- ಬಸವ ಜಯಂತಿ, ತಾಯಂದಿರ ದಿನಾಚರಣೆ, ದತ್ತಿ ಉಪನ್ಯಾಸ - - - ದಾವಣಗೆರೆ: ಕಾಯಕದ ಮಹತ್ವ ಸಾರಿದ ವಿಶ್ವಗುರು ಬಸವಣ್ಣ. ಶರಣರು ವ್ಯಕ್ತಿಯನ್ನು ಅವರ ಕಾಯಕದಿಂದ ಗುರುತಿಸುತ್ತಿದ್ದರೇ ಹೊರತು, ಅವರ ಜಾತಿಯಿಂದ ಅಲ್ಲ ಎಂದು ಎಜಿಬಿ ಕಾಲೇಜಿನ ಉಪನ್ಯಾಸಕಿ ಉಷಾ ಹೇಳಿದರು.
ನಗರದ ಹಿರಿಯ ವನಿತೆಯರ ಆನಂದಧಾಮದಲ್ಲಿ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪ್ರಜ್ಞಾ ವೇದಿಕೆ ವನಿತಾ ಸಮಾಜ, ವನಿತಾ ಸಾಹಿತ್ಯ ವೇದಿಕೆ, ಹಿರಿಯ ನಾಗರಿಕರ ಸಹಾಯವಾಣಿ ಸಹಯೋಗದಲ್ಲಿ ನಡೆದ ಬಸವ ಜಯಂತಿ, ತಾಯಂದಿರ ದಿನಾಚರಣೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಸವಣ್ಣನವರ ದೃಷ್ಟಿಯಲ್ಲಿ ವ್ಯಕ್ತಿ ಹಾಗೂ ಸಮಾಜದ ಬದುಕು ಹಸನಾಗಲು ಕಾಯಕ ಮಾಡಲೇಬೇಕು. ಈ ಭೂಮಿಯ ಅಪರಿಮಿತ ಶಕ್ತಿಯಾಗಿ ಉದಯಿಸಿದವರೇ ಬಸವಣ್ಣ. ಸರ್ವಜನಾಂಗದ ವೇದಿಕೆಯಾಗಿ ಅನುಭವ ಮಂಟಪಕ್ಕೆ ಅರ್ಥ ನೀಡಿದವರು ಬಸವಣ್ಣನವರು ಎಂದರು.
ಮಹಿಳಾ ಸೇವಾ ಸಮಾಜ ಪಪೂ ಕಾಲೇಜಿನ ಉಪನ್ಯಾಸಕಿ ವೈ.ಎಂ. ರಾಜೇಶ್ವರಿ ತಾಯಂದಿರ ಮಹತ್ವದ ಕುರಿತು ಮಾತನಾಡಿದರು. ಆನಂದಧಾಮದ ಅಧ್ಯಕ್ಷೆ ನೀಲಗುಂದ ಜಯಮ್ಮ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.ಕಸಾಪ ನಿರ್ದೇಶಕ ಷಡಕ್ಷರಪ್ಪ ಎಂ. ಬೇತೂರು, ಕಸಾಪ ಗೌರವ ಕಾರ್ಯದರ್ಶಿಗಳಾದ ದಾಗಿನಕಟ್ಟೆ ಪರಮೇಶ್ವರಪ್ಪ, ನಾಗರಾಜ ಸಿರಿಗೆರೆ, ನಿರ್ದೇಶಕರಾದ ಮಲ್ಲಮ್ಮ ನಾಗರಾಜ, ಕುರ್ಕಿ ಸಿದ್ದೇಶ, ಪ್ರಜ್ಞಾವೇದಿಕೆ ಕಾರ್ಯದರ್ಶಿ ಶಿವರತ್ನ, ಲೇಖಕರಾದ ಶೈಲಜಾ, ವಾಗ್ದೇವಿ, ಸುಶೀಲಾ ಬಸವರಾಜ ಹಿರಮೇಠ ಹಾಗೂ ಆನಂದ ಧಾಮದ ಹಿರಿಯ ವನಿತೆಯರು ಇದ್ದರು.
- - - -17ಕೆಡಿವಿಜಿ32ಃ:ದಾವಣಗೆರೆಯಲ್ಲಿ ತಾಲೂಕು ಕಸಾಪದಿಂದ ನಡೆದ ಬಸವ ಜಯಂತಿ, ತಾಯಂದಿರ ದಿನ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಉಷಾ ಮಾತನಾಡಿದರು.