ಡಾ.ಆನಂದ ಸಂಕೇಶ್ವರರಿಗೆಪ್ರತಿಷ್ಠಿತ ಸಿಬಾ ಪುರಸ್ಕಾರ

| Published : Sep 22 2025, 01:00 AM IST

ಡಾ.ಆನಂದ ಸಂಕೇಶ್ವರರಿಗೆಪ್ರತಿಷ್ಠಿತ ಸಿಬಾ ಪುರಸ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ವಿಆರ್​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಅವರು ‘ಸೌತ್​ ಇಂಡಿಯಾ ಬಿಸಿನೆಸ್​ ಅವಾರ್ಡ್ಸ್​’ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಆರ್​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಅವರು ‘ಸೌತ್​ ಇಂಡಿಯಾ ಬಿಸಿನೆಸ್​ ಅವಾರ್ಡ್ಸ್​’ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಮಾಜಿ ಯುಎಇ ರಾಯಭಾರಿ ಹಾಗೂ ಎಎಜಿ ಚೇರ್ಮನ್​ ಡಾ. ಅಹ್ಮದ್​ ಅಬ್ದುಲ್​ ರೆಹಮಾನ್​ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಉದ್ಯಮ, ಸಂಸ್ಕೃತಿ ಮತ್ತು ವಾಣಿಜ್ಯ ವಲಯದಲ್ಲಿ ಜಾಗತಿಕವಾಗಿ ಪ್ರಭಾವ ಬೀರಿರುವವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದೇ ವೇಳೆ ಸೌತ್​ ಇಂಡಿಯಾ ಬಿಸಿನೆಸ್​ ಅವಾರ್ಡ್ಸ್​ ಪರಿಚಯಿಸಿರುವ ‘ಸೌತ್​ ಪವರ್​ಲಿಸ್ಟ್​-100’ ಅನಾವರಣಗೊಳಿಸಲಾಯಿತು.

ಆನಂದ ಸಂಕೇಶ್ವರ ಜತೆಗೆ ನಂದಿ ಇನ್​ಫ್ರಾಸ್ಟ್ರಕ್ಚರ್​ ಕಾರಿಡಾರ್​ ಎಂಟರ್​ಪ್ರೆಸಸ್​ ಲಿಮಿಟೆಡ್​ನ ಆಡಳಿತ ನಿರ್ದೇಶಕ ಅಶೋಕ್​ ಖೇಣಿ, ಕೆಸಿಪಿ ಸಿಮೆಂಟ್ಸ್ ಜಂಟಿ ಆಡಳಿತ ನಿರ್ದೇಶಕಿ​ ಕವಿತಾ ದತ್ತ, ಎನ್​ಎ ಆರ್ಕಿಟೆಕ್ನಿಕ್‌ ಸಂಸ್ಥಾಪಕರಾದ ನಿರೂಪ್​ ರೆಡ್ಡಿ, ಮಾರ್ಗದರ್ಶಿ ಚಿಟ್​ ಫಂಡ್​ ಪ್ರೈವೇಟ್​ ಲಿಮಿಟೆಡ್​ ಆಡಳಿತ ನಿರ್ದೇಶಕರಾದ ಶೈಲಜಾ ಕಿರಣ್, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​ ಅವರಿಗೆ ಪುರಸ್ಕಾರ ನೀಡಲಾಯಿತು.