ವಿಶ್ವ ಸಂಸ್ಕೃತಿಗೆ ವಚನ ಸಂಸ್ಕೃತಿ ದಾರಿ ದೀಪ

KannadaprabhaNewsNetwork |  
Published : Jul 03, 2024, 12:17 AM IST
(2ಎನ್.ಆರ್.ಡಿ4 ಡಾ. ಫ ಗು ಹಳಕಟ್ಟಿಯವರ 144 ನೇ ಜಯಂತಿ ಕಾರ್ಯಕ್ರಮದಲ್ಲಿ ಶಾಂತಲಿಂಗ ಶ್ರೀಗಳು ಆರ್ಶೀವಚನ ನೀಡುತ್ತಿದ್ದಾರೆ.)  | Kannada Prabha

ಸಾರಾಂಶ

ಒಂದು ವಿಶ್ವವಿದ್ಯಾಲಯ ಮಾಡದ ಕೆಲಸವನ್ನು ಏಕಾಂಗಿ ವೀರರಾಗಿ ಸಾದಿಸಿದ ಅವರು ಒಂದು ವ್ಯಕ್ತಿಯಾಗಿರದೆ ಲಿಂಗಾಯತರ ಬಹುದೊಡ್ಡ ಶಕ್ತಿಯಾಗಿದ್ದರು

ನರಗುಂದ: ವಿಶ್ವ ಸಂಸ್ಕೃತಿಗೆ ವಚನ ಸಂಸ್ಕೃತಿ ದಾರಿ ದೀಪವಾಗಿದೆ. 12ನೇ ಶತಮಾನದ ಬಸವಾದಿ ಶಿವಶರಣರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆ ಸರ್ವಕಾಲಿಕ ಎಂದು ಹಿರಿಯ ಉಪನ್ಯಾಸಕ ಪ್ರೋ. ಆರ್.ಎಚ್. ತಿಗಡಿ ಹೇಳಿದರು.

ಅವರು ಮಂಗಳವಾರ ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರಿದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ.ಫ.ಗು. ಹಳಕಟ್ಟಿಯವರ 144 ನೇ ಜಯಂತಿ ಅಂಗವಾಗಿ ವಚನ ಸಂರಕ್ಷಣಾ ದಿನ ಹಾಗೂ ಏಕೀಕರಣ ಯೋಧರ ಯಶೋಗಾಥೆ-16 ಕಾರ್ಯಕ್ರಮದಲ್ಲಿ ಮಾತನಾಡಿ, 12ನೇ ಶತಮಾನದ ನಂತರ ವಚನ ಸಾಹಿತ್ಯಕ್ಕೆ ಪುನರ್‌ಚೈತನ್ಯ ತಂದುಕೊಟ್ಟ ಕೀರ್ತಿ ಹಳಕಟ್ಟಿಯವರಿಗೆ ಸಲ್ಲುತ್ತದೆ. ಒಂದು ವಿಶ್ವವಿದ್ಯಾಲಯ ಮಾಡದ ಕೆಲಸವನ್ನು ಏಕಾಂಗಿ ವೀರರಾಗಿ ಸಾದಿಸಿದ ಅವರು ಒಂದು ವ್ಯಕ್ತಿಯಾಗಿರದೆ ಲಿಂಗಾಯತರ ಬಹುದೊಡ್ಡ ಶಕ್ತಿಯಾಗಿದ್ದರು ಎಂದರು.

ಸಾನ್ನಿಧ್ಯ ವಹಿಸಿದ್ದ ಶಾಂತಲಿಂಗ ಶ್ರೀಗಳು ಮಾತನಾಡಿ, ಮನೆ, ಮಠ,ಜಗುಲಿಗಳಲ್ಲಿ ಪೂಜಿಸುತ್ತಿದ್ದ ವಚನ ತಾಡೋಲೆಗಳನ್ನು ಹುಡುಕಿ ತಂದು ಸುಮಾರು 250 ವಚನಕಾರರ ಸಾಹಿತ್ಯ ಸರ್ವಕಾಲಿಕವಾಗುವಲ್ಲಿ ಹಳಕಟ್ಟಿಯವರ ಕೊಡುಗೆ ಅಪಾರವಾಗಿದೆ.ತಮ್ಮ ಮನೆ ಮಾರಿ ಹಿತಚಿಂತಕ ಮುದ್ರಣಾಲಯ ಆರಂಭಿಸಿ 1923ರಲ್ಲಿ ವಚನ ಶಾಸ್ತ್ರ ಸಾರ ಭಾಗ-1 ಪುಸ್ತಕ ಪ್ರಕಟಿಸಿ ಇಂದಿಗೆ ನೂರೊಂದು ವಸಂತಗಳು ಪೂರೈಸಿವೆ. ನಂತರ ನವಕರ್ನಾಟಕ ಎಂಬ ಪತ್ರಿಕೆಯ ಮೂಲಕ ಕನ್ನಡ ಜಾಗೃತಿ ಮೂಡಿಸಿ ಕನ್ನಡ ಕಟ್ಟುವ ಕೈಂಕರ್ಯ ಮಾಡಿದ್ದಾರೆ ಎಂದು ಹೇಳಿದರು.

ವಚನ ಚಳವಳಿಯ ಮೂಲಕ 12ನೇ ಶತಮಾನದಲ್ಲಿ ಲಿಂಗಾಯತ ಪರಂಪರೆ ಹುಟ್ಟು ಹಾಕಿದ ಬಸವಣ್ಣನವರ ಕುರಿತಾಗಿ ಕರ್ನಾಟಕ ಸರ್ಕಾರ ಪ್ರಕಟಿಸಿರುವ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಲಿಂಗಾಯತ ಎಂದು ಬದಲಾವಣೆ ಮಾಡಿದ್ದು ಅತ್ಯಂತ ಮೌಲಿಕ ಹಾಗೂ ನ್ಯಾಯ ಸಮ್ಮತವಾಗಿದೆ. ಪ್ರಸ್ತುತ ಪಾಠದಲ್ಲಿ ಹಿಂದಿನ ತಪ್ಪು ಸರಿಪಡಿಸಿ ಇತಿಹಾಸಕ್ಕೆ ಚ್ಯುತಿಬಾರದಂತೆ ನೈಜ ಇತಿಹಾಸ ಪ್ರಕಟಿಸಲಾಗಿದೆ ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಯ ವೀರಯ್ಯ ಸಾಲಿಮಠ, ಔಷಧ ವರ್ತಕ ಮಹಾಂತೇಶ ಸಾಲಿಮಠ ಪ್ರಮುಖರು ಉಪಸ್ಥಿತರಿದ್ದರು.

ಬಸವರಾಜ ಮನೆನಕೊಪ್ಪ ಸ್ವಾಗತಿಸಿದರು, ಶ್ರೀಮಠದ ವ್ಯವಸ್ಥಾಪಕ ಮಹಾಂತೇಶ ಹಿರೇಮಠ ನಿರೂಪಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏಕಾದಶಿ ಪ್ರಯುಕ್ತ ಶರವಣ ಟ್ರಸ್ಟ್‌ನಿಂದ ಲಕ್ಷ ಲಡ್ಡು ಹಂಚಿಕೆ
ಹಳೆ ದ್ವೇಷ: ರಸ್ತೆಯಲ್ಲಿ ಅಟ್ಟಾಡಿಸಿ ಅಪ್ಪ, ಮಗನ ಮೇಲೆ ಹಲ್ಲೆ ನಡೆಸಿ ಪರಾರಿ