ಎತ್ತಿನಹೊಳೆ ಯೋಜನೆ ಕಾಮಗಾರಿಯ ಪೈಪ್‌ ಒಡೆದು ಅಪಾರ ಪ್ರಮಾಣದ ನೀರು ಪೋಲು

KannadaprabhaNewsNetwork |  
Published : Sep 15, 2024, 01:48 AM IST
ತಾಲೂಕಿನ ಎತ್ತಿನಹೊಳೆ ಯೋಜನೆಯ ಪೈಪ್‌ಲೈನ್‌ನಿಂದ ನೀರು ಹೊರ ಬಂದು ಕುಂಬರಡಿ ಎಸ್ಟೇಟ್ ಮನೆಯ ಆವರಣಕೆರೆಯಾಗಿರುವುದು.ತಾಲೂಕಿನ ಎತ್ತಿನಹೊಳೆ ಯೋಜನೆಯ ಪೈಪ್‌ಲೈನ್‌ನಿಂದ ಕುಂಬರಡಿ ಸಮೀಪ ನೀರು ಹೊರ ಬಂದಿರುವುದು. | Kannada Prabha

ಸಾರಾಂಶ

ಎತ್ತಿನಹೊಳೆ ಪೈಪ್‌ಲೈನ್‌ ಹಾದುಹೋಗಿರುವ ತಾಲೂಕಿನ ಕುಂಬರಡಿ ಎಸ್ಟೇಟ್‌ನಲ್ಲಿ ಪೈಪ್ ಒಡೆದ ಪರಿಣಾಮ ತಗ್ಗು ಪ್ರದೇಶಕ್ಕೆ ನೀರು ನುಗ್ಗುತ್ತಿದ್ದು, ಇದರಿಂದ ತಗ್ಗು ಪ್ರದೇಶದಲ್ಲಿರುವ ಹಲವು ಮನೆಗಳಿಗೆ ಹಾಗೂ ಜಮೀನುಗಳಿಗೆ ನೀರು ನುಗ್ಗಿರುತ್ತದೆ. ಅಪಾರ ಪ್ರಮಾಣದ ನೀರು ಹರಿದಿರುವುದರಿಂದ ರಸ್ತೆಗಳು ಕೆರೆಯಂತಾಗಿರುತ್ತದೆ. ಪೈಪ್‌ಲೈನ್ ಮೂಲಕ ಹೆಬ್ಬನಹಳ್ಳಿಯವರೆಗೂ ನೀರನ್ನು ನಿರಂತರವಾಗಿ ಪಂಪ್ ಮಾಡುತ್ತಿರುವುದರಿಂದ ಅಲ್ಲಲ್ಲಿ ನೀರು ಲೀಕೆಜ್ ಆಗಲು ಕಾರಣವಾಗಿದೆ. ಕಳೆದ ವಾರವಷ್ಟೇ ಮೊದಲನೇ ಹಂತದ ಕಾಮಗಾರಿಗೆ ಸಿಎಂ ಹಾಗೂ ಡಿಸಿಎಂ ಚಾಲನೆ ನೀಡಿದ್ದರು. ಇದೀಗ ಉದ್ಘಾಟನೆಯಾದ ಮೊದಲನೇ ಹಂತದ ಕಾಮಗಾರಿಯ ಲೀಕೇಜ್ ಆಗುತ್ತಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಎತ್ತಿನಹೊಳೆ ಯೋಜನೆ ಕಾಮಗಾರಿಯ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿರುವ ಘಟನೆ ತಾಲೂಕಿನ ಕುಂಬರಡಿ ಎಸ್ಟೇಟ್‌ನಲ್ಲಿ ಶನಿವಾರ ನಡೆದಿದೆ.

ಎತ್ತಿನಹೊಳೆ ಪೈಪ್‌ಲೈನ್‌ ಹಾದುಹೋಗಿರುವ ತಾಲೂಕಿನ ಕುಂಬರಡಿ ಎಸ್ಟೇಟ್‌ನಲ್ಲಿ ಪೈಪ್ ಒಡೆದ ಪರಿಣಾಮ ತಗ್ಗು ಪ್ರದೇಶಕ್ಕೆ ನೀರು ನುಗ್ಗುತ್ತಿದ್ದು, ಇದರಿಂದ ತಗ್ಗು ಪ್ರದೇಶದಲ್ಲಿರುವ ಹಲವು ಮನೆಗಳಿಗೆ ಹಾಗೂ ಜಮೀನುಗಳಿಗೆ ನೀರು ನುಗ್ಗಿರುತ್ತದೆ. ಅಪಾರ ಪ್ರಮಾಣದ ನೀರು ಹರಿದಿರುವುದರಿಂದ ರಸ್ತೆಗಳು ಕೆರೆಯಂತಾಗಿರುತ್ತದೆ. ಕಳಪೆ ಕಾಮಗಾರಿಯಿಂದಲೇ ಪೈಪ್ ಒಡೆದಿದೆ ಅನ್ನೋ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದ್ದು ಸೂಕ್ತ ಪರಿಹಾರಕ್ಕೆ ಜಮೀನು ಮಾಲೀಕರು ಒತ್ತಾಯಿಸಿದ್ದಾರೆ. ಇದೇ ಜಮೀನಿನಲ್ಲಿ ಹದಿನೈದು ದಿನಗಳ ಹಿಂದೆಯಷ್ಟೇ ಪೈಪ್ ಒಡೆದು ನೀರು ನುಗ್ಗಿತ್ತು ಅದನ್ನು ಎತ್ತಿನಹೊಳೆ ಅಧಿಕಾರಿಗಳು ಸರಿಪಡಿಸಿದ್ದರು. ಇದೀಗ ಮತ್ತೊಂದು ಜಾಗದಲಿ ಪೈಪ್ ಒಡೆದಿದೆ.

ಪೈಪ್‌ಲೈನ್ ಮೂಲಕ ಹೆಬ್ಬನಹಳ್ಳಿಯವರೆಗೂ ನೀರನ್ನು ನಿರಂತರವಾಗಿ ಪಂಪ್ ಮಾಡುತ್ತಿರುವುದರಿಂದ ಅಲ್ಲಲ್ಲಿ ನೀರು ಲೀಕೆಜ್ ಆಗಲು ಕಾರಣವಾಗಿದೆ. ಕಳೆದ ವಾರವಷ್ಟೇ ಮೊದಲನೇ ಹಂತದ ಕಾಮಗಾರಿಗೆ ಸಿಎಂ ಹಾಗೂ ಡಿಸಿಎಂ ಚಾಲನೆ ನೀಡಿದ್ದರು. ಇದೀಗ ಉದ್ಘಾಟನೆಯಾದ ಮೊದಲನೇ ಹಂತದ ಕಾಮಗಾರಿಯ ಲೀಕೇಜ್ ಆಗುತ್ತಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!