ದುಬೈ: ಭಾರತದ ಬ್ಯಾಟರ್ ಶ್ರೇಯಸ್ ಅಯ್ಯರ್ ಮಂಗಳವಾರ ಐಸಿಸಿ ಮಾರ್ಚ್ ತಿಂಗಳ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆಯಾದರು. ಚಾಂಪಿಯನ್ಸ್ ಟ್ರೋಫಿಯಲ್ಲಿ 243 ರನ್ ಸಿಡಿಸಿ, ಭಾರತ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ರೇಯಸ್, ನ್ಯೂಜಿಲೆಂಡ್ನ ರಚಿನ್ ರವೀಂದ್ರ ಹಾಗೂ ಜೇಕಬ್ ಡಫಿ ಅವರನ್ನು ಹಿಂದಿಕ್ಕಿ ಪ್ರಶಸ್ತಿ ಗಳಿಸಿದ್ದಾರೆ.
ವಿರುದ್ಧ ಭಾರತಕ್ಕೆ
ಏಕದಿನ, ಟಿ20 ಸರಣಿಢಾಕಾ: ಈ ವರ್ಷ ಆಗಸ್ಟ್ನಲ್ಲಿ ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದ್ದು, ತಲಾ 3 ಪಂದ್ಯಗಳ ಏಕದಿನ, ಟಿ20 ಸರಣಿಗಳನ್ನು ಆಡಲಿದೆ. ಆ.13ಕ್ಕೆ ಢಾಕಾ ತಲುಪಲಿರುವ ಭಾರತ ತಂಡ, ಮೊದಲೆರಡು ಏಕದಿನಗಳನ್ನು ಕ್ರಮವಾಗಿ ಆ.17 ಹಾಗೂ ಆ.20ರಂದು ಮೀರ್ನಲ್ಲಿ ಆಡಲಿದೆ. ಆ ಬಳಿಕ ಚಟ್ಟೋಗ್ರಾಮ್ಗೆ ಪ್ರಯಾಣಿಸಿ, ಅಲ್ಲಿ ಆ.23ಕ್ಕೆ 3ನೇ ಏಕದಿನ, ಏ.26ಕ್ಕೆ ಮೊದಲ ಟಿ20 ಪಂದ್ಯಗಳನ್ನು ಆಡಲಿದೆ. ಆನಂತರ ಮೀರ್ಪುರ್ಗೆ ವಾಪಸಾಗಿ ಆ.29, ಆ.31ರಂದು ಕ್ರಮವಾಗಿ ಕೊನೆ ಎರಡು ಟಿ20ಗಳನ್ನು ಆಡಲಿದೆ. ಈ ಪ್ರವಾಸವು ಭಾರತ ತಂಡಕ್ಕೆ ಏಷ್ಯಾಕಪ್ ಟಿ20 ಟೂರ್ನಿಗೆ ಸಿದ್ಧತೆ ನಡೆಸಲು ವೇದಿಕೆ ಒದಗಿಸಲಿದೆ.
ಗಾಯತ್ರಿ-ತ್ರೀಸಾ ಇಲ್ಲ
ಬಗಾನ್ ಫ್ಯಾನ್ಸ್ ಸಿಡಿಸಿದ
ಮಾಲೀಕ, ಫ್ಯಾನ್ಸ್ಗೆ ಗಾಯ
ಭಾರತೀಯ ಬಾಕ್ಸಿಂಗ್
ನವದೆಹಲಿ: ಭಾರತೀಯ ಬಾಕ್ಸಿಂಗ್ ಫೆಡರೇಶನ್ನಲ್ಲಿ ಕಿತ್ತಾಟ ಮುಂದುವರೆದಿದ್ದು, ತಕ್ಷಣವೇ ಚುನಾವಣೆ ನಡೆಸುವಂತೆ ವಿವಿಧ ರಾಜ್ಯ ಘಟಕಗಳ ಸದಸ್ಯರು ಆಗ್ರಹಿಸಿದ್ದಾರೆ. ಈ ನಡುವೆಯೇ ತಾತ್ಕಾಲಿಕ ಆಡಳಿತ ಸಮಿತಿಯು ತರಬೇತುದಾರರ ನೇಮಕಾತಿ ಸೇರಿದಂತೆ ಹಲವು ನಿರ್ಧಾರಗಳನ್ನು ಪ್ರಕಟಿಸಿದೆ. ಭಾರತೀಯ ಬಾಕ್ಸಿಂಗ್ ಫೆಡರೇಶನ್ ಪದಾಧಿಕಾರಿಗಳ ಅಧಿಕಾರವಧಿ ಫೆ.2ರಂದೇ ಕೊನೆಗೊಂಡಿತ್ತು. ಆದರೆ ಕಾನೂನು ವಿವಾದದಿಂದಾಗಿ ಚುನಾವಣೆ ವಿಳಂಬಗೊಂಡಿತ್ತು. ಈ ನಡುವೆ ವಿಶ್ವ ಬಾಕ್ಸಿಂಗ್ ಸಂಸ್ಥೆಯು ತಾತ್ಕಾಲಿಕ ಆಡಳಿತ ಸಮಿತಿ ರಚಿಸಿತ್ತು. ಮಾತ್ರವಲ್ಲದೇ ಹಿಮಾಚಲ ಪ್ರದೇಶ ಹೈಕೋರ್ಟ್ ಇತ್ತೀಚೆಗೆ ಏ.28ರ ಮೊದಲು ಹೊಸ ಚುನಾವಣಾ ವೇಳಾಪಟ್ಟಿಯನ್ನು ಹೊರಡಿಸುವಂತೆ ನಿರ್ದೇಶಿಸಿತ್ತು. ಈ ನಡುವೆಯೇ ತಾತ್ಕಾಲಿಕ ಸಮಿತಿಯು ಸೋಮವಾರ ತನ್ನ ಮೊದಲ ಸಭೆಯನ್ನು ಕರೆದಿದ್ದು ರಾಷ್ಟ್ರೀಯ ತರಬೇತಿ ಶಿಬಿರಗಳಿಗೆ ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿ ಆಯ್ಕೆಗಳನ್ನು ನೇಮಿಸಲು ನಿರ್ಧಾರ ಕೈಗೊಂಡಿದೆ.