ಜನೌಷಧಿ ಕೇಂದ್ರ ರದ್ಧತಿ ಆದೇಶ ಹಿಂಪಡೆಯಿರಿ

KannadaprabhaNewsNetwork |  
Published : May 31, 2025, 12:21 AM ISTUpdated : May 31, 2025, 12:22 AM IST
30ಕೆಕೆಆರ್4:ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶುಕ್ರವಾರ ಪಕ್ಷದ ಮುಖಡರು, ಕಾರ್ಯಕರ್ತರು ಕಪ್ಪು ಬಟ್ಟೆ ಧರಿಸಿ ಜನೌಷಧಿ ಕೇಂದ್ರ ರದ್ದತಿ ವಾಪಸ್ ಪಡೆಯಲು ಆಗ್ರಹಿಸಿದರು.  | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರತಿಯೊಬ್ಬ ಬಡ ಜನರ ಆರೋಗ್ಯದ ಹಿತದೃಷ್ಠಿಯಿಂದ ಅತೀ ಕಡಿಮೆ ದರದಲ್ಲಿ ಔಷಧಿ ದೊರೆಯುವ ಉದ್ದೇಶದಿಂದ ೨೦೧೬ರಲ್ಲಿ ಜನೌಷಧಿ ಕೇಂದ್ರ ಜಾರಿಗೆ ತಂದಿದ್ದರಿಂದ ಬಡವರಿಗೆ ಔಷಧಿಗಳು ಅತೀ ಕಡಿಮೆ ದರದಲ್ಲಿ ದೊರೆಯುತ್ತಿದ್ದು

ಕೊಪ್ಪಳ(ಯಲಬುರ್ಗಾ): ರಾಜ್ಯದಲ್ಲಿ ಜನೌಷಧಿ ಕೇಂದ್ರಗಳ ಬಗ್ಗೆ ಆರೋಗ್ಯ ಸಚಿವ ದಿನೇಶ ಗೂಂಡುರಾವ್ ರದ್ಧತಿ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸರ್ಕಾರದ ನಡೆ ಖಂಡಿಸಿ ಬಿಜೆಪಿ ತಾಲೂಕು ಮಂಡಲದಿಂದ ಯಲಬುರ್ಗಾ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶುಕ್ರವಾರ ಪಕ್ಷದ ಮುಖಂಡರು, ಕಾರ್ಯಕರ್ತರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮಂಡಲದ ಅಧ್ಯಕ್ಷ ಮಾರುತಿ ಗಾವರಾಳ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರತಿಯೊಬ್ಬ ಬಡ ಜನರ ಆರೋಗ್ಯದ ಹಿತದೃಷ್ಠಿಯಿಂದ ಅತೀ ಕಡಿಮೆ ದರದಲ್ಲಿ ಔಷಧಿ ದೊರೆಯುವ ಉದ್ದೇಶದಿಂದ ೨೦೧೬ರಲ್ಲಿ ಜನೌಷಧಿ ಕೇಂದ್ರ ಜಾರಿಗೆ ತಂದಿದ್ದರಿಂದ ಬಡವರಿಗೆ ಔಷಧಿಗಳು ಅತೀ ಕಡಿಮೆ ದರದಲ್ಲಿ ದೊರೆಯುತ್ತಿದ್ದು, ಜನೌಷಧಿ ಕೇಂದ್ರಗಳು ಬಡ ಜನರ ಆರೋಗ್ಯ ಸಂಜೀವಿನಿಗಳಾಗಿದ್ದವು. ಇಂತಹ ಕೇಂದ್ರ ಮುಚ್ಚಲು ಹೊರಟಿರುವ ಸರ್ಕಾರ ಮತ್ತು ಸಚಿವರ ನಡೆ ಖಂಡನಾರ್ಹವಾಗಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಚಿವರಿಗೆ ಜನತೆಯ ಸದೃಢ ಆರೋಗ್ಯಬೇಕಾಗಿಲ್ಲ. ಅವರು ಔಷಧಿ ಸಿಗದೇ ನರಳಾಡುವ ಸ್ಥಿತಿಯನ್ನು ಸರ್ಕಾರ ನೋಡಬೇಕು ಎಂದುಕೊಂಡಿದೆ. ಕೂಡಲೇ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ, ಶಕುಂತಲಾದೇವಿ ಮಾಲಿಪಾಟೀಲ, ಅಮರೇಶ ಹುಬ್ಬಳ್ಳಿ, ಮಂಜುನಾಥ ನಾಡಗೌಡ್ರ ಮಾತನಾಡಿ, ಆಸ್ಪತ್ರೆ ಆವರಣದ ಕೇಂದ್ರಗಳನ್ನು ಮುಚ್ಚಿಸಲು ಕಾರಣವೇನು? ಮುಖ್ಯಮಂತ್ರಿ, ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಇದಕ್ಕೆ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಬಸನಗೌಡ ತೊಂಡಿಹಾಳ, ಎಸ್.ಎನ್. ಶ್ಯಾಗೋಟಿ, ಸಂತೋಷಿಮಾ ಜೋಶಿ , ಶಿವಲೀಲಾ ದಳವಾಯಿ, ಬಸವರಾಜ ಗುಳಗುಳಿ, ಅಯ್ಯನಗೌಡ ಕೆಂಚಮ್ಮನವರ್, ಕಲ್ಲೇಶಪ್ಪ ಕರಮುಡಿ, ಸುರೇಶ ಹೊಸಳ್ಳಿ ಪಪಂ ಸದಸ್ಯರು, ಪಕ್ಷದ ಮುಖಂಡರು ಇತರರಿದ್ದರು.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ