ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿ : ಮೈಸೂರು ವಾರಿಯರ್ಸ್‌ ಫೈನಲ್‌ಗೆ ಲಗ್ಗೆ

KannadaprabhaNewsNetwork |  
Published : Sep 01, 2024, 01:49 AM ISTUpdated : Sep 01, 2024, 04:13 AM IST
ಕಾರ್ತಿಕ್‌ | Kannada Prabha

ಸಾರಾಂಶ

ಸೆಮೀಸ್‌ನಲ್ಲಿ ಸೋತ ಹುಬ್ಬಳ್ಳಿ ಟೈಗರ್ಸ್‌. ಇದರೊಂದಿಗೆ ಕಳೆದ ಬಾರಿ ಫೈನಲ್‌ ಸೋಲಿಗೆ ಮೈಸೂರು ಸೇಡು ತೀರಿಸಿಕೊಂಡಿತು. ಭಾನುವಾರ ಫೈನಲ್‌ ಪಂದ್ಯ ನಡೆಯಲಿದೆ.

 ಬೆಂಗಳೂರು :  ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್‌ ಸತತ 2ನೇ ಬಾರಿ ಫೈನಲ್‌ ಪ್ರವೇಶಿಸಿದೆ. ಶನಿವಾರ ಟೂರ್ನಿಯ 2ನೇ ಸೆಮಿಫೈನಲ್‌ನಲ್ಲಿ ಕಳೆದ ಬಾರಿ ಚಾಂಪಿಯನ್‌ ಹುಬ್ಬಳ್ಳಿ ಟೈಗರ್ಸ್‌ ವಿರುದ್ಧ 9 ರನ್‌ ರೋಚಕ ಗೆಲುವು ಸಾಧಿಸಿತು.

 ಇದರೊಂದಿಗೆ ಕಳೆದ ಬಾರಿ ಫೈನಲ್‌ ಸೋಲಿಗೆ ಮೈಸೂರು ಸೇಡು ತೀರಿಸಿಕೊಂಡಿತು.ಮೊದಲು ಬ್ಯಾಟ್‌ ಮಾಡಿದ ಮೈಸೂರು 8 ವಿಕೆಟ್‌ಗೆ 177 ರನ್‌ ಕಲೆಹಾಕಿತು. ಕಾರ್ತಿಕ್‌ ಎಸ್‌.ಯು. 43 ಎಸೆತಗಳಲ್ಲಿ 53 ರನ್‌ ಸಿಡಿಸಿದರು. ಶ್ರೀನಿವಾಸ್‌ ಶರತ್‌ 26, ಮನೋಜ್‌ ಭಾಂಡಗೆ 11 ಎಸೆತಗಳಲ್ಲಿ 26 ರನ್‌ ಕೊಡುಗೆ ನೀಡಿದರು. ತಂಡ ಕೊನೆ 3 ಓವರ್‌ಗಳಲ್ಲಿ 50 ರನ್‌ ಗಳಿಸಿತು.ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಹುಬ್ಬಳ್ಳಿ ಕಾರ್ತಿಕೇಯ ಕೆ.ಪಿ. ಹೋರಾಟದ ಹೊರತಾಗಿಯೂ 20 ಓವರ್‌ಗಳಲ್ಲಿ 00 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. 

ಕಾರ್ತಿಕೇಯ 39 ಎಸೆತಗಳಲ್ಲಿ ಔಟಾಗದೆ 61 ರನ್‌ ಗಳಿಸಿದರು. ತಿಪ್ಪಾರೆಡ್ಡಿ 19 ಎಸೆತಗಳಲ್ಲಿ 33 ರನ್‌ ಕೊಡುಗೆ ನೀಡಿದರು. ಕೃಷ್ಣನ್‌ ಶ್ರೀಜಿತ್‌ 20, ಮನ್ವಂತ್‌ ಕುಮಾರ್‌ ಔಟಾಗದೆ 21 ರನ್ ಸಿಡಿಸಿದರು.ಸ್ಕೋರ್‌: ಮೈಸೂರು 20 ಓವರಲ್ಲಿ 177/8 (ಕಾರ್ತಿಕ್‌ 53, ಮನೋಜ್‌ 26, ಕುಮಾರ್‌ 3/37), ಹುಬ್ಬಳ್ಳಿ 20 ಓವರಲ್ಲಿ 168/5 (ಕಾರ್ತಿಕೇಯ 61, ತಿಪ್ಪಾರೆಡ್ಡಿ 33, ಕೆ.ಗೌತಮ್‌ 3/29)

ಬೆಂಗ್ಳೂರು vs ಮೈಸೂರು ನಡುವೆ ಇಂದು ಫೈನಲ್‌

ಟೂರ್ನಿಯ ಫೈನಲ್‌ ಭಾನುವಾರ ನಡೆಯಲಿದ್ದು, ಬೆಂಗಳೂರು ಬ್ಲಾಸ್ಟರ್ಸ್‌ ಹಾಗೂ ಮೈಸೂರು ವಾರಿಯರ್ಸ್‌ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಬೆಂಗಳೂರು 2022ರಲ್ಲಿ ಫೈನಲ್‌ನಲ್ಲಿ ಸೋತಿದ್ದರೆ, ಮೈಸೂರು ಕಳೆದ ಆವೃತ್ತಿಯಲ್ಲಿ ರನ್ನರ್‌-ಅಪ್‌ ಆಗಿತ್ತು. ಇತ್ತಂಡಗಳು ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿವೆ.

03ನೇ ಗೆಲುವು: ಹುಬ್ಬಳ್ಳಿ ವಿರುದ್ಧ ಮೈಸೂರಿಗಿದು ಈ ಬಾರಿ ಸತತ 3ನೇ ಜಯ. ಲೀಗ್‌ ಹಂತದಲ್ಲಿ 2 ಪಂದ್ಯಗಳಲ್ಲೂ ಗೆದ್ದಿತ್ತು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಚಿನ್ನಸ್ವಾಮಿಯಲ್ಲಿ ಪಂದ್ಯಕ್ಕೆ ಇನ್ನೂ ಸಿಗದ ಅನುಮತಿ
ಟಿ20 ವಿಶ್ವಕಪ್‌ನಿಂದ ಉಪನಾಯಕ ಗಿಲ್‌ಗೆ ಗೇಟ್‌ಪಾಸ್‌, ಕಿಶನ್ ಆಯ್ಕೆ!