ಕನ್ನಡಪ್ರಭ ವಾರ್ತೆ ಹುಮನಾಬಾದ್
ತಹಸೀಲ್ದಾರ್ ಅಂಜುಮ್ ತಬಸುಮ್ ಮೂಲಕ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಗಡವಂತಿ ಗ್ರಾಮಸ್ಥರು, ಈ ಕುರಿತು ಮಾಲಿನ್ಯ ಅಧಿಕಾರಿಗಳ ಹಾಗೂ ಜಿಲ್ಲಾಧಿಕಾರಿಗಳ ಸಂಪೂರ್ಣ ನಿರ್ಲಕ್ಷವೇ ಕಾರಣವಾಗಿದೆ. ಹೀಗಾಗಿ ಈ ಕುರಿತು ತಾವು ತನಿಖೆ ನಡೆಸಿ ತಪ್ಪಿತಸ್ಥ ಕಾರ್ಖಾನೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಕೆಲ ದಿನಗಳ ಹಿಂದೆ ಹುಡಗಿ ಗ್ರಾಮದ ಹಳ್ಳಗಳಲ್ಲಿ ಮೀನು ಸೇರಿದಂತೆ ನೀರಿನಲ್ಲಿರುವ ಜಲಚರಗಳು ಸಾವನ್ನಪ್ಪಿದ್ದವು. ಇದೀಗ ಹುಮನಾಬಾದ್, ಬೀದರ್, ಭಾಲ್ಕಿ ಪಟ್ಟಣಕ್ಕೆ ಸರಬರಾಜು ಆಗುತ್ತಿರುವ ಕಾರಂಜಾ ಜಲಾಶಯದ ನೀರಿಗೆ ಕೈಗಾರಿಕಾ ಪ್ರದೇಶದ ಹಳ್ಳಗಳ ಮೂಲಕ ಗಡವಂತಿ, ಮಾಣಿಕನಗರ, ಧುಮ್ಮನಸೂರ, ಹುಡಗಿ ಗ್ರಾಮಗಳ ಹಳ್ಳಗಳ ಮೂಲಕ ಹರಿಯುತ್ತಿರುವ ರಾಸಾಯನಿಕ ತ್ಯಾಜ್ಯ ಜಲಾಶಯಕ್ಕೆ ಸೇರುತ್ತಿದೆ.ಈಗಾಗಲೆ ಎಲ್ಲಾ ಕಡೆ ಡೆಂಘೀ, ಮಲೇರಿಯಾ ಅಂತಹ ರೋಗಗಳು ಬರುತ್ತಿದ್ದು, ಇದೀಗ ಗಡವಂತಿ ಮಾಣಿಕನಗರ, ಧುಮ್ಮನಸೂರ ಗ್ರಾಮದ ಹಳ್ಳಕ್ಕೆ ರಾಸಾಯನಿಕ ತ್ಯಾಜ್ಯ ಬಂದಾಗಿದೆ. ಈ ಗ್ರಾಮಗಳಲ್ಲಿನ ಗ್ರಾಮಸ್ಥರು ಅನಾರೋಗ್ಯಕ್ಕೆ ಪೀಡಿತವಾಗುವ ಸಾಧ್ಯತೆಗಳು ದಟ್ಟವಾಗಿದ್ದರಿಂದ ಇತ್ತ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ರವಿಕುಮಾರ ಹೊಸಳ್ಳಿ, ರಮೇಶ ಕಲ್ಲೂರ, ಸಂದೀಪ ಮುಗಳಿ, ಮಿಲನ್ ಮೈಸಲಗೆ, ಸತ್ಯಶೀಲ ಈರುಳೆ, ಸತೀಷ ಪವಾರ ಸೇರಿದಂತೆ ಅನೇಕರು ಇದ್ದರು.