ಸಿನಿವಾರ್ತೆ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮದುವೆ ರಿಸೆಪ್ಷನ್‌ ಇಂದು (ಮಾ.4) ಹೈದರಾಬಾದ್‌ನ ಐಷಾರಾಮಿ ರೆಸಾರ್ಟ್‌ನಲ್ಲಿ ನಡೆಯಲಿದೆ.

ಭದ್ರತೆಯ ಕಾರಣಕ್ಕೆ ಆಹ್ವಾನಿತರಿಗಷ್ಟೇ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶವಿದ್ದು, ಆಹ್ವಾನಪತ್ರಿಕೆಯ ಜೊತೆಗೆ ಒನ್‌ಟೈಮ್‌ ಕ್ಯೂಆರ್‌ ಕೋಡ್‌ ಅನ್ನೂ ಕಳುಹಿಸಲಾಗಿದೆ. ಕ್ಯೂಆರ್‌ ಕೋಡ್ ಇದ್ದವರಿಗೆ ಮಾತ್ರ ಪ್ರವೇಶವಿರುತ್ತದೆ.

ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ದುಬೈನಿಂದ ಹೈ ಸೆಕ್ಯೂರಿಟಿಗಾಗಿ ವಿಶೇಷ ವ್ಯವಸ್ಥೆ ಮಾಡಿರುವುದೂ ವರದಿಯಾಗಿದೆ. ತೆಲಂಗಾಣದ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಸೇರಿದಂತೆ ರಾಜಕೀಯ, ಸಿನಿಮಾ ಸೆಲೆಬ್ರಿಟಿಗಳು ಪಾಲ್ಗೊಳ್ಳಲಿದ್ದಾರೆ.


ಸರ್ಕಾರಿ ಶಾಲೆಗೆ ನೆರವು

ವಿವಾಹದ ಹಿನ್ನೆಲೆಯಲ್ಲಿ ತೆಲಂಗಾಣದ 44 ಸರ್ಕಾರಿ ಶಾಲೆಗಳ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದಾಗಿ ವಿಜಯ್‌ ಹಾಗೂ ರಶ್ಮಿಕಾ ಘೋಷಿಸಿದ್ದಾರೆ.