ಟೇಕ್ವಾಂಡೊ ಸ್ಪರ್ಧೆಗೆ ಚಾಲನೆ

| Published : Oct 08 2024, 01:03 AM IST

ಸಾರಾಂಶ

ರಾಯಬಾಗ: ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಲು ಸಾಧ್ಯವೆಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.

ರಾಯಬಾಗ: ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಲು ಸಾಧ್ಯವೆಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.

ಭಾನುವಾರ ಪಟ್ಟಣದ ಡಾ.ಬಾಬು ಜಗಜ್ಜೀವನ್‌ರಾಮ ಸಭಾಂಗಣದಲ್ಲಿ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಟೇಕ್ವಾಂಡೊ ಅಸೋಸಿಯೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 14 ರಿಂದ17 ವಯೋಮಿತಿಯೊಳಗಿನ ಬಾಲಕ ಮತ್ತು ಬಾಲಕಿಯರ ಚಿಕ್ಕೋಡಿ ಜಿಲ್ಲಾಮಟ್ಟದ ಟೇಕ್ವಾಂಡೊ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಚಿಕ್ಕೋಡಿ ಜಿಲ್ಲಾ ಟೇಕ್ವಾಂಡೊ ಅಸೋಸಿಯೇಶನ್ ಅಧ್ಯಕ್ಷ ವಿಜಯ ಭಜಂತ್ರಿ, ಬಬನ ನಿರ್ಮಳೆ, ಪ್ರಭಾಕರ ಶೇಡಬಾಳೆ, ಜಯದೀಪ ದೇಸಾಯಿ, ಮಹೇಶ ಫರಾಡೇಕರ, ವೈ.ಬಿ.ಹಂಪಿ, ವಿ.ಡಿ. ಉಪಾಧ್ಯೆ, ಸದಾಶಿವ ಘೋರ್ಪಡೆ, ಸಚೀನ ನಾಯಿಕವಾಡಿ, ಗುರುರಾಜ ನಾಯಿಕವಾಡಿ, ಎಂ.ಎಂ. ಕಾಂಬಳೆ, ಎಂ.ವಿ. ಬಂಡಗರ, ಯುವರಾಜ ನಾಯಿಕವಾಡಿ, ಪುನೀತ ನಾಯಿಕವಾಡಿ ಸೇರಿ ಕ್ರೀಡಾಪಟುಗಳು ಇದ್ದರು.