ಸಕಲೇಶಪುರ ತಾಲೂಕಿನ ಕಿರೇಹಳ್ಳಿಯ ಕಾಫಿ ತೋಟದಲ್ಲಿ ಯಶಸ್ವಿ ಪ್ರಾತ್ಯಕ್ಷಿಕೆ
ಕೇವಲ 24 ಗಂಟೆಗಿಂತ ಕಡಿಮೆ ಅವಧಿಯಲ್ಲಿ ಬರೋಬ್ಬರಿ ಒಂದು ನೂರು ಎಕರೆಯಷ್ಟು ಕೃಷಿ ಭೂಮಿಗೆ ನೀರುಣಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಚಿಕ್ಕಮಗಳೂರು ಮೂಲದ ವಾಟರ್ ಜೆಟ್ ಎಂಜಿನಿಯರ್ಸ್ ಮತ್ತು ಫಾರಂ ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟಿಂಗ್ ಸಂಸ್ಥೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಿರೇಹಳ್ಳಿಯ ಕಾಫಿ ತೋಟದಲ್ಲಿ ಯಶಸ್ವಿಯಾಗಿ ಪರಿಚಯಿಸಿದೆ.
ಇಡೀ ಪ್ರಪಂಚ ಮತ್ತು ದೇಶದಲ್ಲೇ ಮೊದಲ ಬಾರಿಗೆ ಇಂತಹ ಒಂದು ತಂತ್ರಗಾರಿಕೆಯನ್ನು ಮೊಟ್ಟದ ಮೊದಲ ಬಾರಿಗೆ ಆನಂದ್ ಫರೇರಾ ಅವರ ಸುಂಡೇಕೆರೆ ಬಳಿ ಕಿರೇಹಳ್ಳಿಯ ‘ಜೋಸ್ ಇಕೋ ಫ್ರೆಂಡ್ಲಿ ಕಾಫಿ ಪ್ಲಾಂಟೇಶನ್’ನಲ್ಲಿ ಕಾರ್ಯಗತಗೊಳಿಸಲಾಗಿದೆ.ಈ ತಂತ್ರಜ್ಞಾನಕ್ಕೆ ಆಷ್ಟ್ರೀಯನ್ ಕಂಪನಿ ಕೋಮೆಟ್ ಸಹಯೋಗದಲ್ಲಿ ತಯಾರಿಸರುವ ಸ್ಪ್ರಿಂಕ್ಲರ್, ಕಿಲ್ಲೋಸ್ಕರ್ ಸಂಸ್ಥೆ ಜನರೇಟರ್, ಪಂಪ್, ಪೈಪ್ ಮೊದಲಾದ ಪರಿಕರಗಳನ್ನು ವಿವಿಧ ಸಂಸ್ಥೆಗಳು ಸಹಕಾರದಲ್ಲಿ ರೂಪಿಸಲಾಗಿದೆ.
ಏಕಕಾಲಕ್ಕೆ ಸುಮಾರು 50 ಎಚ್ಪಿಯ 10 ಪಂಪ್ಗಳು ನೀರೆತ್ತಿ 100 ಎಕರೆ ಕಾಫಿ ತೋಟಕ್ಕೆ ರೈನಿ ಜೆಟ್ ಗಳ (ಸ್ಪ್ರಿಂಕ್ಲರ್) ಮೂಲಕ ನೀರು ಚಿಮ್ಮಿಸಲು ಆರಂಭಿಸಿದವು. ನೋಡ ನೋಡುತ್ತಿದ್ದಂತೆ ಇಡೀ ಕಾಫಿ ತೋಟದಲ್ಲಿ ವಿಶೇಷ ಮೈಕ್ರೋ ಕ್ಲೈಮೆಟ್ ಸೃಷ್ಟಿಯಾಗಿ ತೋಟದಲ್ಲಿ ಸಹಜವಾಗೇ ಮಳೆ ಸುರಿದ ವಿಶೇಷ ಅನುಭವ ಉಂಟಾಯಿತು.
---ಕೋಟ್---
- ಮೈಕಲ್ ಸದಾನಂದ ಬ್ಯಾಪ್ಟಿಸ್ಟ್, ಮುಖ್ಯಸ್ಥರು, ವಾಟರ್ ಜೆಟ್ ಎಂಜಿನಿಯರ್ಸ್ ಮತ್ತು ಫಾರಂ ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟಿಂಗ್, ಚಿಕ್ಕಮಗಳೂರು
ಆಷ್ಟ್ರೀಯನ್ ಕಂಪನಿ ರೈನ್ ಗನ್ ಕಾಫಿ ಬೆಳೆಗಾರರ ಗೇಮ್ ಚೇಂಜರ್ ಆಗಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಹಿಂದೆ ಬಳಕೆ ಮಾಡುತ್ತಿದ್ದ ರೈನ್ ಗನ್ಗಳಲ್ಲಿ ಇಷ್ಟೊಂದು ಗುಣಮಟ್ಟದ ನೀರು ಚಿಮ್ಮಿ ಸುವ ಕಾರ್ಯ ಆಗುತ್ತಿರಲಿಲ್ಲ. ಕಾಫಿ ತೋಟಕ್ಕೆ ನೀರು ಪೂರೈಕೆಗೆ ವಾಟರ್ ಜೆಟ್ಎಂಜಿನಿಯರ್ಸ್ ಮತ್ತು ರೈನಿ ರಿಸರ್ಚ್ ಸಂಸ್ಥೆ ನಿರ್ಮಿಸಿದ ಜಾಕ್ವೆಲ್ ವಿಶೇಷ. ಇದನ್ನು ನಗರ ಮತ್ತು ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಬಳಕೆ ಮಾಡಬಹುದಾದ ಸುಧಾರಿತ ತಂತ್ರಜ್ಞಾನವಾಗಿದೆ.
--ಕೋಟ್---
-ಎಂ.ಜೆ. ದಿನೇಶ್ ಅಧ್ಯಕ್ಷ, ಕಾಫಿ ಮಂಡಳಿ
ಫೋಟೋಸ್ಪ್ರಿಂಕ್ಲರ್ ಪ್ರಾತ್ಯಕ್ಷಿಕೆಗೆ ಹಾಸನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಚಾಲನೆ ನೀಡಿದರು. ಈ ವೇಳೆ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್, ಹಲಸೆ ಶಿವಣ್ಣ, ಮೈಕಲ್ ಸದಾನಂದ ಬ್ಯಾಪ್ಟಿಸ್ಟ್, ಆನಂದ್ ಫೆರೇರಾ ಮೊದಲಾದವರಿದ್ದರು.ಫೋಟೋ
ಕಾಫಿ ತೋಟದಲ್ಲಿ ವಿನೂತ ತಂತ್ರಜ್ಞಾನದ ಸ್ಪ್ರಿಂಕ್ಲರ್ ನಿಂದ ಮಳೆ ವಾತಾವರಣ ಸೃಷ್ಟಿಯಾಗಿರುವುದು.ಫೋಟೋ
ಜಾಕ್ವೆಲ್ಗೆ ಅಳವಡಿಕೆ ಮಾಡಿರುವ 50 ಎಚ್ಪಿ ಸಾಮರ್ಥ್ಯದ 10 ಪಂಪ್