ವೈಕುಂಠ ಏಕಾದಶಿಯ ಅಂಗವಾಗಿ ವಿಶೇಷ ಪೂಜೆ

KannadaprabhaNewsNetwork | Published : Dec 24, 2023 1:45 AM

ಸಾರಾಂಶ

ಕಂಪ್ಲಿ ಪಟ್ಟಣದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ನಿಮಿತ್ತ ವಿಶೇಷ ಪೂಜೆ ನಡೆಯಿತು. ದೇವರನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಪಂಚಾಮೃತಸಹಿತ ಅಷ್ಟೋತ್ತರ ಸಹಸ್ರ ನಾಮಾವಳಿ ನಡೆಯಿತು.

ಕಂಪ್ಲಿ: ಪಟ್ಟಣದ ಎಸ್ಎನ್ ಪೇಟೆಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಅಂಗವಾಗಿ ವಿಶೇಷ ಪೂಜೆಗಳು ಜರುಗಿದವು.

ಶ್ರೀಮನ್ ನಾರಾಯಣ ಆಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಸ್ವಾಮಿಗಳು ಮಾತನಾಡಿ, ಆಷಾಢ ಶುದ್ಧ ಏಕಾದಶಿ, ಕಾರ್ತೀಕ ಶುದ್ಧ ಏಕಾದಶಿ, ಪುಷ್ಯ ಶುದ್ಧ ಏಕಾದಶಿ ಅತ್ಯಂತ ಪವಿತ್ರವಾದುದು. ವೈಕುಂಠ ಏಕಾದಶಿಯ ದಿನವಾದ ಇಂದು ವೈಕುಂಠದ ಬಾಗಿಲು ತೆರೆದಿರುತ್ತದೆ. ಉತ್ತರ ದ್ವಾರದಿಂದ ಶ್ರೀ ನಾರಾಯಣನ ದರ್ಶನವನ್ನು ಪಡೆದರೆ ಪುಣ್ಯಪ್ರಾಪ್ತಿ, ಮೋಕ್ಷ ಪ್ರಾಪ್ತಿಯಾಗಲಿದೆ. ಅಲ್ಲದೆ ನಾವು ಸಕಲ ಪಾಪಗಳಿಂದ ದೂರವಾಗುತ್ತೇವೆ ಎಂದು ಹೇಳಿದರು.

ದೇವಸ್ಥಾನದಲ್ಲಿ ಪಂಚಾಮೃತ ಸಹಿತ ಅಷ್ಟೋತ್ತರ ಸಹಸ್ರನಾಮ, ಹೋಮ ಹವನ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ, ಸ್ವಾಮಿಗೆ ಹಲವು ಫಲಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಉತ್ತರ ದಿಕ್ಕಿನ ಬಾಗಿಲಿನಿಂದ ಶ್ರೀ ವೆಂಕಟೇಶ್ವರನ ದರ್ಶನವನ್ನು ಭಕ್ತರು ಪಡೆದರು.ಸೇವಾ ಧರ್ಮದರ್ಶಿಗಳಾದ ವೈಷ್ಣವಿ ಕೃಷ್ಣಮೂರ್ತಿ, ಲಲಿತಾರಾಣಿ, ರೂಪಾ, ಗುರುಪ್ರಸಾದ, ಕವಿತಾ ಶಶಿಧರ, ಭಗವತಿ, ಅಶ್ವತ್ಥ ನಾರಾಯಣ, ಸಂಪತ್ ಹಾಗೂ ಸರ್ವ ಸಮುದಾಯಗಳ ಸದ್ಭಕ್ತರು ಪಾಲ್ಗೊಂಡಿದ್ದರು.

ಅಮೃತ ಶಿಲಾ ಶ್ರೀರಾಮಚಂದ್ರ ಸ್ವಾಮಿಯ ಗ್ರಾಮಪ್ರದಕ್ಷಿಣೆ ಕಾರ್ಯಕ್ರಮ: ವೈಕುಂಠ ಏಕಾದಶಿಯ ಅಂಗವಾಗಿ ಇಲ್ಲಿನ ಗಂಗಾವತಿ ರಸ್ತೆಯಲ್ಲಿರುವ ಅಮೃತ ಶಿಲಾ ಶ್ರೀರಾಮಚಂದ್ರ ಸ್ವಾಮಿಯ ಗ್ರಾಮಪ್ರದಕ್ಷಿಣೆ (ಗಂಗೆಸ್ಥಳ) ಕಾರ್ಯಕ್ರಮ ಶನಿವಾರ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಜರುಗಿತು. ಇದರ ನಿಮಿತ್ತ ದೇವಸ್ಥಾನದಲ್ಲಿ ವಿವಿಧ ರೀತಿಯಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಪ್ರಮುಖರಾದ ಡಿ. ಗುರುರಾಜ ಆಚಾರ್, ಡಿ. ವೇಣು, ಕೆ. ಅನಂತಪದ್ಮನಾಭ ಗೌಡ್ರು, ಗೋಪಾಲಕೃಷ್ಣ ವಿಷ್ಣು ಕುಲಕರ್ಣಿ, ವಸುಧೇಂದ್ರ, ಡಿ. ವಿಜಯಲಕ್ಷ್ಮೀ, ಡಿ. ಗೀತಾ ಹಾಗೂ ಗುರುರಾಜ ಸೇವಾ ಮಂಡಳಿ, ಭಜನಾ ಮಂಡಳಿಯವರಿದ್ದರು.

Share this article