ಸಾರಾಂಶ
ಬಹುತೇಕ ಅಂಗನವಾಡಿ ಮಕ್ಕಳ ಕೇಂದ್ರಗಳಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ನೆರವೇರಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಈ ದಿನ ಮಕ್ಕಳ ದಿನಾಚರಣೆ ಕಾರ್ಯಕ್ರಮ ನೆರವೇರಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್, ಮೇಲ್ವಿಚಾರಕರು ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ರವರು ದಾಸವಾಳ ಅಂಗನವಾಡಿ ಕೇಂದ್ರ, ಮಹದೇವ್ ಪೇಟೆ ಅಂಗನವಾಡಿ ಕೇಂದ್ರ, ಪುಟಾಣಿ ನಗರ ಅಂಗನವಾಡಿ ಕೇಂದ್ರ, ರಾಘವೇಂದ್ರ ದೇವಸ್ಥಾನ ಅಂಗನವಾಡಿ ಕೇಂದ್ರದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಛದ್ಮವೇಷ, ನೃತ್ಯಗಳನ್ನು, ನೋಡಿ ಪ್ರೋತ್ಸಾಹಿಸಿ ಬಹುಮಾನ ವಿತರಿಸಿದರು. ನಾಲ್ಕು ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯರು ಸುಜಾತ, ಗೀತಾ, ಶೃತಿ, ಉಮಾವತಿ ಮತ್ತು ಸಹಾಯಕಿಯರು ಅನಿತಾ, ದೈವಾಣಿ, ಇಂದ್ರಮ್ಮ, ಶ್ಯಾಮಲ ಅವರು ಸಮುದಾಯದ ಸಹಕಾರ ಪಡೆದು ಉತ್ತಮ ರೀತಿಯಲ್ಲಿ ಕಾರ್ಯಕ್ರಮವನ್ನು ನಡೆಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಉಪ ನಿರ್ದೇಶಕರು, ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ನವೆಂಬರ್ 14 ರಂದು ಮಕ್ಕಳ ದಿನಾಚರಣೆ ಆಚರಿಸುತ್ತಿದ್ದು, ಮಕ್ಕಳ ಆರೈಕೆ, ಹಕ್ಕು ಮತ್ತು ಶಿಕ್ಷಣದ ಕುರಿತು ಹೆಚ್ಚಿನ ಆಲೋಚನೆಯನ್ನು ಮಾಡುವುದರೊಂದಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೋಷಕರು, ಶಿಕ್ಷಕರೊಂದಿಗೆ ಸಮುದಾಯದ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು. ಮಕ್ಕಳ ಶಿಕ್ಷಣಕ್ಕೆ ಪೋಷಕರು ಅಂಗನವಾಡಿ ಕಾರ್ಯಕರ್ತರು ಹೆಚ್ಚಿನ ಆಸಕ್ತಿ ವಹಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಪ್ರಾರಂಭವಾಗಿರುವ ಮೊಂಟೆನ್ಸರಿ ಕೇಂದ್ರಗಳಿಗೆ ಮಕ್ಕಳನ್ನು ಸೇರಿಸಿ ಕನ್ನಡದೊಂದಿಗೆ ಇಂಗ್ಲಿಷ್ ಅನ್ನು ಕಲಿಸಲು ಸಹಕರಿಸಬೇಕೆಂದು ಕೋರಿದರು. ಪ್ರಭಾರ ಸಹಾಯಕ ಶಿಶುಅಭಿವೃದ್ಧಿ ಯೋಜನಾಧಿಕಾರಿ ಸವಿತಾ ಕೀರ್ತನ್ ಅವರು ಮಾತನಾಡಿ ಅಂಗನವಾಡಿ ಕೇಂದ್ರ ಮಕ್ಕಳ ದಿನಾಚರಣೆಗೆ ಬಹುಮಾನ ನೀಡಿದ, ಅಲಂಕಾರಕ್ಕೆ ಸಹಕರಿಸಿದ, ಊಟೋಪಚಾರಗಳಿಗೆ ಸಹಕಾರ ನೀಡಿದ ಧಾನಿಗಳಾದ ಕೌನ್ಸಿಲರ್ ಬಶೀರ್, ಮಹೇಶ್, ರಮ್ಯಾ, ಸೋನಿ, ಇನ್ನರ್ ವೀಲ್ ರಶ್ಮಿ ಪ್ರವೀಣ್, ಮಹಿಳಾ ಮೋರ್ಚಾ ಸದಸ್ಯರು ನವ್ಯ, ಗಜೇಂದ್ರ, ಆಶಾ, ಅರುಣ್ ರೋಜಾ ಧನ್ಯ ಹರೀಶ್ ಹೇಮಾ ಸಂತೋಷ್, ಬಡೆ ಸಾಬ್, ರಜಿನಿ ಬಸವರಾಜ್, ವಿವಿಲಿಯ ಸ್ಟಿವನ್, ಲತಾ ರವಿ, ರೂಪ ಮಹೇಂದ್ರ, ಗೀತಾ ವಿಶ್ವನಾಥ್, ರಚನಿ ಹರೀಶ, ರಮೇಶ್, ಚಾರ್ಲಿ, ಪೊನ್ನಮ್ಮ, ದುರ್ಗಾಪರಮೇಶ್ವರಿ ಸ್ತ್ರೀ ಶಕ್ತಿ ಸದಸ್ಯರಿಗೆ, ಪೋಷಕರಿಗೆ, ಬಾಲವಿಕಾಸ ಸಮಿತಿ ಸದಸ್ಯರಿಗೆ, ಇಲಾಖೆ ಪರವಾಗಿ ಕೋರಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲಾ ಪೋಷಕರು ತಮ್ಮ ಅಂಗನವಾಡಿ ಕೇಂದ್ರವನ್ನು ಮಾದರಿ ಅಂಗನವಾಡಿ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮತ್ತಷ್ಟು ದಾನಿಗಳ ಸಹಕಾರವನ್ನು ಪಡೆಯುವಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಸಹಕರಿಸುವಂತೆ, ತಮ್ಮ ತಮ್ಮ ಮಕ್ಕಳನ್ನು ಜಂಕ್ ಫುಡ್ ಗಳಿಂದ, ಮೊಬೈಲ್ ಗಳಿಂದ, ರಕ್ಷಿಸಿಕೊಳ್ಳುವಂತೆ ಕರೆ ನೀಡಿದರು. ನಗರಸಭೆ ಕೌನ್ಸಿಲರ್ ರಮೇಶ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಸಾಂಸ್ಕೃತಿಕ ಕಲಾವೇದಿಕೆಯ ಅಧ್ಯಕ್ಷರು ಮಹೇಶ್ ರವರು ಮಾತನಾಡಿ ಪ್ರಾರಂಭಿಕ ಹಂತದಲ್ಲಿ ಮಕ್ಕಳಿಗೆ ಸ್ವಚ್ಛತೆಯ ಪ್ರಾಮುಖ್ಯತೆಯನ್ನು ಹೇಳಿಕೊಡುವಂತೆ ಪೋಷಕರಿಗೆ ತಿಳಿಸಿದರು. ರಾಘವೇಂದ್ರ ದೇವಸ್ಥಾನದ ಅಂಗನವಾಡಿ ಕೇಂದ್ರದಲ್ಲಿ ಐದು ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ವಿಶೇಷವಾಗಿ ನೆರವೇರಿಸಲಾಯಿತು.;Resize=(128,128))
;Resize=(128,128))
;Resize=(128,128))