ಕುಶಾಲನಗರ: ಕುಶಾಲನಗರ ಪುರಸಭೆ ಸಂಕೀರ್ಣದ ಪ್ರಾಂಗಣದಲ್ಲಿನ 7 ಅಂಗಡಿ ಮಳಿಗೆಗಳನ್ನು ಆನ್ ಲೈನ್ ಹೊರತುಪಡಿಸಿ ಬಹಿರಂಗ ಹರಾಜು ಮಾಡುವಂತೆ ಮಳಿಗೆ ಬಾಡಿಗೆದಾರರಾದ ಮಹದೇವ್ ಮತ್ತು ಕಿರಣ್ ಸುದ್ದಿಗೋಷ್ಠಿ ಮೂಲಕ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದರು.ಈಗಾಗಲೇ 12 ಅಂಗಡಿ ಮಳಿಗೆಗಳನ್ನು ಬಹಿರಂಗ ಹರಾಜು ನಡೆಸಲಾಗಿದೆ. ಈ ಪೈಕಿ ಹರಾಜುಗೊಂಡು ರಿಜಿಸ್ಟರ್ ಆಗದ 7 ಅಂಗಡಿ ಮಳಿಗೆಗಳನ್ನು ಇ- ಹರಾಜಿಗೆ ಒಳಪಡಿಸಲಾಗಿದೆ. ಇದರಿಂದ ಬಹಿರಂಗ ಹರಾಜಿನಲ್ಲಿ ಪಾಲ್ಗೊಂಡು ದುಬಾರಿ ಮೊತ್ತಕ್ಕೆ ಈಗಾಗಲೇ ಮಳಿಗೆಗಳನ್ನು ಖರೀದಿಸಿದವರಿಗೆ ಅನ್ಯಾಯವಾಗಲಿದೆ ಎಂದು ತಿಳಿಸಿದ್ದಾರೆ.ಇ-ಟೆಂಡರ್ ಪ್ರಕ್ರಿಯೆ ಜಠಿಲವಾಗಿರುವ ಕಾರಣ ಉಳಿದ ಮಳಿಗೆಗಳನ್ನು ಬಹಿರಂಗ ಹರಾಜಿಗೊಳಪಡಿಸುವಂತೆ ಒತ್ತಾಯಿಸಿದರು. ಈ ನಡುವೆ ತರಾತುರಿಯಲ್ಲಿ ಒಂದೆರಡು ಅಂಗಡಿಗಳನ್ನು ಪ್ರತ್ಯೇಕವಾಗಿ ಹರಾಜು ನಡೆಸಲು ಮುಂದಾಗಿರುವ ಪುರಸಭೆ ಅಧಿಕಾರಿಗಳ ಕ್ರಮ ಸರಿಯಲ್ಲ. ಈ ಬಗ್ಗೆ ಸ್ಪಷ್ಟನೆ ಕೋರಿದರೆ ಪುರಸಭೆ ಅಧಿಕಾರಿಗಳು ನಮಗೆ ಸೂಕ್ತ ಸ್ಪಂದನೆ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.
5 ಮಳಿಗೆಗಳನ್ನು ಬಹಿರಂಗ ಹರಾಜು ನಡೆಸಿ ಉಳಿದ 7 ಮಳಿಗೆಗಳನ್ನು ಆನ್ಲೈನ್ ಹರಾಜು ಮಾಡುತ್ತಿರುವುದು ಅನುಮಾನ ಮೂಡಿಸಿದೆ. ಆನ್ಲೈನ್ ಹರಾಜಿನಲ್ಲಿ ಹೆಚ್ಚು ಆಕಾಂಕ್ಷಿಗಳು ಭಾಗವಹಿಸುವುದಿಲ್ಲ. ಭಾಗವಹಿಸಿದರೂ ಕಡಿಮೆ ಮೊತ್ತಕ್ಕೆ ಮಳಿಗೆಗಳು ಹರಾಜಾಗುವ ಸಾಧ್ಯತೆ ಇದೆ. ಇದರಿಂದ 6 ಸಾವಿರ ಮೂಲ ಬಾಡಿಗೆ ನಿಗದಿಪಡಿಸಿದ ಮಳಿಗೆಗಳನ್ನು ದುಪ್ಪಟ್ಟು ಮೊತ್ತಕ್ಕೆ ಹರಾಜಿನಲ್ಲಿ ಖರೀದಿಸಿದ ನಮಗೆ ಅನ್ಯಾಯವಾಗಲಿದೆ ಎಂದು ಮಹಾದೇವ ಮತ್ತು ಕಿರಣ್ ತಿಳಿಸಿದರು. ಆನ್ಲೈನ್ ಬಿಡ್ ಪ್ರಕ್ರಿಯೆಯನ್ನು ತಕ್ಷಣ ಕೈ ಬಿಡುವಂತೆ ಅವರು ಒತ್ತಾಯಿಸಿದರು.ಕುಶಾಲನಗರ ಪುರಸಭೆ ಮಳಿಗೆಗಳ ಬಹಿರಂಗ ಹರಾಜಿಗೆ ಆಗ್ರಹ
ಕುಶಾಲನಗರ ಪುರಸಭೆ ಸಂಕೀರ್ಣದ ಪ್ರಾಂಗಣದಲ್ಲಿನ 7 ಅಂಗಡಿ ಮಳಿಗೆಗಳನ್ನು ಆನ್ ಲೈನ್ ಹೊರತುಪಡಿಸಿ ಬಹಿರಂಗ ಹರಾಜು ಮಾಡುವಂತೆ ಮಳಿಗೆ ಬಾಡಿಗೆದಾರರಾದ ಮಹದೇವ್ ಮತ್ತು ಕಿರಣ್ ಸುದ್ದಿಗೋಷ್ಠಿ ಮೂಲಕ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.