ಬಯಲು ಕಸಾಲಯ ಜಿಲ್ಲೆ: ಶೀನ ಶೆಟ್ಟಿ ಆತಂಕ

KannadaprabhaNewsNetwork |  
Published : Sep 04, 2026, 03:00 AM IST
ಆತಂಕ | Kannada Prabha

ಸಾರಾಂಶ

ಬಯಲು ಶೌಚಮುಕ್ತ ಜಿಲ್ಲೆಯಾಗಿದ್ದ ಪ್ರದೇಶ ಇಂದು ಬಯಲು ಕಸಾಲಯವಾಗಿ ರೂಪುಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕಸಾಲಯವೇ ವಿಷಾಲಯವಾಗಿ, ವಿಷಾಲಯವೇ ಬಹುದೊಡ್ಡ ಸಮಸ್ಯೆಯಾಗಿದೆ ಎಂದು ಜಿಲ್ಲಾ ಸ್ವಚ್ಛತಾ ರಾಯಭಾರಿ, ಮಾಜಿ ಒಂಬುಡ್ಸ್‌ ಮೆನ್‌ ಶೀನ ಶೆಟ್ಟಿ ಹೇಳಿದ್ದಾರೆ.

ಉಳ್ಳಾಲ: ಬಯಲು ಶೌಚಮುಕ್ತ ಜಿಲ್ಲೆಯಾಗಿದ್ದ ಪ್ರದೇಶ ಇಂದು ಬಯಲು ಕಸಾಲಯವಾಗಿ ರೂಪುಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕಸಾಲಯವೇ ವಿಷಾಲಯವಾಗಿ, ವಿಷಾಲಯವೇ ಬಹುದೊಡ್ಡ ಸಮಸ್ಯೆಯಾಗಿದೆ ಎಂದು ಜಿಲ್ಲಾ ಸ್ವಚ್ಛತಾ ರಾಯಭಾರಿ, ಮಾಜಿ ಒಂಬುಡ್ಸ್‌ ಮೆನ್‌ ಶೀನ ಶೆಟ್ಟಿ ಹೇಳಿದ್ದಾರೆ.

ದ.ಕ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್‌, ಸ್ವಚ್ಛ ಭಾರತ್‌ ಮಿಷನ್‌ ಮಂಗಳೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ, ಉಳ್ಳಾಲ ಪ್ರೆಸ್‌ ಕ್ಲಬ್‌ , ಹಸಿರುದಳ ಮಂಗಳೂರು ನೇತೃತ್ವದಲ್ಲಿ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಹಮ್ಮಿಕೊಂಡ ಫ್ರೀಡಂ ಫ್ರಮ್‌ ಪ್ಲಾಸ್ಟಿಕ್‌ ಅಭಿಯಾನಕ್ಕೆ ಹಳೇ ಬಟ್ಟೆಗಳನ್ನು ಹಸಿರುದಳಕ್ಕೆ ಹಸ್ತಾಂತರಿಸುವ ಮುಖೇನ ಚಾಲನೆ ನೀಡಿ ಮಾತನಾಡಿದರು.

ಸೆ.18 ರ ಸಚಿವರ ಸಂಪುಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಕಬಳಕೆ ಪ್ಲಾಸ್ಟಿಕ್‌ ಸಂಪೂರ್ಣವಾಗಿ ಉತ್ಪಾದನೆ ನಿಲ್ಲಿಸುವ ಕುರಿತು ಮುಖ್ಯಮಂತ್ರಿಯವರ ಗಮನಕ್ಕೆ ತರಬೇಕು ಎಂದು ಆರೋಗ್ಯ ಸಚಿವರ ಮೂಲಕ ಮನವಿ ಮಾಡಲಾಗಿದೆ. ಸಚಿವರು ಏಕಬಳಕೆ ಪ್ಲಾಸ್ಟಿಕ್‌ ಉತ್ಪಾದನೆ ನಿಲ್ಲಿಸುವ ಕುರಿತು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪುಷ್ಪರಾಜ್‌ ಬಿ.ಎನ್‌. ಮಾತನಾಡಿ, ಪ್ಲಾಸ್ಟಿಕ್‌ ಬಳಕೆ ಹೆಚ್ಚಾದಂತೆ ಅನೇಕ ಸ್ಥಳೀಯ ಕಲೆ, ಸಂಪ್ರದಾಯ ಹಾಗೂ ಪರಿಸರ ಸ್ನೇಹಿ ವಸ್ತುಗಳು ಮರೆಯಾಗಿವೆ ಎಂದರು.

ಜನಶಿಕ್ಷಣ ಟ್ರಸ್ಟಿನ ಕೃಷ್ಣ ಮೂಲ್ಯ , ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ್‌ ಪೊಯ್ಯತ್ತಬೈಲ್‌ , ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್‌ ನಾಯಕ್‌ ಇಂದಾಜೆ, ಉಳ್ಳಾಲ ಪ್ರೆಸ್‌ ಕ್ಲಬ್‌ ಅಧ್ಯಕ್ಷ ವಸಂತ್‌ ಎನ್‌ ಕೊಣಾಜೆ, ನಿಟ್ಟೆ ಕಾಲೇಜು ಉಪನ್ಯಾಸಕ ಎಚ್.ಟಿ ಶಿವಕುಮಾರ್‌ ಉಪಸ್ಥಿತರಿದ್ದರು.

ಪ್ರಜ್ವಲ್‌ ನಿರೂಪಿಸಿದರು. ಹಸಿರುದಳ ನಾಗರಾಜ್‌ ಪ್ರಸ್ತಾವಿಕ ಮಾತುಗಳನ್ನಾಡಿದರು. ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್‌ ನಾಯಕ್‌ ತೊಕ್ಕೊಟ್ಟು ವಂದಿಸಿದರು.ಜಂಕ್ಷನ್‌ನಲ್ಲಿ ಪ್ಲಾಸ್ಟಿಕ್‌ ಚೀಲಗಳನ್ನು ಹೊಂದಿದ್ದ ಸಾರ್ವಜನಿಕರನ್ನು ಗುರುತಿಸಿದ ಸದಸ್ಯರು ಹಾಗೂ ಪತ್ರಕರ್ತರು ಅವರಿಂದ ಪ್ಲಾಸ್ಟಿಕ್‌ ಚೀಲಗಳನ್ನು ಪಡೆದುಕೊಂಡು, ಅವರಿಗೆ ಉಚಿತವಾಗಿ ಬಟ್ಟೆ ಚೀಲಗಳನ್ನು ಹಸ್ತಾಂತರಿಸುವ ಮೂಲಕ ಪ್ಲಾಸ್ಟಿಕ್‌ ಬಳಕೆ ತ್ಯಜಿಸುವಂತೆ ಮನವಿ ಮಾಡಿದರು.

ಅಭಿಯಾನದ ಸಂದರ್ಭದಲ್ಲಿ 100ಕ್ಕೂ ಅಧಿಕ ಮಂದಿಯಿಂದ ಪ್ಲಾಸ್ಟಿಕ್‌ ಚೀಲಗಳನ್ನು ಸಂಗ್ರಹಿಸಿ, ಅದರ ಬದಲಾಗಿ ಬಟ್ಟೆ ಚೀಲಗಳನ್ನು ವಿತರಿಸಲಾಯಿತು. ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆ ಹಾಗೂ ಏಕಬಳಕೆ ಪ್ಲಾಸ್ಟಿಕ್‌ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಷ್ಟ್ರೀಯ ಸೇವಾ ಯೋಜನೆ ಘಟಕ ಉದ್ಘಾಟನೆ
ಹಾರಂಗಿ ಸಾಕಾನೆ ಶಿಬಿರ ಪ್ರವಾಸಿಗರಿಗೆ ಶೀಘ್ರ ಮುಕ್ತ