ಉಡುಪಿ: ದಿ ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ (ಅಸ್ಸೋಚಾಮ್) ಇದರ ಕರ್ನಾಟಕ ರಾಜ್ಯ ಅಭಿವೃದ್ಧಿ ಮಂಡಳಿಗೆ 2026 - 27 ನೇ ಸಾಲಿನ ಅಧ್ಯಕ್ಷರಾಗಿ ಅದಾನಿ ಗ್ರೂಪ್‌ ಕರ್ನಾಟಕದ ಅಧ್ಯಕ್ಷ ಕಿಶೋರ್ ಅಳ್ವ ಆಯ್ಕೆಯಾಗಿದ್ದಾರೆ.

ಕಿಶೋರ್ ಅಳ್ವ ಅವರು ಬಹುರಾಷ್ಟ್ರೀಯ ಕಂಪನಿಗಳು, ಇಂಧನ, ಮೂಲಸೌಕರ್ಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಸಂಬಂಧಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೂರು ದಶಕಗಳಿಗಿಂತ ಹೆಚ್ಚು ವ್ಯಾಪಕ ಅನುಭವ ಹೊಂದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಅವರು ಕೊಜೆಂಟ್ರಿಕ್ಸ್, ಸಿಎಲ್‌ಪಿ-ಐ, ಯುನೋಕಾಲ್ 76 ಹಾಗೂ ಯುಎಸ್ - ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ ಸೇರಿದಂಕೆ ಸೇರಿದಂತೆ ಅನೇಕ ಜಾಗತಿಕ ಖ್ಯಾತಿಯ ಸಂಸ್ಥೆಗಳಲ್ಲಿ ಮುಖ್ಯ ಮತ್ತು ತಾಂತ್ರಿಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಕರ್ನಾಟಕ ರಾಜ್ಯದ ವಿವಿ ಮಂಡಳಿಗಳ ಅಧ್ಯಕ್ಷರಾದ್ದಾರೆ.

ಅವರು 2018 - 19ರಲ್ಲಿ ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ ಅಧ್ಯಕ್ಷರಾಗಿಯೂ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ, ಅವರು ಕರ್ನಾಟಕದಲ್ಲಿ ಅದಾನಿ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಅಧ್ಯಕ್ಷರಾಗಿದ್ದಾರೆ. ಕರ್ನಾಟಕ ರಾಜ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ರಾಜ್ಯದಲ್ಲಿ ಉದ್ಯಮ ವೃದ್ಧಿಗೆ ಉತ್ತೇಜನ, ವ್ಯವಹಾರ ಸುಲಭತೆ ಹೆಚ್ಚಳ ಹಾಗೂ ಉದ್ಯಮ ಮತ್ತು ಸರ್ಕಾರದ ನಡುವಿನ ಸಹಕಾರವನ್ನು ಬಲಪಡಿಸುವ ಉಪಕ್ರಮಗಳಿಗೆ ನೇತೃತ್ವ ನೀಡಲಿದ್ದೇನೆ, ಹೂಡಿಕೆಗಳನ್ನು ಆಕರ್ಷಿಸುವುದು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಬೆಂಬಲ, ನವೀನತೆ ಉತ್ತೇಜನ ಮತ್ತು ಕರ್ನಾಟಕದ ಆರ್ಥಿಕ ಆದ್ಯತೆಗಳಿಗೆ ಹೊಂದಿಕೊಂಡ ನೀತಿ ವಕಾಲತ್ತು ತನ್ನ ಪ್ರಮುಖ ಗಮನ ಕ್ಷೇತ್ರಗಳಾಗಿರಲಿವೆ. ಕರ್ನಾಟಕವನ್ನು ಪ್ರಮುಖ ಹೂಡಿಕೆ ಮತ್ತು ನವೀನತಾ ಕೇಂದ್ರವಾಗಿ ರೂಪಿಸುವ ನಿಟ್ಟಿನಲ್ಲಿ ಎಲ್ಲಾ ಹಿತಾಸಕ್ತಿ ಪಕ್ಷಗಳೊಂದಿಗೆ ಸಮೀಪವಾಗಿ ಕೆಲಸ ಮಾಡುವುದಾಗಿ ಅವರುಹೇಳಿದ್ದಾರೆ


4.50 ಲಕ್ಷ ಕಂಪನಿಗಳಿರುವ ಅಸ್ಸೋಚಾಮ್: 1920ರಲ್ಲಿ ಸ್ಥಾಪಿತವಾದ ಅಸ್ಸೋಚಾಮ್ ಭಾರತ ದೇಶದ ಪ್ರಮುಖ ಶೃಂಗಮಟ್ಟದ ಉದ್ಯಮ ಸಂಸ್ಥೆಗಳಲ್ಲಿ ಒಂದಾಗಿದೆ. 4.50 ಲಕ್ಷಕ್ಕೂ ಹೆಚ್ಚು ಕಂಪನಿಗಳ ಬಲಿಷ್ಟ ಸದಸ್ಯತ್ವ ಹೊಂದಿದ್ದು, ದೇಶದ ಔದ್ಯಮಿಕ ನೀತಿಗಳನ್ನು ರೂಪಿಸುವುದು ಮತ್ತು ಭಾರತೀಯ ಆರ್ಥಿಕತೆಯನ್ನು ಬಲಪಡಿಸಲು ವಕಾಲತ್ತು ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.