ಕಲ್ಯಾಣ ಕರ್ನಾಟಕಕ್ಕಿರುವ 371 ಜೆ ರಕ್ಷಣೆ ವಿರುದ್ಧ ಅಪಪಸ್ವರ ಏಕೆ?

| Published : May 28 2024, 01:03 AM IST

ಕಲ್ಯಾಣ ಕರ್ನಾಟಕಕ್ಕಿರುವ 371 ಜೆ ರಕ್ಷಣೆ ವಿರುದ್ಧ ಅಪಪಸ್ವರ ಏಕೆ?
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಿಗೆ ಸಂವಿಧಾನದ ಕಲಂ 371 (ಜೆ) ರಕ್ಷಣೆ ಲಭ್ಯವಾಗಿರುವ ಬಗ್ಗೆ ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಬಾಗದ ಬುದ್ದಿಜೀವಿಗಳು ತೀವ್ರವಾಗಿ ವಿರೋಧಿಸುವುತ್ತಿರುವುದನ್ನು ಖಂಡಿಸಿ ಕಲಬುರಗಿಯಲ್ಲಿ ಹೋರಾಟಗಾರರು, ಪರಿಣಿತರು ಸೇರಿಕೊಂಡು ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಿಗೆ ಸಂವಿಧಾನದ ಕಲಂ 371 (ಜೆ) ರಕ್ಷಣೆ ಲಭ್ಯವಾಗಿರುವ ಬಗ್ಗೆ ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಬಾಗದ ಬುದ್ದಿಜೀವಿಗಳು ತೀವ್ರವಾಗಿ ವಿರೋಧಿಸುವುತ್ತಿರುವುದನ್ನು ಖಂಡಿಸಿ ಕಲಬುರಗಿಯಲ್ಲಿ ಹೋರಾಟಗಾರರು, ಪರಿಣಿತರು ಸೇರಿಕೊಂಡು ಸಭೆ ನಡೆಸಿದರು.

371ನೇ ಜೇ ಕಲಂ ಕಲ್ಯಾಣಕ್ಕೆ ಅಷ್ಟೇ ಯಾಕೆಂದು ಪ್ರಶ್ನಿಸಿ ಬೆಂಗಳೂರಲ್ಲಿ ಜೂ.1ರಂದು ಅವರು ನಡೆಸಲು ಮುಂದಾಗಿರುವ ಹೋರಾಟವನ್ನು ಸಭೆಯಲ್ಲಿ ಖಂಡಿಸಲಾಯ್ತು. ಸಂವಿಧಾನ ವಿರೋಧಿ ಪ್ರತಿಭಟನೆಗೆ ಕಲ್ಯಾಣದಲ್ಲಿ ಉಗ್ರ ಹೋರಾಟಕ್ಕೆ ನಿರ್ಧಾರ ಮಾಡಲಾಯ್ತು.

ಸಭೆಯಲ್ಲಿ ಪಾಲ್ಗೊಂಡಿದ್ದ 7 ಜಿಲ್ಲೆಗಳಲ್ಲಿ ಉಗ್ರ ಹೋರಾಟ ನಡೆಸಲು ತಜ್ಞರ, ಪರಿಣಿತರ, ಬುದ್ಧಿಜೀವಿಗಳ, ಹೋರಾಟಗಾರರ,ಯುವ , ವಿದ್ಯಾರ್ಥಿಗಳ ಮತ್ತು ಆಯಾ ಕ್ಷೇತ್ರದ ಗಣ್ಯರುಗಳ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡು ಬೆಂಗಳೂರು ಭಾಗದಲ್ಲಿನ ಕಲ್ಯಾಣ ವಿರೋಧಿ ಧೋರಣೆ ಖಂಡಿಸಿದರು.

ನಗರದ ಹಿಂದಿ ಪ್ರಚಾರ ಸಭಾದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ, ಬೆಂಗಳೂರಿನಲ್ಲಿ ಕೆಲವು ಸಂವಿಧಾನ ವಿರೋಧಿ ಶಕ್ತಿಗಳು ಬರುವ ಜೂನ್ 1ನೇ ತಾರೀಕಿನಂದು ಕಲ್ಯಾಣ ಕರ್ನಾಟಕಕ್ಕೆ ಜಾರಿಯಾಗಿರುವ ವಿಶೇಷ ಸ್ಥಾನಮಾನದಿಂದ ರಾಜ್ಯದ ಸರ್ಕಾರಿ ಸೇವೆಗಳಲ್ಲಿ ಹೆಚ್ಚಿನ ಪಾಲು ಕಲ್ಯಾಣ ಕರ್ನಾಟಕದರೆ ಪಡೆಯುತ್ತಿದ್ದಾರೆ. ಇದರಿಂದ ರಾಜ್ಯದ ಇಪ್ಪತ್ನಾಲ್ಕು ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂಬ ವಿಷಯ ಮುಂದಿಟ್ಟುಕೊಂಡು ಹಮ್ಮಿಕೊಂಡಿರುವ ಪ್ರತಿಭಟನೆ ಅಸಂವಿಧಾನಿಕ ಎಂದರು.

ತೀವ್ರವಾಗಿ ಖಂಡಿಸಿ ಖಂಡನಾ ನಿರ್ಣಯ ರಾಜ್ಯಪಾಲರಿಗೆ ಕಳುಹಿಸಲು ಮತ್ತು ಕಲ್ಯಾಣ ಕರ್ನಾಟಕದ ಸಚಿವರು, ಸಂಸದರ, ಶಾಸಕರುಗಳ ಸಭೆ ನಡೆಸಿ ಆದಷ್ಟು ಶೀಘ್ರ ಮುಖ್ಯಮಂತ್ರಿಗೆ ಭೇಟಿ ಮಾಡಿ ರಾಜ್ಯ ಒಡೆಯುವ ಮತ್ತು ಸಂವಿಧಾನ ವಿರೋಧಿ ಶಕ್ತಿಗಳ ಬೇಡಿಕೆಗೆ ತಿರಸ್ಕರಿಸಲು ಅದರಂತೆ ಇಂಥಾ ಸಂವಿಧಾನ ವಿರೋಧಿ ಹೋರಾಟಕ್ಕೆ ಭವಿಷ್ಯದಲ್ಲಿ ಅವಕಾಶ ನೀಡದಿರಲು ಒತ್ತಡ ತರಲು ಕಲ್ಯಾಣದ ಜನ ಪ್ರತಿನಿಧಿಗಳಿಗೆ ಆಗ್ರಹಿಸಲಾಯಿತು.

ಆದಷ್ಟು ಶೀಘ್ರ ಕಲ್ಯಾಣ ಕರ್ನಾಟಕದ ಸಚಿವರು ಮತ್ತು ಜನಪ್ರತಿನಿಧಿಗಳಿಗೆ ಸಂಪರ್ಕಿಸಿ ರಾಜ್ಯಪಾಲರಿಗೆ, ಮುಖ್ಯಮಂತ್ರಿಗೆ ಭೇಟಿ ಮಾಡುವುದು ಅದರಂತೆ ಎಳು ಜಿಲ್ಲೆಗಳಿಗೆ ಭೇಟಿ ನೀಡಿ ಉಗ್ರ ಹೋರಾಟ ಹಮ್ಮಿಕೊಳ್ಳಲು ಇಂದಿನ ದುಂಡು ಮೇಜಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಸಂವಿಧಾನದ 371ನೇ ಜೇ ಕಲಂ ಬಗ್ಗೆ ಪ್ರೊ. ಬಸವರಾಜ ಕುಮ್ಮನೂರ್, ಡಾ.ಸಂಗೀತಾ ಕಟ್ಟಿ, ದೀಪಕ ಘಾಲಾ, ಡಾ.ಶರಣಪ್ಪ ಸೈದಾಪುರ , ಡಾ ಗಾಂಧೀಜಿ ಮೋಳಕೇರಿ, ಪ್ರೊ. ಗುಲಶೆಟ್ಟಿ, ಡಾ. ಮಾಜಿದ ದಾಗಿ, ಪ್ರೊ. ಶಿವರಾಜ ಪಾಟೀಲ ವಿವರಿಸಿದರು.

ಮುಂದಿನ ಹೋರಾಟದ ಬಗ್ಗೆ ಸೈಯದ್ ಸಜ್ಜಾದ ಅಲಿ, ಮನೀಷ್ ಜಾಜು,ಲಿಂಗರಾಜ ಸಿರಗಾಪೂರ, ಮಂಜುನಾಥ ನಾಲವರಕರ್, ಸುಭಾಷ್ ಶೀಲವಂತ, ಬಿ.ಬಿ.ನಾಯಕ, ಶಿವಲಿಂಗಪ್ಪ ಭಂಡಕ, ದತ್ತು ಭಾ‌ಸಗಿ, ಮುತ್ತಣ್ಣ ನಾಡಗೇರಿ, ಗೋಪಾಲ ನಾಟಿಕರ್, ಮನೋಹರ್ ಬೀರನೋರ, ಭೀಮರಾಯ ಕಂದಳ್ಳಿ,ರಾಜಶೇಖರ ಹೀರೆಮಠ,ವಿನೋದ, ಮಹೆಬೂಬ್, ಅಸ್ಲಂ ಚೌಂಗೆ, ಅಬ್ದುಲ್ ರಹೀಂ, ಆನಂದ ದೇಶಪಾಂಡೆ ಮಾತನಾಡಿದರು.

ದುಂಡು ಮೇಜಿನ ಸಭೆಯಲ್ಲಿ ಲಕ್ಷ್ಮಣ ದಸ್ತಿ ಮಾತನಾಡಿ, ಕಲ್ಯಾಣ ವಿರೋಧಿ ಮತ್ತು ಕಲ್ಯಾಣ ಕರ್ನಾಟಕದ 371ನೇ ಜೇ ಕಲಂ ಸಂವಿಧಾನ ವಿರೋಧಿ ಶಕ್ತಿಗಳ ಹೋರಾಟಕ್ಕೆ ನಾವು ಸವಾಲಾಗಿ ಸ್ವೀಕರಿಸಿ ಇದಕ್ಕೆ ಪ್ರತಿಯಾಗಿ ಉಗ್ರ ಹೋರಾಟ ನಡೆಸಲು ಎಳು ಜಿಲ್ಲೆಗಳಿಗೆ ಭೇಟಿ ನೀಡಿ ಶಿಕ್ಷಣ ಸಂಸ್ಥೆಗಳ ಮೂಲಕ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಕ್ಷೇತ್ರದ ಜನರಲ್ಲಿ ಜಾಗೃತಿ ಮೂಡಿಸಿ ಉಗ್ರ ಹೋರಾಟ ನಡೆಸಲು ಸಿದ್ಧರಾಗಬೇಕು, ಕಲ್ಯಾಣ ಕರ್ನಾಟಕದ ಜನಪರ, ಕನ್ನಡ ಪರ, ದಲಿತ ಹಿಂದುಳಿದ ಅಲ್ಪಸಂಖ್ಯಾತರ ಯುವ ವಿದ್ಯಾರ್ಥಿ ಪರ ಕಾರ್ಮಿಕ, ರೈತಪರ ವಾಣಿಜ್ಯ ಕೈಗಾರಿಕಾ ಸಂಸ್ಥೆಗಳು ಬೆಂಗಳೂರಿನಲ್ಲಿ ನಡೆಸುತ್ತಿರುವ ಕಲ್ಯಾಣ ಕರ್ನಾಟಕ ವಿರೋಧಿ ಮತ್ತು ಸಂವಿಧಾನ ವಿರೋಧಿ ಶಕ್ತಿಗಳ ಹೋರಾಟಕ್ಕೆ ಬಲವಾಗಿ ಖಂಡಿಸಲು ವಿನಂತಿ ಮಾಡಿಕೊಂಡರು.

ಈ ದುಂಡು ಮೇಜಿನ ಸಭೆಯಲ್ಲಿ ಅಶೋಕ ಗುರೂಜಿ,ಮಲ್ಲಿನಾಥ ಸಂಗಶೆಟ್ಟಿ,ಬಾಬಾ ಫಕ್ರುದ್ದೀನ್, ಶರಣಬಸಪ್ಪ ಕುರಿಕೋಟಾ, ಗಿರೀಶ ಗೌಡ,ರಾಜು ಜೈನ, ಆನಂದ ಕಪನೂರ, ಬಸವರಾಜ ಕೋಣಿನ, ಶರಣಪ್ಪ ಕಿರಣಗಿ, ಶಿವಕುಮಾರ್ ಪಾಟೀಲ, ವೀರಶೆಟ್ಟಿ ಹುಡುಗಿ,ಪೊ.ಮಂಜೂರ್ ಅಹ್ಮದ್, ಸಾಬಿರ ಅಲಿ, ಬಸವರಾಜ ಕಲ್ಯಾಣಿ, ತುಕಾರಾಂ ರಾಠೋಡ್, ಅಮಿತ್ ಪರಮೇಶ್ವರ ಸೇರಿದಂತೆ ನೂರಾರು ಆಯಾ ಕ್ಷೇತ್ರದ ಗಣ್ಯರು, ನಾಗರಿಕರು, ಯುವಕರು ವಿಧ್ಯಾರ್ಥಿಗಳು ಭಾಗವಹಿಸಿದರು.ಸಭೆಯಲ್ಲಿ ಕೈಗೊಂಡ ನಿರ್ಣಯಗಳು

1) ಬೆಂಗಳೂರಿನಲ್ಲಿ ಜೂ.1ರಂದು ಹಮ್ಮಿಕೊಂಡಿರುವ 371ನೇ ಜೇ ಸಂವಿಧಾನ ವಿರೋಧಿ ಮತ್ತು ಕಲ್ಯಾಣ ಕರ್ನಾಟಕ ವಿರೋಧಿ ಶಕ್ತಿಗಳ ಬೇಡಿಕೆಯ ಪ್ರತಿಭಟನೆ ಖಂಡಿಸಿ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಪತ್ರ ರವಾನೆ

2) ಕಲ್ಯಾಣ ಕರ್ನಾಟಕದ ಸಚಿವರು ಸಂಸದರ ಶಾಸಕರುಗಳ ಸಭೆ ನಡೆಸಿ ರಾಜ್ಯಪಾಲರಿಗೆ, ಮುಖ್ಯಮಂತ್ರಿ ಭೇಟಿ ಮಾಡಲು ಒತ್ತಡ ತರುವುದು.

3) 7 ಜಿಲ್ಲೆಗಳಲ್ಲಿ ಸಂಘ ಸಂಸ್ಥೆಗಳ, ಸಂಘಟನೆಗಳ ಸಭೆ ನಡೆಸಿ ಹೋರಾಟ ರೂಪಿಸುವುದು

4) ಉಗ್ರ ಹೋರಾಟಗಳು ಸೇರಿದಂತೆ ಕಲ್ಯಾಣ ಕರ್ನಾಟಕ ಬಂದ್ ಹೋರಾಟ ನಡೆಸುವದು.

5) 371ನೇ ಜೇ ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಮಾಡಲು ಒತ್ತಾಯಿಸುವುದು.

6) ಸಂವಿಧಾನ ವಿರೋಧಿ ಮತ್ತು 371ನೇ ಜೇ ಕಲಂ ವಿರೋಧಿ ಶಕ್ತಿಗಳ ಹೋರಾಟಕ್ಕೆ ಸರ್ಕಾರ ಅವಕಾಶ ನೀಡದಂತೆ ಒತ್ತಾಯಿಸುವುದು.