ಸಾರಾಂಶ
ಕುಣಿಗಲ್ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರಾಗಿ ಖರೀದಿ ಕೇಂದ್ರ ನಿರಂತರವಾಗಿ ನಡೆಯುತ್ತಿದ್ದು ರಾಗಿ ತುಂಬಲು ಚೀಲ ಖಾಲಿಯಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಖರೀದಿ ಕೇಂದ್ರವನ್ನು ಸ್ಥಗಿತಗೊಳಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕನ್ನಡ ಪ್ರಭ ವರ್ತೇ ಕುಣಿಗಲ್ ಕುಣಿಗಲ್ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರಾಗಿ ಖರೀದಿ ಕೇಂದ್ರ ನಿರಂತರವಾಗಿ ನಡೆಯುತ್ತಿದ್ದು ರಾಗಿ ತುಂಬಲು ಚೀಲ ಖಾಲಿಯಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಖರೀದಿ ಕೇಂದ್ರವನ್ನು ಸ್ಥಗಿತಗೊಳಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಶುಕ್ರವಾರ ಬೆಳಗ್ಗೆ ಕೃಷಿ ಉತ್ಪನ್ನ ಮಾರುಕಟ್ಟೆಯ ಅಧಿಕಾರಿಗಳು ರಾಗಿ ಖರೀದಿ ಕೇಂದ್ರ ವನ್ನು ಪ್ರಾರಂಭ ಮಾಡುತ್ತಿದ್ದಂತೆ ರೈತರಿಗೆ ಮುಂದಿನ 15 ದಿನಗಳ ಕಾಲ ರಾಗಿ ಖರೀದಿ ಮಾಡಲು ಸಾಧ್ಯವಿಲ್ಲ ಸಮರ್ಪಕವಾಗಿ ಚೀಲದ ಕೊರತೆ ಇರುವುದರಿಂದ ನಾವು ಖರೀದಿ ಕೇಂದ್ರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತೇವೆ ಎಂದರು.ಇದರಿಂದ ಆಕ್ರೋಶಗೊಂಡ ರೈತರು ಸ್ಥಳೀಯವಾಗಿ ಅಧಿಕಾರಿಗಳ ಮೇಲೆ ತರಾಟೆಗೆ ತೆಗೆದುಕೊಂಡು ಕಳೆದ ಮೂರು ನಾಲ್ಕು ದಿನಗಳಿಂದ ರಾಗಿಯನ್ನು ಖರೀದಿ ಕೇಂದ್ರಕ್ಕೆ ತಂದು ಹಗಲು ರಾತ್ರಿ ಎನ್ನದೆ ಕಳೆದ ಒಂದು ವಾರದಿಂದ ಕಾಯುತ್ತಿದ್ದೇವೆ ಅಧಿಕಾರಿಗಳು ತಮಗೆ ಚೀಲದ ಪ್ರಮಾಣ ಮತ್ತು ಎಷ್ಟು ದಿನಕ್ಕೆ ಬೇಕಾಗಿರುತ್ತದೆ ಎಂಬುದನ್ನು ತಿಳಿದುಕೊಂಡು ರಾಗಿ ಖರೀದಿ ಕೇಂದ್ರಕ್ಕೆ ಬರುವ ರೈತರನ್ನ ನಿಯಂತ್ರಿಸಬಹುದಾಗಿತ್ತು ಆದರೆ ಆ ಕೆಲಸ ಮಾಡದೆ ಇದ್ದಕ್ಕಿದ್ದಂತೆ ರಾಗಿ ಖರೀದಿ ಕೇಂದ್ರವನ್ನು ತಾತ್ಕಾಲಿಕವಾಗಿ ಬಂದ್ ಮಾಡುತ್ತೇವೆ ಎಂಬುದು ಅಧಿಕಾರಿಗಳ ಉದಾಸೀನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖರೀದಿ ಕೇಂದ್ರದಲ್ಲಿ ವಾರಕ್ಕಿಂತ ಹೆಚ್ಚು ದಿನಗಳನ್ನು ಕಾಯಿಸುವ ಅಧಿಕಾರಿಗಳು ಇಲ್ಲಿಗೆ ಬರುವ ರೈತರಿಗೆ ಮೂಲಭೂತ ಸೌಕರ್ಯ ಕುಡಿಯುವ ನೀರು ಸೇರಿದಂತೆ ಯಾವುದೇ ವ್ಯವಸ್ಥೆಯನ್ನು ಮಾಡಿಲ್ಲ. ಹಗಲು ರಾತ್ರಿ ಎನ್ನದೆ ನಾವು ತಂದಿರುವ ರಾಗಿಗಳನ್ನು ಕಾಯಬೇಕಾದ ಅನಿವಾರ್ಯತೆ ಇದೆ ಎಂದು ಆರೋಪಿಸಿದರು.