ಕನ್ನಡಪ್ರಭ ವಾರ್ತೆ ತುಮಕೂರು
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಉಪ್ಪಾರ ಸಮಾಜದ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ನಗರದ ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಡೆದ ಭಗೀರಥ ಮಹರ್ಷಿ ಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭಗೀರಥ ಮಹರ್ಷಿ ಜಯಂತಿಯ ವೇದಿಕೆಯು ಉಪ್ಪಾರ ಸಮಾಜದ ಸಂಘಟನೆಗೆ ಪ್ರೇರಣೆಯಾಗಲಿ, ಸಮಾಜದ ಸಂಘಟನೆಗೆ ಎಲ್ಲರೂ ಸಂಕಲ್ಪ ಮಾಡಬೇಕು. ಸಂಘಟನೆ ಸಮಾಜದ ಬೆಳವಣಿಗೆಗೆ ಸಹಾಯಕವಾಗುತ್ತದೆ. ವಿದ್ಯಾವಂತರು, ಆರ್ಥಿಕವಾಗಿ ಅನುಕೂಲ ಇರುವವರು ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ, ಮಾರ್ಗದರ್ಶನ ನೀಡಿ, ಅವರು ಉತ್ತಮ ಬದುಕು ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ. ಸಮಾಜವನ್ನು ಯಾವ ರೀತಿಯಲ್ಲಿ ಮುಂದೆ ತರಬೇಕು ಎಂಬ ದೂರದೃಷ್ಟಿ ಇಟ್ಟುಕೊಂಡು ಮುನ್ನಡೆಯಬೇಕು ಎಂದು ಶಾಸಕರು ಸಲಹೆ ನೀಡಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ಗುರಿ ಮುಟ್ಟುವ ವಿಚಾರದಲ್ಲಿ ಭಗೀರಥದ ಸಮಾಜ ಸಂದೇಶ ನೀಡಿದೆ. ಛಲ ಬಿಡದೇ ಸತತ ಪ್ರಯತ್ನದ ಮೂಲಕ ಗುರಿ ಸಾಧಿಸುವುದನ್ನು ‘ಭಗೀರಥ ಪ್ರಯತ್ನ’ ಎಂದು ಕರೆಯುತ್ತಾರೆ, ಈ ಮಾತು ಪ್ರಸಿದ್ಧವಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್, ತಾಂತ್ರಿಕ ಮೇಲ್ವಿಚಾರಕ ಸುರೇಶ್ಕುಮಾರ್, ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ಸಿ.ಎಸ್. ಮಂಜುನಾಥ್, ಉಪಾಧ್ಯಕ್ಷ ಎಚ್.ಆರ್.ಸತೀಶ್, ಪ್ರಧಾನ ಕಾರ್ಯದರ್ಶಿ ಬಿ.ನಾಗರಾಜು, ಭಗೀರಥ ಬ್ಯಾಂಕ್ ಅಧ್ಯಕ್ಷ ಇ.ಲೋಕೇಶ್, ನಿರ್ದೇಶಕರಾದ ಮೂಡಲಗಿರಿ, ಗುಂಡಗಲ್ ರಾಮಚಂದ್ರ, ಮುಖಂಡರಾದ ಡಾ.ನಾಗೇಶ್ಕುಮಾರ್, ಕೃಷ್ಣಪ್ಪ, ಚೆನ್ನಿಗರಾಯಪ್ಪ, ರಮೇಶ್, ಎಸ್.ನಾಗಪ್ಪ, ಅನಿಲ್, ಮೆಳೆಕೋಟೆ ಹರೀಶ್, ವಿನಯ್ ಮೊದಲಾದವರು ಭಾಗವಹಿಸಿದ್ದರು.