ಶಾಲಾ ಕಾಲೇಜುಗಳಲ್ಲಿ ವಚನ ಇತಿಹಾಸ ಬೋಧಿಸಬೇಕು: ಕೆ.ಹರೀಶ್ ಗೌಡ

KannadaprabhaNewsNetwork |  
Published : Feb 11, 2026, 01:15 AM IST
5 | Kannada Prabha

ಸಾರಾಂಶ

ಸಮಾಜದಲ್ಲಿ ವಚನಕಾರರ ಸಂದೇಶವನ್ನು ಇರಿಸಿಕೊಂಡು ಜೀವನ ನಡೆಸಬೇಕು. ಸಮಾಜ ಉತ್ತಮವಾದ ರೀತಿಯಲ್ಲಿ ಇರಬೇಕಾದರೆ ಹಿಂದಿನ ಶಿವಶರಣ ವಚನಗಳ ಸಂದೇಶ ಮಹತ್ವವನ್ನು ತಿಳಿದು ಬದುಕಿನಲ್ಲಿ ಮಾನಸಿಕವಾಗಿ ಸದೃಢವಾಗಿ ತಮ್ಮ ಕಾಯಕವನ್ನು ನಡೆಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ವಚನ ಇತಿಹಾಸವು ಮರೆಯಾಗುತ್ತಿದ್ದು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಚನ ಇತಿಹಾಸವನ್ನು ಬೋಧಿಸಬೇಕು ಎಂದು ಶಾಸಕ ಕೆ.ಹರೀಶ್ ಗೌಡ ತಿಳಿಸಿದರು.

ನಗರದ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತ ಇಲಾಖೆ, ಮೈಸೂರು ಮಹಾನಗರ ಪಾಲಿಕೆಯು ಮಂಗಳವಾರ ಆಯೋಜಿಸಿದ್ದ ಕಾಯಕ ಶರಣರ ಜಯಂತಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಸಮಾಜದ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಶಿವ ಶರಣರು ತಮ್ಮ ತಮ್ಮ ವಚನಗಳ ಮೂಲಕ ಪ್ರಯತ್ನಿಸಿದರು. ಸಮಾಜದಲ್ಲಿ ಮುಂದಿನ ಪೀಳಿಗೆಗೆ ಅವರ ವಿಚಾರಧಾರೆ ಮತ್ತು ಸಮಾಜದ ಅಸಮಾನತೆ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಸಮಾಜದಲ್ಲಿ ವಚನಕಾರರ ಸಂದೇಶವನ್ನು ಇರಿಸಿಕೊಂಡು ಜೀವನ ನಡೆಸಬೇಕು. ಸಮಾಜ ಉತ್ತಮವಾದ ರೀತಿಯಲ್ಲಿ ಇರಬೇಕಾದರೆ ಹಿಂದಿನ ಶಿವಶರಣ ವಚನಗಳ ಸಂದೇಶ ಮಹತ್ವವನ್ನು ತಿಳಿದು ಬದುಕಿನಲ್ಲಿ ಮಾನಸಿಕವಾಗಿ ಸದೃಢವಾಗಿ ತಮ್ಮ ಕಾಯಕವನ್ನು ನಡೆಸಬೇಕು ಎಂದರು.

ಸಮಾಜದಲ್ಲಿ ಏಳು ಬೀಳು:

ಶಾಸಕ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್ ಮಾತನಾಡಿ, ಇತಿಹಾಸವನ್ನು ತಿದ್ದುಪಡಿ ಮಾಡಲು ಯಾರಿಗೂ ಶಕ್ತಿ ಇಲ್ಲ, ಅದನ್ನು ಅರ್ಥ ಮಾಡಿಕೊಳ್ಳಬೇಕು. ಭಾಷೆ, ಧರ್ಮ, ಜಾತಿ ಇವುಗಳನ್ನು ಸಮಾಜದಲ್ಲಿ ಸಮಸ್ಯೆಗಳನ್ನಾಗಿ ನಾವೇ ಸೃಷ್ಟಿಸಿಕೊಂಡಿದ್ದೇವೆ. ಸಮಾಜದಲ್ಲಿ ಏಳು ಬೀಳುಗಳನ್ನು ತಿಳಿದು ಜೀವನ ನಡೆಸುವುದು ಅತ್ಯಗತ್ಯ ಎಂದು ತಿಳಿಸಿದರು.

ಇಂದು ನಾವು ಸಮಾಜದಲ್ಲಿ ಬೇರೆಯವರ ಪೈಪೋಟಿಗೆ ಜೀವನ ಮಾಡುತ್ತಿದ್ದೇವೆ. ಮಾನವ ಅತಿಯಾದ ದುರಾಸೆಗಳಿಂದ ತುಂಬಿದ್ದಾನೆ. ಜನರು ಅವಶ್ಯಕತೆಗೆ ತಕ್ಕಂತೆ ಅನುಗುಣವಾಗಿ ಬದುಕನ್ನು ಕಟ್ಟಿಕೊಳ್ಳಬೇಕು. ಸಂವಿಧಾನದ ಅಂಶಗಳನ್ನು ಇರಿಸಿಕೊಂಡು ಎಲ್ಲರೂ ಜೀವನದಲ್ಲಿ ಮುಂದೆ ಬರಬೇಕು. ಹುಟ್ಟು ದೇವರ ಸೃಷ್ಟಿ. ಹುಟ್ಟಿದ ಮೇಲೆ ಜೀವನ ಹೇಗೆ ನಡೆಸಿಕೊಂಡು ಹೋಗುತ್ತೇವೆ ಎಂಬುದು ಬಹಳ ಮುಖ್ಯವಾಗುತ್ತದೆ ಎಂದರು.

ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ಕಾಯಕ ಸಮಾಜ ಎಂದರೆ ಜೀವನದಲ್ಲಿ ಸುಳ್ಳು ಮೋಸ ವಂಚನೆ ಇವುಗಳನ್ನು ಬದಿಗಿಟ್ಟು ಜೀವನದಲ್ಲಿ ದುಡಿದು ತಿನ್ನುವ ಕೆಲಸದವರು. ಸಮಾಜದಲ್ಲಿ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಹಲವಾರು ಶರಣ ವಚನಕಾರರು ಹೋರಾಟ ಕೈಗೊಂಡಿದ್ದರು ಎಂದರು.

ಇದೇ ವೇಳೆ ಲೇಖಕ ಕೆ.ಪಿ. ರಾಜಯ್ಯ ಮತ್ತು ಉಪನ್ಯಾಸಕ ಡಾ.ಟಿ. ಮಂಜು ಅವರು ಕಾಯಕ ಶರಣರ ಕುರಿತು ಉಪನ್ಯಾಸ ನೀಡಿದರು.

ಶಿವ ಶರಣರ ಹರಳಯ್ಯ ಮಹಾಸಂಸ್ಥಾನ ಮಠದ ಶ್ರೀ ರುದ್ರಪ್ಪ ಹರಳಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಕನ್ನಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಮುಖಂಡರಾದ ಎಡತೋರ ನಿಂಗರಾಜು, ಪಾಳ್ಯ ರಾಜಪ್ಪ, ಕೆ.ಆರ್. ನಗರ ಮಹದೇವ, ಮೂಗೂರು ನಂಜುಂಡಸ್ವಾಮಿ ಮೊದಲಾದವರು ಇದ್ದರು.

ತಮ್ಮ ಕೆಲಸ ಯಾವುದೇ ಇರಲಿ ಬೇದ ಭಾವವಿಲ್ಲದೆ, ಕೀಳರಿಮೆ ಇಲ್ಲದೆ ಬದುಕನ್ನು ಸಾಗಿಸಬೇಕು. ಸಮಾಜದಲ್ಲಿ ಸೌಲಭ್ಯಗಳಿಂದ ವಂಚಿತರಾದವರು, ಶಿಕ್ಷಣದಿಂದ ಮೇಲೆ ಬರಲಿಕ್ಕೆ ಸಾಧ್ಯ. ಹೀಗಾಗಿ, ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಣದ ಅಗತ್ಯ. ನಮ್ಮ ಜೀವನ ಬೇರೆಯವರಿಗೆ ಪ್ರೇರಣೆಯಾಗಿರಬೇಕು.

- ತನ್ವೀರ್ ಸೇಠ್, ಶಾಸಕರುಜಾತಿಯನ್ನು ನಾಶ ಮಾಡಲು ಯಾವುದೇ ಔಷಧಿ ಇಲ್ಲ. ಮನುಷ್ಯನ ಮನಸ್ಥಿತಿಯಿಂದ ಹೋಗಲಾಡಿಸಲು ಮಾತ್ರ ಸಾಧ್ಯ. ಪ್ರತಿಯೊಬ್ಬರು ಅವಕಾಶ ಬಂದಾಗ ಅದನ್ನು ಉಪಯೋಗಿಸಿಕೊಳ್ಳಬೇಕು. ಸಮಾಜದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿ ವಿದ್ಯಾವಂತರಾಗಿ ಮಾಡಬೇಕು.

- ಡಾ.ಡಿ. ತಿಮ್ಮಯ್ಯ, ವಿಧಾನಪರಿಷತ್ ಸದಸ್ಯರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಲಿಂಗೇಗೌಡರನ್ನು ಕೊಬ್ಬರಿ ಕಳ್ಳ ಎಂದಿದ್ದು ತಪ್ಪು
14 ರಂದು ಬೃಹತ್ ಸಾಮೂಹಿಕ ಹನುಮಾನ್ ಚಾಲೀಸ ಪಾರಾಯಣ ಮಹಾಯಜ್ಞ