ರಾಷ್ಟ್ರಕವಿ ಕುವೆಂಪು, ಯು.ಆರ್. ಅನಂತಮೂರ್ತ, ಪಿ. ಲಂಕೇಶ್,ಜವರೇಗೌಡ, ಚಂದ್ರಶೇಖರ ಪಾಟೀಲ್ ಹೀಗೆ ಹಲವು ಕವಿಗಳ ಬರಹಗಳಿಂದ ಪ್ರಭಾವಿತನಾದ ನಾನು ಬರವಣಿಗೆಯನ್ನು ಬರೆಯಲು ಸ್ಪೂರ್ತಿಯಾಯಿತು ಎಂದು ಹಿರಿಯೂರು ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊಎಂ.ಜಿ.ರಂಗಸ್ವಾಮಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹಿರಿಯೂರು

ರಾಷ್ಟ್ರಕವಿ ಕುವೆಂಪು, ಯು.ಆರ್. ಅನಂತಮೂರ್ತ, ಪಿ. ಲಂಕೇಶ್,ಜವರೇಗೌಡ, ಚಂದ್ರಶೇಖರ ಪಾಟೀಲ್ ಹೀಗೆ ಹಲವು ಕವಿಗಳ ಬರಹಗಳಿಂದ ಪ್ರಭಾವಿತನಾದ ನಾನು ಬರವಣಿಗೆಯನ್ನು ಬರೆಯಲು ಸ್ಪೂರ್ತಿಯಾಯಿತು ಎಂದು ಹಿರಿಯೂರು ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊಎಂ.ಜಿ.ರಂಗಸ್ವಾಮಿ ಅಭಿಪ್ರಾಯಪಟ್ಟರು.

ಪಟ್ಟಣದ ಸಿಎಂ ಲೇಔಟ್‌ನಲ್ಲಿರುವ ಅವರ ನಿವಾಸದಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕ, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಜಂಟಿಯಾಗಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯೋಜಿತಗೊಂಡ ಎಂ.ಜಿ ರಂಗಸ್ವಾಮಿ ಅವರಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಸಾಹಿತ್ಯ, ಸಂಗೀತ, ರಂಗಕಲೆ ಮನುಷ್ಯನ ಅವಿಭಾಜ್ಯ ಅಂಗವಾಗಿದ್ದು ನಾಡಿನ ಕಲೆ ಸಂಸ್ಕೃತಿ ಸಾಹಿತ್ಯ ಉಳಿಸಲು ಇವುಗಳು ಪ್ರೇರಣೆಯಾಗಿವೆ.ಬರಹಗಳು ನಾಡಿನ ಇತಿಹಾಸ ಪರಿಚಯಿಸುವ ಮೂಲಕ ಸಾಹಿತ್ಯದ ನೈಜತೆಯನ್ನು ಸಾರುತ್ತವೆ ಎಂದು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ ಹಿರಿಯೂರಿನಲ್ಲಿ ನಡೆಯುವ ಏಳನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಂ.ಜಿ.ರಂಗಸ್ವಾಮಿ ಅವರು ತಾಲೂಕಿನ ಮಲ್ಲಪ್ಪನಳ್ಳಿ ಗ್ರಾಮದವರು. ಶ್ರೀ ಪಂಚಲಿಂಗೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಪ್ರಾಚಾರ್ಯ, ಪತ್ರಕರ್ತರಾಗಿ ಮಾಡಿದಂತ ಸೇವೆ ಅನನ್ಯ ಎಂದರು.

ಹಿರಿಯೂರು ಸೀಮೆಯ ಜಾನಪದ, ಚಿತ್ರದುರ್ಗದಲ್ಲಿ ಬುಕಾನನ್, ದುರ್ಗ ಸೀಮೆಯಲ್ಲಿ ಸಾಧಕರು ಬೆಂಗಳೂರಿನಲ್ಲಿ ಬುಕಾನನ್ ಹೀಗೆ ಹಲವಾರು ಕೃತಿಗಳನ್ನು ನಾಡಿಗೆ ನೀಡಿದ್ದಾರೆ. ಅವರ ಸೇವೆಯನ್ನು ಗುರುತಿಸಿ, ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಔಚಿತ್ಯಪೂರ್ಣವಾಗಿದೆ ಎಂದರು.

ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಮಹಮ್ಮದ್ ಫಕ್ರುದ್ದೀನ್, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಜೆ.ನಿಜಲಿಂಗಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆಯ ಪ್ರಧಾನ ಕಾರ್ಯದರ್ಶಿ ಬಿ.ಟಿ.ಶಂಕರಲಿಂಗಯ್ಯ, ಎಸ್. ನಾಗಸುಂದರಮ್ಮ, ಟಿ.ಸುಲೋಚನಾ, ಎಚ್.ಎಸ್. ಚಂದ್ರವದನ,

ಎಚ್.ಶಿವಮೂರ್ತಿ , ವೇದ ಪುಷ್ಪ, ರಾಧಿಕಾ, ಕವಿತಾ, ದಾಮಿನಿ ಮುಂತಾದವರು ಹಾಜರಿದ್ದರು.