ಧಾರವಾಡ:
ಪರಿಸರವಾದಿ ಪಂಚಾಕ್ಷರಿ ಹಿರೇಮಠ ಸರ್ವಾಧ್ಯಕ್ಷತೆಯಲ್ಲಿ ಸಮಾವೇಶವು ಸಂಜೆ 4ಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗ್ರಾಮವಿಕಾಸ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ನಾಯಕ ಅವರಿಂದ ಚಾಲನೆಗೊಳ್ಳಲಿದೆ. ಅಧ್ಯಕ್ಷತೆಯನ್ನು ವಿಪ ಸದಸ್ಯ ಎಸ್.ವಿ. ಸಂಕನೂರ ವಹಿಸುವರು. ಸಾಧಕರಿಗೆ ಸನ್ಮಾನ, ಸುಗಮ ಸಂಗೀತ, ಜಾನಪದ ಸಂಗೀತ, ನೃತ್ಯ ಕಾರ್ಯಕ್ರಮಗಳಿವೆ.
ಯುವ ಸಮಾವೇಶದ ಭಾಗವಾಗಿ ಶನಿವಾರ ಬೆಳಗ್ಗೆ 10.30ಕ್ಕೆ ಕೆಇ ಬೋರ್ಡಿನ ಪ್ರಥಮ ದರ್ಜೆ ಕಾಲೇಜು, ಅಂಜುಮನ್ ಸಂಸ್ಥೆಯ ಪಿಯು ಕಾಲೇಜು ಸೇರಿದಂತೆ ನಗರದ ಇತರೆ 11 ಕಾಲೇಜುಗಳಲ್ಲಿ ಏಕಕಾಲದಲ್ಲಿ ಯುವಚಿಂತನೆ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳು ಪ್ರತ್ಯೇಕವಾಗಿ ಕಾಲೇಜುಗಳಲ್ಲಿ ಯುವಕರಿಗೆ ಮಾರ್ಗದರ್ಶನ ಮಾಡಲಿದ್ದಾರೆ ಎಂದು ಪ್ರತಿಷ್ಠಾನ ಅಧ್ಯಕ್ಷ ಎಂ.ಎಸ್. ಪರಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸರ್ವಾಧ್ಯಕ್ಷರ ಕುರಿತು:
ಕೆಇ ಬೋರ್ಡ್:
ಅಣ್ಣಿಗೇರಿ:ವೈ.ಬಿ. ಅಣ್ಣಿಗೇರಿ ವಿಜ್ಞಾನ ಕಾಲೇಜಿನಲ್ಲಿ ನಡೆಯುವ ಚಿಂತನೆಯಲ್ಲಿ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ ಆಗಮಿಸುವರು. ಉದ್ಘಾಟನೆಯನ್ನು ಬಿಜೆಪಿ ಮುಖಂಡರಾದ ಸವಿತಾ ಅಮರಶೆಟ್ಟಿ ಮಾಡುವರು. ಅಧ್ಯಕ್ಷತೆಯನ್ನು ನಾಗೇಶ ಅಣ್ಣಿಗೇರಿ ವಹಿಸುವರು. ಅತಿಥಿಗಳಾಗಿ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಡಾ. ಬಿ.ಆರ್. ರಾಠೋಡ, ಜಯಶ್ರೀ ಪಾಟೀಲ, ಸಂಧ್ಯಾ ಅಂಬಡಗಟ್ಟಿ, ಡಾ. ಮಹೇಶ ಹೊರಕೇರಿ, ಡಾ. ಶಿವಾನಂದ ಶೆಟ್ಟರ, ಡಾ. ಶಂಭು ಹೆಗಡಾಳ, ಅರುಣ ಶೀಲವಂತ ಆಗಮಿಸುವರು.
ಪ್ರಸ್ತುತ ಯುವ ಸಮುದಾಯ ಅಂತರ್ಜಾಲದ ದಾಸರಾಗುತ್ತಿದ್ದು, ಶಿಕ್ಷಣ ಹಾಗೂ ಜ್ಞಾನಕ್ಕೆ ಪೂರಕವಾಗಿ ಮಾತ್ರ ಅದರ ಬಳಕೆಯಾಗಬೇಕು. ಜತೆಗೆ ಯುವ ಸಮುದಾಯ ಹಿರಿಯರನ್ನು ಗೌರವಿಸಿ ಅವರನ್ನು ಮಾರ್ಗದರ್ಶನ ಪಡೆದು ಉತ್ತಮ ಸಮಾಜ ಕಟ್ಟಬೇಕು. ಈ ಹಿನ್ನೆಲೆಯಲ್ಲಿ ಸಮಾವೇಶ ದಾರಿ ತೋರಬೇಕಿದೆ ಎಂದು ಪರಿಸರವಾದಿ ಪಿ.ವಿ. ಹಿರೇಮಠ ಹೇಳಿದರು. ಇಂದಿನ ದಿನಮಾನಗಳಲ್ಲಿ ಸಮರ್ಥ ಯುವ ಸಂಘಟನೆಗಳ ಕೊರತೆ ಸಮಾಜಕ್ಕೆ ಎದ್ದು ಕಾಣುತ್ತಿದೆ. ಆದ್ದರಿಂದ ಯುವ ಚಿಂತನೆ, ಮಹಿಳಾ ಸಬಲೀಕರಣ, ಪರಿಸರ ರಕ್ಷಣೆಯಲ್ಲಿ ಯುವ ಸಮುದಾಯದ ಪಾತ್ರ, ಪರಿಸರಕ್ಕೆ ಪೂರಕವಾಗಿ ಜೀವನ ಮಾಡುವ ಕುರಿತು ಯುವಕರನ್ನು ಒಗ್ಗೂಡಿಸಿ ಅವರಲ್ಲಿ ಜಾಗೃತಿ ಮೂಡಿಸುವುದೇ ಈ ಸಮಾವೇಶದ ಉದ್ದೇಶ ಎಂದು ಯುವ ಸಂಘಟಕ ಮಾರ್ತಾಂಡಪ್ಪ ಕತ್ತಿ ತಿಳಿಸಿದರು.