ಆ.3ರಿಂದ ವಂದೇ ಭಾರತ್ ರೈಲು ನಿಲುಗಡೆ

KannadaprabhaNewsNetwork |  
Published : Jul 28, 2024, 02:07 AM IST
ರೈಲ್ವೆ ಇಲಾಖೆ ಆದೇಶ. | Kannada Prabha

ಸಾರಾಂಶ

ರೈಲ್ವೆ ಸಚಿವ ಸೋಮಣ್ಣರಿಂದ ಆನ್‌ಲೈನ್‌ ಮೂಲಕ ಚಾಲನೆ

ಕನ್ನಡಪ್ರಭ ವಾರ್ತೆ ಯಾದಗಿರಿ

ಜನಾಕ್ರೋಶ ಹಾಗೂ ಕರವೇ ಪ್ರತಿಭಟನೆಗಳಿಗೆ ಬೆದರಿದಂತಾದ ರೈಲ್ವೆ ಇಲಾಖೆ, ಕೊನೆಗೂ ಮಹತ್ವಾಕಾಂಕ್ಷಿ ವಂದೇ ಭಾರತ್‌ ರೈಲನ್ನು ಯಾದಗಿರಿ ನಿಲ್ದಾಣದಲ್ಲಿ ನಿಲುಗಡೆಗೆ ಆದೇಶಿಸಿದೆ. ಕಲಬುರಗಿ -ಬೆಂಗಳೂರು ಮಧ್ಯೆ ಸಂಚರಿಸಲಿರುವ ವಂದೇ ಭಾರತ್‌ ಎಕ್ಸಪ್ರೆಸ್‌ ಆ.3 ರಿಂದ ನಿಲುಗಡೆಯಾಗಲಿದೆ ಎಂದು ದಕ್ಷಿಣ ಮಧ್ಯೆ ರೈಲ್ವೆ ವಿಭಾಗದ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಕೈ, ಕಮಲ ಪಕ್ಷಗಳ ನಡುವಿನ ಜಿದ್ದಾಜಿದ್ದಿಯಿಂದಾಗಿ ಯಾದಗಿರಿಯಲ್ಲಿ ವಂದೇ ಭಾರತ್‌ ರೈಲು ನಿಲುಗಡೆ ವಿಚಾರ ಗಜಪ್ರಸವದಂತೆ ಭಾಸವಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ಇಲಾಖೆಗೆ ಒಂದಿಷ್ಟು ಬಿಸಿ ಮುಟ್ಟಿಸಿದಂತಿದೆ.

ಈ ರೈಲು ನಿಲುಗಡೆಯ ಕ್ರೆಡಿಟ್ಟಿಗಾಗಿ ಆಯಾ ಪಕ್ಷಗಳು ಆಂತರಿಕ ತಿಕ್ಕಾಟ ನಡೆಸಿದ್ದವು. ರಾಯಚೂರು ಹಾಗೂ ಕಲಬುರಗಿ ಸಂಸದರು ಕಾಂಗ್ರೆಸ್‌ ಪಕ್ಷದವರು. ಇವರು ಚಾಲನೆ ನೀಡಿದರೆ ಕೈ ಪಕ್ಷಕ್ಕೆ ಅದರ ಕ್ರೆಡಿಟ್ಟು ಹೋಗಬಹುದೆಂಬ ಕಾರಣಕ್ಕೇನೋ, ಶನಿವಾರ (ಜು.27) ನಿಗದಿಯಾಗಿದ್ದ ರೈಲು ನಿಲುಗಡೆ ಆದೇಶ ರದ್ದಾಗಿತ್ತು. ರೈಲು ನಿಲ್ಲಿಸದರೆ ತಮಗೆ ಲಾಭ ಅನ್ನೋ ವಿಚಾರ ಕಾಂಗ್ರೆಸ್‌ ಪಕ್ಷದ್ದಾಗಿತ್ತು ಎನ್ನಲಾಗಿದೆ.

"ಕೈ, ಕಮಲ ಜಿದ್ದು, ರೈಲು ನಿಲುಗಡೆ ರದ್ದು ಶೀರ್ಷಿಕೆಯಡಿ "ಕನ್ನಡಪ್ರಭ " ಇಂದು ಶನಿವಾರ (ಜು.27) ಈ ಕುರಿತ ಸುದ್ದಿ ಪ್ರಕಟಿಸಿತ್ತು. ರೈಲು ಮಂತ್ರಿ ಸೋಮಣ್ಣರಿಗಾಗಿ ನಿಲುಗಡೆ ಮುಂದೂಡಿಕೆಯೇ ಎಂಬಂಶ ಸುದ್ದಿಯಲ್ಲಡಗಿತ್ತು. ರೈಲು ನಿಲ್ಲಿಸುತ್ತಾರೋ ? ಮತ್ತದೇ ಹಿಂದಿನಂತೆ ರೀಲು ಬಿಡುತ್ತಾರೋ.. ಕಾದು ನೋಡಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ