ಗೃಹಲಕ್ಷ್ಮೀ ಹಣದಲ್ಲಿ ರಸ್ತೆಯ ಮುಳ್ಳಿನ ಕಂಠಿ ತೆಗೆಸಿದ ಮಹಿಳೆ

KannadaprabhaNewsNetwork |  
Published : Jun 04, 2025, 01:56 AM ISTUpdated : Jun 04, 2025, 01:57 AM IST
3ಕೆಕೆಆರ್1:ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಗೃಹಲಕ್ಷ್ಮೀ ಹಣದಲ್ಲಿ ಜಮೀನಿಗೆ ತೆರಳುವ ರಸ್ತೆಯನ್ನು ಜೆಸಿಬಿ ಬಾಡಿಗೆ ಪಡೆದು ರೈತ ಮಹಿಳೆ ಸವಿತಾ ನಾಗರಡ್ಡಿ ಸ್ವಚ್ಛಗೊಳಿಸಿದ್ದಾರೆ.  | Kannada Prabha

ಸಾರಾಂಶ

ಯರೇಹಂಚಿನಾಳದಿಂದ ಕೊಟುಮಚಗಿ ಗ್ರಾಮಕ್ಕೆ ಹೋಗುವ 4 ಕಿಲೋ ಮೀಟರ್‌ ರಸ್ತೆಯಲ್ಲಿ ದಾರಿ ಕಾಣದಂತೆ ಜಾಲಿಗಿಡಗಳು ಬೆಳೆದು ನಿಂತಿದ್ದವು. ಇದನ್ನು ಜೆಸಿಬಿ ಬಾಡಿಗೆ ಪಡೆದು ಸವಿತಾ ಸ್ವಚ್ಛಗೊಳಿಸಿದ್ದಾರೆ.

ಕುಕನೂರು:

ಗೃಹಲಕ್ಷ್ಮೀ ಯೋಜನೆಯಡಿ ಬಂದ ಹಣದಲ್ಲಿ ತಾಲೂಕಿನ ಯರೇಹಂಚಿನಾಳ ಗ್ರಾಮದ ರೈತ ಮಹಿಳೆ ಸವಿತಾ ಉಮೇಶ ನಾಗರೆಡ್ಡಿ ಜಮೀನಿಗೆ ತೆರಳುವ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ನಿಂತು ಮುಳ್ಳಿನ ಕಂಠಿ ತೆರವುಗೊಳಿಸಲು ಬಳಸಿದ್ದಾರೆ. ಇವರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಜಮೀನಿಗೆ ತೆರಳುವ ರಸ್ತೆ ಪಕ್ಕದಲ್ಲಿ ದಾರಿ ಕಾಣದಂತೆ ಜಾಲಿ ಗಿಡಗಳು ಬೆಳೆದಿದ್ದವು. ರಸ್ತೆ ಸ್ವಚ್ಛತೆಗೆ ಹಲವು ಬಾರಿ ಗ್ರಾಪಂ ಅಧಿಕಾರಿಗಳಿಗೆ ಬೇಡಿಕೆ ಸಹ ಇಟ್ಟಿದ್ದರು. ಅವರು ಸ್ವಚ್ಛತೆಗೆ ಮುಂದಾಗದ ಕಾರಣ ತಾವೇ ಗೃಹಲಕ್ಷ್ಮೀ ಯೋಜನೆಯಡಿ ಬಂದ ₹ 22000 ದಲ್ಲಿ ಮುಳ್ಳು ಕಂಠಿ ಸ್ವಚ್ಛಗೊಳಿಸಿದ್ದಾರೆ.

ಯರೇಹಂಚಿನಾಳದಿಂದ ಕೊಟುಮಚಗಿ ಗ್ರಾಮಕ್ಕೆ ಹೋಗುವ 4 ಕಿಲೋ ಮೀಟರ್‌ ರಸ್ತೆಯಲ್ಲಿ ದಾರಿ ಕಾಣದಂತೆ ಜಾಲಿಗಿಡಗಳು ಬೆಳೆದು ನಿಂತಿದ್ದವು. ಇದನ್ನು ಜೆಸಿಬಿ ಬಾಡಿಗೆ ಪಡೆದು ಸವಿತಾ ಸ್ವಚ್ಛಗೊಳಿಸಿದ್ದಾರೆ.ರಸ್ತೆ ಸ್ವಚ್ಛತೆ ಬಗ್ಗೆ ಹಲವು ಬಾರಿ ಅಧಿಕಾರಿಗಳು ಹೇಳಿದರೂ ಸ್ಪಂದಿಸಲಿಲ್ಲ. ಹೀಗಾಗಿ ಗೃಹಲಕ್ಷ್ಮೀ ಹಣದಲ್ಲಿ ಕೂಡಿಟ್ಟ ₹ 22000 ದಲ್ಲಿ ರಸ್ತೆ ಸ್ವಚ್ಛತೆ ಮಾಡಿಸಿದ್ದೇನೆ. ಇದರಿಂದ ರೈತರು ತಮ್ಮ ಜಮೀನಿಗೆ ತೆರಳಲು ಅನುಕೂಲವಾಗಿದೆ ಎಂದು ರೈತ ಮಹಿಳೆ ಸವಿತಾ ನಾಗರಡ್ಡಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!