟೀಲ, ಪ್ರಲ್ಹಾದ ಶಿರೂರ, ಯಲ್ಲಪ್ಪ ಕಿವಡಿ, ಭೀಮನಗೌಡ ಪಾಟಿಲ, ನೈರುತ್ಯ ಪರಪ್ನವರ, ಬಸಲಿಂಗಪ್ಪ ಕಟ್ಟಿ ಹಾಗೂ ಶಾಖಾ ವ್ಯವಸ್ಥಾಪಕ ಮಂಜುನಾಥ ಪಾಟೀಲ ಆಡಳಿತ ಮಂಡಳಿ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ
ಕಸಕ್ಕೆ ಬೆಂಕಿ: ಹೊಗೆಯಿಂದ ಮನೆಯಲ್ಲಿ ಉಸಿರಾಡಲು ಆಗುತ್ತಿಲ್ಲ:ನಟಿ ಐಂದ್ರಿತಾ