ಮತ ಚಲಾಯಿಸಿ ಪ್ರಜಾಪ್ರಭುತ್ವ ಬಲಗೊಳಿಸಿ: ಟಿ.ಪಿ.ಉಮೇಶ್

KannadaprabhaNewsNetwork |  
Published : Nov 25, 2024, 01:02 AM IST
ಚಿತ್ರಮಾಹಿತಿ (24 ಹೆಚ್‌ ಎಲ್‌ ಕೆ 1) ತಾಲೂಕಿನ ಅಮೃತಾಪುರ ಗ್ರಾಮದಲ್ಲಿ  ಮತಘಟ್ಟ ಪುರಷ್ಕರಣಿಗೆ  ಮನೆ ಬೇಟಿ ವೇಳೆ ಆಹ}  ವಯಸ್ಕರರಿಂದ  ದಾಖಲೆಗಳನ್ನು ಬಿ.ಎಲ್‌. ಓ .ಟಿ.ಸಿ.  ಟಿ.ಪಿ ಉಮೇಶ್‌ ಪಡೆದರು...……………………………… | Kannada Prabha

ಸಾರಾಂಶ

ಅಮೃತಾಪುರ ಗ್ರಾಮದಲ್ಲಿ ಮತ ಪರಿಷ್ಕರಣೆಗೆ ಮನೆ ಭೇಟಿ ವೇಳೆ ಅರ್ಹ ವಯಸ್ಕರರಿಂದ ಬಿಎಲ್‌ಒಟಿಸಿ ಟಿ.ಪಿ ಉಮೇಶ್‌ ದಾಖಲೆಗಳನ್ನು ಪಡೆದರು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ ಹದಿನೆಂಟು ವರ್ಷ ತುಂಬಿದ ಎಲ್ಲ ವಯಸ್ಕರು ಕಾಲಕಾಲಕ್ಕೆ ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿರುತ್ತಾರೆ. ಮೊದಲು ಮತಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಿರಿ ನಂತರ ಭಾರತ ಚುನಾವಣಾ ಆಯೋಗದಿಂದ ಓಟರ್ ಕಾರ್ಡ್‌ ಪಡೆದು ಮತ ಚಲಾಯಿಸಬೇಕು ಎಂದು ಅಮೃತಾಪುರ ಬೂತ್ ಮಟ್ಟದ ಅಧಿಕಾರಿ ಟಿ.ಪಿ.ಉಮೇಶ್ ಹೇಳಿದರು.ಹೊಳಲ್ಕೆರೆ ತಾಲೂಕು ಅಮೃತಾಪುರ ಹಾಗೂ ಗೌರೀಪುರದಲ್ಲಿ ಮತಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿರುವ ಅವರು ಗ್ರಾಮದ ಜನರಿಗೆ ಮತಪಟ್ಟಿಗೆ ಹೆಸರು ನೋಂದಾವಣೆ ಹಾಗೂ ಮತದಾನದ ಮಹತ್ವ ಕುರಿತು ತಿಳಿಸಿದರು.

ಶನಿವಾರ ಹಾಗೂ ಭಾನುವಾರದ ಸರ್ಕಾರಿ ರಜಾ ದಿನವಾದರೂ ಚುನಾವಣಾ ಆಯೋಗದ ನಿರ್ದೇಶನದಂತೆ ಹಾಗೂ ಜಿಲ್ಲಾಧಿಕಾರಿ ಚಿತ್ರದುರ್ಗ, ತಹಸೀಲ್ದಾರರು ಹೊಳಲ್ಕೆರೆ ಇವರ ಜ್ಞಾಪನದಂತೆ ಗ್ರಾಮದಲ್ಲಿ 18 ವರ್ಷ ತುಂಬಿದ, ಮದುವೆಯಾಗಿ ಗ್ರಾಮಕ್ಕೆ ಬಂದಿರುವ ಅರ್ಹ ವಯಸ್ಕರ ದಾಖಲೆಗಳನ್ನು ಪಡೆದು ಮತಪಟ್ಟಿಗೆ ಆನ್‌ಲೈನ್‌ನಲ್ಲಿ ಅರ್ಜಿ ಹಾಕುವುದು. ಸಾವಿನಿಂದಾಗಿ ಮತ್ತು ಶಾಶ್ವತ ಸ್ಥಳಾಂತರ ಹೊಂದಿದ ಮತದಾರರನ್ನು ಮತಪಟ್ಟಿಯಿಂದ ತೆಗೆದುಹಾಕುವ, ಮತದಾರರ ಪಟ್ಟಿಯಲ್ಲಿ ತಿದ್ದುಪಡಿಗಳಿದ್ದರೆ ದಾಖಲೆಗಳ ಮೂಲಕ ಸರಿಪಡಿಸಿಕೊಳ್ಳಲು ಮಾರ್ಗದರ್ಶನ ಮಾಡಿದರು.

ಭಾರತ ಚುನಾವಣಾ ಆಯೋಗ ಈಗ ವರ್ಷಪೂರ್ತಿ ಮತಪೆಟ್ಟಿಗೆ ನೋಂದಾಯಿಸಲು ಅರ್ಹ ವಯಸ್ಕರಿಗೆ ಅವಕಾಶ ನೀಡಿದೆ. ಜೊತೆಗೆ ವಿಶೇಷ ಪರಿಷ್ಕರಣೆ ದಿನಗಳನ್ನು ನಿಗದಿಗೊಳಿಸಿ ಮತಪಟ್ಟಿಗೆ ಎಲ್ಲ ವಯಸ್ಕರು ದಾಖಲಾಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಭಾರತ ದೇಶದ ಪ್ರಜಾಪ್ರಭುತ್ವ ಬಲಗೊಳಿಸಲು ಈ ಸದಾವಕಾಶವನ್ನು ಎಲ್ಲ ಸಾರ್ವಜನಿಕರು ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಈ ವಿಶೇಷ ಪರಿಷ್ಕರಣೆಯ ಎರಡು ದಿನಗಳಲ್ಲಿ ಅಮೃತಾಪುರದಲ್ಲಿ ಸಾವು ಸಂಭವಿಸಿದ ಐದು ಮತದಾರರನ್ನು ಗುರುತಿಸಿ ಮತಪಟ್ಟಿಯಿಂದ ತೆಗೆಯಲು ಮತ್ತು ತಲಾ ಇಬ್ಬರು ಮತದಾರರ ದಾಖಲೆ ತಿದ್ದುಪಡಿ ಹಾಗೂ ಹೊಸ ಸೇರ್ಪಡೆಗೆ ಕ್ರಮ ಕೈಗೊಳ್ಳಲಾಯಿತು ಎಂದು ಬೂತ್ ಮಟ್ಟದ ಅಧಿಕಾರಿ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ಪಿ.ಉಮೇಶ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲಾತಿಗೆ ಬಂಜಾರ ಸಮಾಜದ ವಿರೋಧ
ಜಿಲ್ಲೆಗೆ ಒಲಿದುಬಂದ 17ಕ್ಕೂ ಅಧಿಕ ಕೊಡುಗೆಗಳು