ಶಿವಕುಮಾರ ಕುಷ್ಟಗಿ
ವೇಗವಾಗಿ ಚಲಿಸುವ ವಾಹನಗಳ ಅಬ್ಬರಕ್ಕೆ ಸಿಲುಕಿ ನರಿ, ಕಾಡುಬೆಕ್ಕು ಸೇರಿದಂತೆ ಹತ್ತಾರು ಪ್ರಭೇದದ ಪ್ರಾಣಿಗಳು ನಿರಂತರವಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದು, ಪರಿಸರಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ.
ಇತ್ತೀಚೆಗೆ (ಏ. 20) ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಕಾಲುವೆ ಸಮೀಪ ಅಪಘಾತದಲ್ಲಿ ಮೃತಪಟ್ಟ ಹೆಣ್ಣುನರಿಯ ಕಳೆಬರ ಪತ್ತೆಯಾಗಿದೆ. ಬಾದಾಮಿಯ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ಮತ್ತು ಶಿವಪ್ರಕಾಶ ಹೊಸಕೇರಿಮಠ ಅವರು ಈ ಘಟನೆಯನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ನಂತರ ವಿಷಯದ ತೀವ್ರತೆ ಗೊತ್ತಾಗಿದೆ.ಅಪಾಯದ ಅಂಚಿನಲ್ಲಿ ಕಿರು ಸಸ್ತನಿಗಳು: ಎನ್ಎಚ್- 52ರಲ್ಲಿ ದಿನದ 24 ಗಂಟೆಯೂ ಲಘು ಮತ್ತು ಬೃಹತ್ ವಾಹನಗಳ ಸಂಚಾರವಿರುತ್ತದೆ. ಈ ಹೆದ್ದಾರಿಯು ವನ್ಯಜೀವಿಗಳ ನೈಸರ್ಗಿಕ ಸಂಚಾರ ಪಥಗಳನ್ನು ಹಾದು ಹೋಗುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಇದರಿಂದಾಗಿ ನರಿ ಹೈನಾ, ಪುನುಗು ಬೆಕ್ಕು, ಕಾಡು ಬೆಕ್ಕು, ಮಂಗ, ಅಳಿಲು, ಹಾವುಗಳು, ಹಲ್ಲಿಗಳು ಹಾಗೂ ಉಭಯಚರಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ಚಕ್ರದಡಿ ಸಿಲುಕಿ ವ್ಯಾಪಕವಾಗಿ ಸಾವಿಗೀಡಾಗುತ್ತಿವೆ.
ಚಾಲಕರಲ್ಲಿ ಜಾಗೃತಿ: ಹುಬ್ಬಳ್ಳಿ- ವಿಜಯಪುರ ಮಾರ್ಗದಲ್ಲಿ ಸಣ್ಣ ಸಸ್ತನಿಗಳು ಮತ್ತು ಸರೀಸೃಪಗಳು ನಿರಂತರವಾಗಿ ಸಾವಿಗೀಡಾಗುತ್ತಿವೆ. ಅರಣ್ಯ ಇಲಾಖೆಯು ಕೂಡಲೇ ವನ್ಯಜೀವಿ ಸಂಚಾರವಿರುವ ವಲಯಗಳನ್ನು ಗುರುತಿಸಿ ವನ್ಯಜೀವಿ ದಾಟುವಿಕೆ ಫಲಕಗಳನ್ನು (ವೈಡ್ ಲೈಫ್ ಕ್ರಾಸ್ಸಿಂಗ್ ಬೋರ್ಡ್ಸ್) ಅಳವಡಿಸಬೇಕು. ಇದರಿಂದ ಚಾಲಕರಲ್ಲಿ ಜಾಗೃತಿ ಮೂಡಿಸಿ ಅಪಘಾತಗಳನ್ನು ತಕ್ಕಮಟ್ಟಿಗೆ ನಿಯಂತ್ರಿಸಬಹುದು ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್. ನಾಯಕ ತಿಳಿಸಿದರು.ಎಚ್ಚರಿಕೆ ಫಲಕ: