ಸಾರಾಂಶ
ದಿಲ್ಲಿ ಅಬಕಾರಿ ಹಗರಣದಲ್ಲಿ ನ್ಯಾಯಾಲಯ ಅರವಿಂದ್ ಕೇಜ್ರಿವಾಲ್ ಅವರನ್ನು ಏಳು ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿದೆ.
ನವದೆಹಲಿ: ದಿಲ್ಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ದಿಲ್ಲಿ ಸ್ಥಳೀಯ ನ್ಯಾಯಾಲಯ 7 ದಿನ (ಮಾ,28ರವರೆಗೆ) ಜಾರಿ ನಿರ್ದೇಶನಾಲಯದ (ಇ.ಡಿ.) ವಶಕ್ಕೆ ಒಪ್ಪಿಸಿದೆ.
ಕೇಜ್ರಿವಾಲ್ ಈ ಹಗರಣದ ರೂವಾರಿ.
ಅವರನ್ನು 10 ದಿನ ತನ್ನ ವಶಕ್ಕೆ ಒಪ್ಪಿಸಿ ಎಂದು ಇ.ಡಿ. ಕೇಳಿತ್ತು.
ಕೊನೆಗೆ ಕೋರ್ಟು 7 ದಿನಕ್ಕೆ ವಶಕ್ಕೆ ಒಪ್ಪಿಸಲು ಸಮ್ಮತಿಸಿದೆ.