ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾರತ್ತಹಳ್ಳಿ ನಿವಾಸಿ ಕಲಿಂದಿ ಶ್ರೀವಾಸ್ತವ್ ಅವರ ಪ್ರಾಣಪಾಯದಿಂದ ಪರಾಗಿದ್ದು, ಕೆಲಸ ಮುಗಿಸಿಕೊಂಡು ಅವರು ಮನೆಗೆ ಮರಳುವಾಗ ಮಾರ್ಗ ಮಧ್ಯೆ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಘಟನೆ ನಡೆದಿದೆ. ತೊಂದರೆಗೆ ಸಿಲುಕಿದ್ದ ಅವರಿಗೆ ನೆರವಿನ ಹಸ್ತಚಾಚಿ ಹೆಡ್ ಕಾನ್ಸ್ಟೇಬಲ್ ವೈ.ಟಿ.ದತ್ತಾತ್ರೇಯ ಪ್ರಾಣ ಉಳಿಸಿದ್ದಾರೆ.
ಏನಾಯಿತು ಘಟನೆ?:ತಮ್ಮ ಕುಟುಂಬದ ಜತೆ ಮಾರತ್ತಹಳ್ಳಿಯಲ್ಲಿ ಕಲಿಂದಿ ನೆಲೆಸಿದ್ದು, ಸಾಫ್ಟ್ವೇರ್ ಕಂಪನಿಯಲ್ಲಿ ಅವರು ಉದ್ಯೋಗದಲ್ಲಿದ್ದಾರೆ. ಪ್ರತಿದಿನ ಕಾರಿನಲ್ಲಿ ಅವರು ಕೆಲಸಕ್ಕೆ ಹೋಗಿ ಬರುತ್ತಿದ್ದರು. ಅಂತೆಯೇ ಶುಕ್ರವಾರ ರಾತ್ರಿ 8.30ರಲ್ಲಿ ಕೆಲಸ ಮುಗಿಸಿ ಕಾರು ಚಲಾಯಿಸಿಕೊಂಡು ಟೆಕ್ಕಿ ಮನೆಗೆ ಹೊರಟ್ಟಿದ್ದರು. ಆಗ ಮಾರ್ಗ ಮಧ್ಯೆ ಸಿಲ್ಕ್ ಬೋರ್ಡ್ ಜಂಕ್ಷನ್ ಸಮೀಪ ಹಠಾತ್ತಾಗಿ ಅವರಿಗೆ ಉಸಿರಾಟ ಸಮಸ್ಯೆ ಎದುರಾಗಿದೆ. ಅದೇ ವೇಳೆ ಆ ಜಂಕ್ಷನ್ನಲ್ಲಿ ಮಡಿವಾಳ ಸಂಚಾರ ಠಾಣೆ ಹೆಚ್ಸಿ ದತ್ತಾತ್ರೇಯ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯಪಾಲರ ಪಯಣದ ಹಿನ್ನಲೆಯಲ್ಲಿ ಸಂಚಾರ ನಿರ್ವಹಣೆ ಕರ್ತವ್ಯದಲ್ಲಿ ಹೆಡ್ ಕಾನ್ಸ್ಟೇಬಲ್ ವ್ಯಸ್ತರಾಗಿದ್ದರು. ಆಗ ಕಾರಿನಲ್ಲಿ ಕಲಿಂದಿ ಅವರು ಕೈ ಸನ್ನೆ ಮಾಡಿ ರಕ್ಷಣೆಗೆ ಕರೆಯುತ್ತಿದ್ದನ್ನು ದತ್ತಾತ್ರೇಯ ಅವರ ಕಣ್ಣಿಗೆ ಬಿದ್ದಿದೆ. ತಕ್ಷಣೇ ಕಾರಿನ ಬಳಿಗೆ ತೆರಳಿ ಅವರಿಗೆ ದತ್ತಾತ್ರೇಯ ನೆರವಾಗಿದ್ದಾರೆ. ಆ ಕಾರಿಗೆ ಹ್ಯಾಂಡ್ ಬ್ರೇಕ್ ಹಾಕಿ ನಿಲ್ಲಿಸಿದ