ಕಲ್ಲು ಗಣಿಗಾರಿಕೆಗೆ ಸ್ಫೋಟಕಗಳ ಬಳಕೆ

KannadaprabhaNewsNetwork |  
Published : Feb 22, 2024, 01:50 AM IST
ಫೋಟೋ 21ಮಾಗಡಿ1: ಮಾಗಡಿ ತಾಲೂಕಿನ ಹನುಮಾಪುರ ಸವರ್ೆ ನಂಬರ್ ಗೆ ಸೇರಿರುವ ಮೊಟ್ಟಗೌಡನ ಪಾಳ್ಯದಿಂದ ಕುರುಪಾಳ್ಯಕ್ಕೆ ಹಾದು ಹೋಗುವ ಖುಷ್ಕಿ ಭೂಮಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು.ಪೋಟೋ 21ಮಾಗಡಿ2 : ನಿಷೇಧಿತ ಸ್ಪೋಟಕಗಳನ್ನು ಕಲ್ಲು ಸ್ಫೋಟ ಮಾಡುತ್ತಿಸಲು ಬಳಸುತ್ತಿರುವ ಮಾಲೀಕರು.ಪೋಟೋ 21ಮಾಗಡಿ3 : ಕಲ್ಲು ಸ್ಪೋಟ ಮಾಡಲು ಡ್ರಿಲ್ ಮಿಷಿನ್ ಬಳಕೆ ಮಾಡಿರುವುದು | Kannada Prabha

ಸಾರಾಂಶ

ಮಾಗಡಿ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುಮತಿ ಪಡೆಯದೆ ಖುಷ್ಕಿ ಭೂಮಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗೆ ನಿಷೇಧಿತ ಸ್ಫೋಟಕಗಳ ಬಳಕೆಯಿಂದ ಗ್ರಾಮಸ್ಥರಿಗೆ ತೊಂದರೆಯಾಗಿದ್ದು, ಆತಂಕಕ್ಕೆ ಒಳಗಾಗಿದ್ದಾರೆ.

ಮಾಗಡಿ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುಮತಿ ಪಡೆಯದೆ ಖುಷ್ಕಿ ಭೂಮಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗೆ ನಿಷೇಧಿತ ಸ್ಫೋಟಕಗಳ ಬಳಕೆಯಿಂದ ಗ್ರಾಮಸ್ಥರಿಗೆ ತೊಂದರೆಯಾಗಿದ್ದು, ಆತಂಕಕ್ಕೆ ಒಳಗಾಗಿದ್ದಾರೆ.

ತಾಲೂಕಿನ ಹನುಮಾಪುರ ಸರ್ವೆ ನಂಬರ್‌ಗೆ ಸೇರಿದ ಮೋಟೇಗೌಡನ ಪಾಳ್ಯದಿಂದ ಕುರುಪಾಳ್ಯಕ್ಕೆ ಹಾದು ಹೋಗುವ ರಸ್ತೆಯಲ್ಲಿರು ಖುಷ್ಕಿ ಜಮೀನಿನಲ್ಲಿ ನಿಷೇಧಿತ ಸ್ಫೋಟಕ ಬಳಸಿ ದೊಡ್ಡ ದೊಡ್ಡ ಬಂಡೆಗಳನ್ನು ಸಿಡಿಸಲು ಯಾವುದೇ ಅನುಮತಿ ಇಲ್ಲದೆ ರಾತ್ರಿ ವೇಳೆ ನಿಷೇಧಿತ ಸ್ಫೋಟಕಗಳನ್ನು ಸ್ಫೋಟಿಸುತ್ತಿದ್ದಾರೆ. ಇದರಿಂದ ಗ್ರಾಮಸ್ಥರು ಮತ್ತು ಸಾಕು ಪ್ರಾಣಿಗಳಿಗೆ ತೊಂದರೆಯಾಗುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಾಗಲಿ, ಸ್ಥಳೀಯ ಪೊಲೀಸರಾಗಲಿ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ನಿರ್ಭಯವಾಗಿ ದೊಡ್ಡ ಬಂಡೆಗಳನ್ನು ಸಿಡಿಸಿ ಸಾಗಾಣಿಕೆ ಮಾಡುತ್ತಿದ್ದಾರೆ. ಸ್ಥಳೀಯರು ಈ ಬಗ್ಗೆ ಪೊಲೀಸ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮಾಹಿತಿ ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಗಣಿಗಾರಿಕೆಗೆ ಅನ್ಯರಾಜ್ಯಗಳ ಕಾರ್ಮಿಕರ ಬಳಕೆ:

ಕಲ್ಲು ಗಣಿಗಾರಿಕೆಗೆ ಅನ್ಯರಾಜ್ಯಗಳ ನುರಿತ ಕಾರ್ಮಿಕರನ್ನು ಬಳಸಿಕೊಂಡು ರಾತ್ರಿ ವೇಳೆ ಯಾವುದೇ ಮುಂಜಾಗೃತಾ ಕ್ರಮ ವಹಿಸದೆ ನಿಷೇಧಿತ ಸ್ಫೋಟಕಗಳನ್ನು ಬಳಸುತ್ತಿದ್ದಾರೆ. ಕಲ್ಲು ಸ್ಫೋಟವಾದ ಬಳಿಕ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ವಾಪಸ್‌ ಕಳುಹಿಸಿ ಸ್ಥಳೀಯ ಜೆಸಿಬಿ ಯಂತ್ರಗಳ ಮೂಲಕ ಬಂಡೆಗಳನ್ನು ಬೇರ್ಪಡಿಸುವ ಕೆಲಸ ಮಾಡುತ್ತಿದ್ದಾರೆ.

ಬೆಂಗಳೂರಿಗೆ ಸಮೀಪ ಇರುವ ಮಾಗಡಿ ತಾಲೂಕಿನಲ್ಲಿ ರೈತರಿಂದ ಕಡಿಮೆ ಬೆಲೆಗೆ ಜಮೀನುಗಳನ್ನು ಖರೀದಿ ಮಾಡಿ ಜಮೀನಲ್ಲಿರುವ ಬಂಡೆಗಳನ್ನು ತೆರವುಗೊಳಿಸಲು ನಿಷೇಧಿತ ಸ್ಫೋಟಕಗಳನ್ನು ಬಳಸಿ ಬಂಡೆಗಳನ್ನು ತೆಗೆಯುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದೆ.ಫೋಟೋ 21ಮಾಗಡಿ1: ಮಾಗಡಿ ತಾಲೂಕಿನ ಹನುಮಾಪುರ ಸಮೀಪದ ಮೊಟ್ಟಗೌಡನ ಪಾಳ್ಯದಿಂದ ಕುರುಪಾಳ್ಯಕ್ಕೆ ಹಾದು ಹೋಗುವ ಖುಷ್ಕಿ ಜಮೀನಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ.ಪೋಟೋ 21ಮಾಗಡಿ2 : ನಿಷೇಧಿತ ಸ್ಫೋಟಕಗಳಿಂದ ಬಂಡೆಗಳನ್ನು ಸ್ಫೋಟಿಸುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿಯಲ್ಲಿ ಹೊರ ದೇಶಗಳೊಂದಿಗೆ ಪೈಪೋಟಿ ನಡೆಸಿ
ಕ್ರೀಡಾ ಸಾಧಕಿ ಶಗುನ್‌ಗೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಸನ್ಮಾನ