ಯುವ ಬ್ರಿಗೇಡ್‌ನಿಂದ ಪ್ರಗತಿ ಅನುದಾನಿತ ಶಾಲೆಗೆ ಸುಣ್ಣಬಣ್ಣ

KannadaprabhaNewsNetwork |  
Published : Oct 20, 2025, 01:02 AM IST
19ಕೆಆರ್ ಎಂಎನ್ 3.ಜೆಪಿಜಿರಾಮನಗರದ ಪ್ರಗತಿ ವಿದ್ಯಾ ಸಂಸ್ಥೆಯ ಶಾಲೆಯ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಡೆಸ್ಕ್‌ಗಳನ್ನು ಯುವ ಬ್ರಿಗೇಡ್ ನವರು ಕೊಡುಗೆಯಾಗಿ ನೀಡಿದರು. | Kannada Prabha

ಸಾರಾಂಶ

ರಾಮನಗರ: ಚರ್ಕವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರು ನಗರದ ಪ್ರಗತಿ ವಿದ್ಯಾ ಸಂಸ್ಥೆಯ ಗೋಡೆಗಳಿಗೆ ಬಣ್ಣ ಬಳಿದು ಶಾಲೆಯನ್ನು ಚೆಂದಗೊಳಿಸಿದ್ದಾರೆ.

ರಾಮನಗರ: ಚರ್ಕವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರು ನಗರದ ಪ್ರಗತಿ ವಿದ್ಯಾ ಸಂಸ್ಥೆಯ ಗೋಡೆಗಳಿಗೆ ಬಣ್ಣ ಬಳಿದು ಶಾಲೆಯನ್ನು ಚೆಂದಗೊಳಿಸಿದ್ದಾರೆ. ಭಾನುವಾರ ಬೆಳಿಗ್ಗೆ ಸುಮಾರು 20ರಿಂದ 30 ಮಂದಿಯ ತಂಡ ಅನುದಾನಿತ ಪ್ರಗತಿ ವಿದ್ಯಾಸಂಸ್ಥೆಯ ಗೋಡೆಗಳನ್ನು ಉಜ್ಜಿ, ಸ್ವಚ್ಛಗೊಳಿಸಿ ನಂತರ ಬಣ್ಣ ಬಳಿದರು.

ಈ ವೇಳೆ ಮಾತನಾಡಿದ ಚರ್ಕವರ್ತಿ ಸೂಲಿಬೆಲೆ, ಪ್ರಗತಿ ವಿದ್ಯಾ ಸಂಸ್ಥೆ, ಚನ್ನಪಟ್ಟಣದ ಪಟೇಲ್‌ದೊಡ್ಡಿಯ ಸರ್ಕಾರಿ ಶಾಲೆ ಸೇರಿದಂತೆ ರಾಜ್ಯದಲ್ಲಿರುವ ಸುಮಾರು 250ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಗೋಡೆಗಳಿಗೆ ಬಣ್ಣ ಬಳಿದು, ಶಾಲೆಯ ಆವರಣವನ್ನು ಸ್ವಚ್ಚಗೊಳಿಸಲಾಗಿದೆ. ಕೆಲವು ತಿಂಗಳುಗಳ ಹಿಂದೆ ಪ್ರಗತಿ ಶಾಲೆಯ ಹಂಚಿನ ಛಾವಣಿಗೆ ಟಾರ್ ಶೀಟ್‌ಗಳನ್ನು ಹೊದಿಸಲಾಗಿತ್ತು. ತದನಂತರ ಮಳೆಗಾಳದಲ್ಲಿ ತರಗತಿಗಳಲ್ಲಿ ಮಳೆ ನೀರು ಜಿನುಗುವುದು ನಿಂತಿದೆ. ಪ್ರಗತಿ ಶಾಲೆಯಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರ ಶ್ರಮದಾನವಿದೆ ಆದರೆ ಬೆಂಗಳೂರಿನ ಐರನ್ ಮೌಂಟೆನ್ ಎಂಬ ಉದ್ಯಮ ಸಂಸ್ಥೆ ಬಣ್ಣ, ಡೆಸ್ಕ್ ಮುಂತಾದವುಗಳಿಗೆ ವೆಚ್ಚ ಮಾಡಿದೆ ಎಂದು ಹೇಳಿದರು.

ತಮ್ಮ ಸಂಘಟನೆಯದ್ದು ಸ್ವಯಂ ಸೇವಕರ ಆಧಾರಿತ ಸೇವೆ. ಶಾಲೆಯ ಗೋಡೆಗಳಿಗೆ ಬಳಿಯುತ್ತಿರುವ ಬಣ್ಣ ಸಗಣಿಯಿಂದ ತಯಾರಿಸಿದ್ದಾಗಿದೆ. ಬೀದರ್‌ನ ಕೈಗಾರಿಕೆಯಲ್ಲಿ ಈ ಬಣ್ಣ ಉತ್ಪಾದನೆಯಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಬಣ್ಣದ ವಿಶೇಷತೆ ಬಗ್ಗೆ ಮಾಹಿತಿ ನೀಡಿದರು.

ಐರನ್ ಮೌಂಟೇನ್ ಉದ್ಯಮದ ವ್ಯವಸ್ಥಾಪಕಿ ನಮಿತಾ ಮಾತನಾಡಿ, ತಮ್ಮ ಸಂಬಂಧಿಕರೊಬ್ಬರ ಮಗು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದೆ. ಶಾಲೆಯ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದಾಗ, ಈ ಶಾಲೆಯ ಸ್ಥಿತಿ ಅರ್ಥವಾಯಿತು. ತಮ್ಮ ಉದ್ಯಮದ ಸಿಎಸ್ಆರ್ ನಿಧಿಯಿಂದ ಶಾಲೆಗೆ ಒಂದು ರೂಪ ಕೊಡಬೇಕು ಎಂದು ಅನಿಸಿತು. ಇದಕ್ಕೆ ಪೂರಕವಾಗಿ ಯುವ ಬ್ರಿಗೇಡ್‌ನ ಚರ್ಕವರ್ತಿ ಸೂಲಿಬೆಲೆಯವರು ಸಹ ಸ್ಪಂದಿಸಿದರು ಎಂದು ಹೇಳಿದರು.

ಪ್ರಗತಿ ಶಾಲೆಯ ತರಗತಿಗಳಿಗೆ ಅಗತ್ಯವಾಗಿದ್ದ ಸೀಲಿಂಗ್ ಫ್ಯಾನ್‌ಗಳು, ಡೆಸ್ಕ್‌ಗಳು, ಗ್ರೀನ್ ಬೋರ್ಡುಗಳು, ವಾಟರ್ ಫಿಲ್ಟರ್, ಹಂಚಿನ ಮೇಲೆ ಟಾರ್ ಶೀಟ್‌ಗಳ ಹೊದಿಕೆ, ಅಲ್ಯೂಮೀನಿಯಂ ಕಿಟಕಿಗಳನ್ನು ಪೂರೈಸಲಾಗಿದೆ. ವಿದ್ಯಾರ್ಥಿಗಳಿಗೆ ಟೈ, ಬೆಲ್ಟ್, ಸಾಕ್ಸ್, ಸಮವಸ್ತ್ರ ನೀಡಲಾಗಿದೆ. ಇಂದು ಗೋಡೆಗಳಿಗೆ ಬಣ್ಣ ಬಳಿಯಲಾಗುತ್ತಿದೆ. ಜೊತೆಗೆ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಡೆಸ್ಕ್‌ಗಳನ್ನು ಸಹ ಕೊಡುಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಪ್ರಗತಿ ಶಾಲೆಯ ಅಧ್ಯಕ್ಷ ಟಿ.ಅರ್.ರಾಮಚಂದ್ರ, ಕಾರ್ಯದರ್ಶಿ ಯಾದವೇಂದ್ರ, ಮುಖ್ಯ ಶಿಕ್ಷಕಿ ದಾಕ್ಷಾಯಿಣಿ ಮಾತನಾಡಿ ಚರ್ಕವರ್ತಿ ಸೂಲಿಬೆಲೆ, ಐರನ್ ಮೌಂಟೆನ್‌ ನಮಿತ ಮತ್ತು ಯುವ ಬ್ರಿಗೇಡ್ ಕಾರ್ಯಕರ್ತರ ಶ್ರಮಕ್ಕೆ ಆಭಾರಿಯಾಗಿರುವುದಾಗಿ ತಿಳಿಸಿದರು.

ತಮ್ಮದು ಅನುದಾನ ರಹಿತ ಕನ್ನಡ ಶಾಲೆ, ದಾನಿಗಳ ನೆರವಿನಿಂದಲೇ ಅಭಿವೃದ್ಧಿಯಾಗಬೇಕಾಗಿದೆ. ತಮ್ಮ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಇಂದು ನಡೆದ ಶ್ರಮದಾನದಲ್ಲಿ ಯುವ ಬ್ರಗೇಡ್ ಕಾರ್ಯಕರ್ತರೊಂದಿಗೆ ಶಾಲೆಯ ಹಳೆಯ ವಿದ್ಯಾರ್ಥಿಗಳು ಸಹ ಪಾಲ್ಗೊಂಡಿದ್ದರು ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಐರನ್ ಮೌಂಟೆನ್‌ನ ಪ್ರಶಾಂತ್ ಹಿರೇಮಠ್, ಯುವ ಬ್ರಿಗೇಡ್‌ನ ಕೃಷ್ಣ, ರಘುವೀರ್, ಸಿದ್ದರಾಜು, ತೇಜಸ್, ರಾಜು, ಸಮಾಜ ಸೇವಕಿ ವಿ.ಆಶಾ ಮುಂತಾದವರು ಶ್ರಮದಾನ ನೀಡಿದರು.

ಕೋಟ್‌.............

1ರಿಂದ 10ನೇ ತರಗತಿ ಮಕ್ಕಳಿಗೆ ಮೌಲ್ಯ ಶಿಕ್ಷಣ ಜೋಡಣೆಗೆ ಸರ್ಕಾರ ಮುಂದಾಗಿರುವುದು ಒಳ್ಳೆಯ ವಿಚಾರ. ಮುಖ್ಯಮಂತ್ರಿ ಆದಿಯಾಗಿ ಪ್ರತಿಯೊಬ್ಬರೂ ಇನ್ನು ಮುಂದೆ ಸುಳ್ಳು ಸುದ್ದಿಗಳನ್ನು ಹಬ್ಬಿಸಲ್ಲ ಎಂದು ನಿಶ್ಚಯ ಮಾಡಬೇಕು. ಮೌಲ್ಯಯುತ ಜವಾಬ್ದಾರಿಗಳನ್ನು ತಮ್ಮಮೇಲೆ ತಾವು ಹೇರಿಕೊಳ್ಳಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಮೌಲ್ಯ ಶಿಕ್ಷಣ ಬಹಳ ಮುಖ್ಯ. ದೇಶಕಟ್ಟುವ ಕೆಲಸ ಮಾಡಿದವರು, ಮೌಲ್ಯಗಳನ್ನ ಅಳವಡಿಸಿಕೊಂಡು ಬದುಕಿದವರನ್ನ ಮಕ್ಕಳಿಗೆ ಮಾಡಲ್ ಆಗಿ ತೋರಿಸುವ ಕೆಲಸ ಆಗಬೇಕು.

-ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕರು, ಯುವ ಬ್ರಿಗೇಡ್

19ಕೆಆರ್ ಎಂಎನ್ 3.ಜೆಪಿಜಿ

ರಾಮನಗರದ ಪ್ರಗತಿ ವಿದ್ಯಾ ಸಂಸ್ಥೆಯ ಶಾಲೆಯ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಡೆಸ್ಕ್‌ಗಳನ್ನು ಯುವ ಬ್ರಿಗೇಡ್ ನವರು ಕೊಡುಗೆಯಾಗಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ರಾಹ್ಮಣರು ನಮ್ಮನ್ನು ಗುಲಾಮ ಮಾಡಲು ಹಿಂದು ಧರ್ಮ ಹುಟ್ಟು ಹಾಕಿದ್ರು : ನಿವೃತ್ತ ಜಡ್ಜ್‌
ಇಂದಿನಿಂದ ಕಾವೇರಲಿದೆ ಉತ್ತರ ಕರ್ನಾಟಕದ ಚರ್ಚೆ-3 ದಿನ ವಿಧಾನಮಂಡಲದಲ್ಲಿ ಈ ಬಗ್ಗೆ ಕಲಾಪ