ಶಾಲಾ ಕಾಲೇಜುಗಳಲ್ಲಿ ರಚನೆಯಾಗುವ ವಿವಿಧ ಸಂಘಗಳು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿವೆ ಎಂದು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಕೆ. ಸಿ. ದಯಾನಂದ ಹೇಳಿದರು.

ಕನ್ನಡಪ್ರಭವಾರ್ತೆ ನಾಪೋಕ್ಲು

ಶಾಲಾ ಕಾಲೇಜುಗಳಲ್ಲಿ ರಚನೆಯಾಗುವ ವಿವಿಧ ಸಂಘಗಳು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿವೆ ಎಂದು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಕೆ. ಸಿ. ದಯಾನಂದ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 2026-27ರ ಸಾಲಿನ ಸಾಂಸ್ಕೃತಿಕ ಸಮಿತಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.ಪ್ರಾಂಶುಪಾಲ ಪಲ್ಲವಿ ಹೆಚ್.ಸಿ. ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಪ್ರೊ. ಕಾಂಡಂಡ ಉಷಾ ಜೋಯಪ್ಪ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಮಿತಿಯ ಪದಾಧಿಕಾರಿಗಳನ್ನು ಈ ಸಂದರ್ಭ ಆಯ್ಕೆ ಮಾಡಲಾಯಿತು ಅಧ್ಯಕ್ಷರಾಗಿ ಪಹಮಾ, ಉಪಾಧ್ಯಕ್ಷರಾಗಿ ಮುಫೌಧ ಮತ್ತು ಜುಬೇರಿಯ, ಕ್ರೀಡಾ ನಾಯಕರಾಗಿ ಮುಜಮಿಲ್ ಮತ್ತುಅಮೀನ್, ಸಾಂಸ್ಕೃತಿಕ ನಾಯಕರಾಗಿ ನೈಶಾನ್ ಮತ್ತು ಇಮ್ರಾನ್ ಆಯ್ಕೆಯಾದರು.ಉಪನ್ಯಾಸಕರಾದ ಜಶ್ಮಿ ಉತ್ತಪ್ಪ, ಕೆ. ರಮೇಶ್, ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಆಶಾ ಎಸ್,ಮಹಿಳಾ ಅಭ್ಯುದಯ ಕೋಶ ಸಂಚಾಲಕಿ ಡಾ. ಸಹನಾ ದಿನೇಶ್ ಮತ್ತಿತರರಿದ್ದರು.