ಬನ್ನಿತಾಳಪುರ ಚರಂಡಿ ಸಮಸ್ಯೆ: ಸ್ವಚ್ಛಗೊಳಿಸಲು ಸ್ತ್ರೀಯರ ಆಗ್ರಹ

KannadaprabhaNewsNetwork |  
Published : Apr 03, 2026, 01:45 AM IST
2ಜಿಪಿಟಿ5ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರ ಪೃಥ್ವಿ ಅಂತರ್ಧ್ವನಿ ಮಹಿಳಾ ಸಂಘದ ಸದಸ್ಯರು ಗ್ರಾಪಂಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಬನ್ನಿತಾಳಪುರ ಗ್ರಾಮದಲ್ಲಿ ದೀರ್ಘಕಾಲದಿಂದಲೂ ಚರಂಡಿ ಕೆಟ್ಟುನಿಂತಿದ್ದು, ನೀರು ನಿಂತು ದುರ್ವಾಸನೆಯಿಂದ ಆರೋಗ್ಯಕ್ಕೂ ಅಪಾಯ ಎದುರಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಸಮಸ್ಯೆ ಬಗೆಹರಿಸುವಂತೆ ಪೃಥ್ವಿ ಅಂತರ್ಧ್ವನಿ ಮಹಿಳಾ ಒಕ್ಕೂಟವು ಗ್ರಾಮ ಪಂಚಾಯ್ತಿಗೆ ಆಗ್ರಹಿಸಿದೆ.

- ಅಂತರ್ಧ್ವನಿ ಮಹಿಳಾ ಘಟಕದಿಂದ ದೂರು

---

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಬನ್ನಿತಾಳಪುರ ಗ್ರಾಮದಲ್ಲಿ ದೀರ್ಘಕಾಲದಿಂದಲೂ ಚರಂಡಿ ಕೆಟ್ಟುನಿಂತಿದ್ದು, ನೀರು ನಿಂತು ದುರ್ವಾಸನೆಯಿಂದ ಆರೋಗ್ಯಕ್ಕೂ ಅಪಾಯ ಎದುರಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಸಮಸ್ಯೆ ಬಗೆಹರಿಸುವಂತೆ ಪೃಥ್ವಿ ಅಂತರ್ಧ್ವನಿ ಮಹಿಳಾ ಒಕ್ಕೂಟವು ಗ್ರಾಮ ಪಂಚಾಯ್ತಿಗೆ ಆಗ್ರಹಿಸಿದೆ.

ಕೂಡಲೇ ಗ್ರಾಮದ ಚರಂಡಿ ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಬನ್ನಿತಾಳಪುರ ಗ್ರಾಮ ಪಂಚಾಯ್ತಿಗೆ ಲಿಖಿತ ಮನವಿ ಸಲ್ಲಿಸಿ ಮಹಿಳೆಯರು ಆಗ್ರಹಿಸಿದರು.

ಈ ಸಮಯದಲ್ಲಿ ಮಾತನಾಡಿದ ಸದಸ್ಯರು, ಇದು ಒಂದು ದಿನದ ಸಮಸ್ಯೆಯಲ್ಲ. ಹಲವು ಬಾರಿ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದರು.

ಗ್ರಾಮದ ಮಕ್ಕಳು, ಹಿರಿಯರಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಗ್ರಾಮ ಪಂಚಾಯ್ತಿ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಮೇಲಧಿಕಾರಿಗಳನ್ನು ಭೇಟಿಯಾಗಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

--

2ಜಿಪಿಟಿ5

ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರ ಪೃಥ್ವಿ ಅಂತರ್ಧ್ವನಿ ಮಹಿಳಾ ಸಂಘದ ಸದಸ್ಯರು ಗ್ರಾಪಂಗೆ ಮನವಿ ಸಲ್ಲಿಸಿದರು.

--2ಜಿಪಿಟಿ6

ಬನ್ನಿತಾಳಪುರ ಗ್ರಾಮದ ರಸ್ತೆ ಬದಿಯ ಚರಂಡಿ ತುಂಬಿ ತುಳುಕುತ್ತಿದ್ದು, ದುರ್ನಾಥ ಆವರಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧಾರ್ಮಿಕ ಪರಂಪರೆ ರಕ್ಷಗಾಗಿ ಪಂಚಪೀಠಗಳ ಉಗಮ
ಮಾನವನ ಬದುಕು ವಿಶ್ವ ಮಾನ್ಯವಾಗಲು ಸಂವಿಧಾನ ಬಳಸಿಕೊಳ್ಳಿ