ಯರನಾಳ ಕಾಳಿಕಾದೇವಿ ಮಠ ತ್ರಿವೇಣಿ ಸಂಗಮ: ಚಂದ್ರಶೇಖರ ಸ್ವಾಮೀಜಿ

KannadaprabhaNewsNetwork |  
Published : Nov 14, 2024, 12:58 AM IST
ಹುಕ್ಕೇರಿ ತಾಲೂಕಿನ ಯರನಾಳದಲ್ಲಿ ಬುಧವಾರ ಆರಂಭವಾದ ಕಾಳಿಕಾದೇವಿ ಮಠದ ಯಾತ್ರಾ ಮಹೋತ್ಸವದಲ್ಲಿ ಚಂದ್ರಶೇಖರ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದ ಕಾಳಿಕಾದೇವಿ ಮಠ ಚಿಕ್ಕ ಭಾರತವಾಗಿದೆ ಎಂದು ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ತಾಲೂಕಿನ ಯರನಾಳ ಗ್ರಾಮದ ಕಾಳಿಕಾದೇವಿ ಮಠ ಚಿಕ್ಕ ಭಾರತವಾಗಿದೆ ಎಂದು ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಬಣ್ಣಿಸಿದರು.

ಯರನಾಳದಲ್ಲಿ ಬುಧವಾರ ಆರಂಭವಾದ ಮಹಾಮಾತಾ ಕಾಳಿಕಾದೇವಿ ಯಾತ್ರಾ ಮಹೋತ್ಸವದಲ್ಲಿ ಚಂಡಿಕಾ ಹೋಮಕ್ಕೆ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಬ್ರಹ್ಮಾನಂದ ಸ್ವಾಮೀಜಿ ಸಾರಥ್ಯದಲ್ಲಿ ಕಾಳಿಕಾದೇವಿ ಮಠ ಚಿಕ್ಕ ಭಾರತವಾಗಿದೆ. ಈ ಧಾರ್ಮಿಕ ಕೇಂದ್ರದಲ್ಲಿ ಹೃದಯದಿಂದ ಬರುವ ವಾಣಿಗಳು ಭಕ್ತರ ಪಾಲಿಗೆ ಅಮೃತ ನುಡಿಗಳಾಗಿವೆ. ಹಾಗಾಗಿ ಇದೊಂದು ತ್ರಿವೇಣಿ ಸಂಗಮದಂತಿದ್ದು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯದ ಭಕ್ತರ ಪಾಲಿನ ಕಾಮಧೇನು ಎಂದು ಅವರು ಹೇಳಿದರು.

ಪೀಠಾಧಿಪತಿ ಬ್ರಹ್ಮಾನಂದ ಸ್ವಾಮೀಜಿ ಮಾತನಾಡಿ, ಮಹಿಳೆಯರಿಗೆ ಗೌರವ ಕೊಡುವ ದೇಶ ಭಾರತವಾಗಿದೆ. ದೇಶದ ಹಿರಿಮೆ ಹೆಚ್ಚಿಸುವಲ್ಲಿ ಮಠಗಳ ಪಾತ್ರ ಅವಿಸ್ಮರಣೀಯ ಎಂದರು.

ಮುಖಂಡರಾದ ಮುಕುಂದ ಮಠದ, ಶಂಕರಯ್ಯ ಮಠದ, ಸುರೇಶ ತಳವಾರ, ಆನಂದ ಹೊಸಮನಿ, ಕಲ್ಲಪ್ಪ ಕಮತಿ, ಆನಂದ ವಸ್ತ್ರದ, ಗೋಪಾಲ ಮಠದ, ರಮೇಶ ಹುಂಜಿ, ಹರಿಕೃಷ್ಣಾ, ಅಭಿನವ, ಯಲ್ಲಾಪುರದ ವೇದ ಅಧ್ಯಯನ ಪಂಡಿತರರಾದ ರಾಮಕೃಷ್ಣ ಭಟ್ಟರ, ಗಣಪತಿ ಭಟ್ಟ, ವಿಶ್ವನಾಥ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ