ಕಣುಮ ಸಂತೋಷ್‌ ಹಂತಕ ಚವಳಿ ಸಂತುಗೆ ಗುಂಡೇಟು!

| Published : May 08 2025, 12:32 AM IST

ಸಾರಾಂಶ

ರೌಡಿ ಶೀಟರ್, ಕಾಂಗ್ರೆಸ್ ಮುಖಂಡ ಕಣುಮ ಅಲಿಯಾಸ್ ಕಣುಮ ಸಂತೋಷನ ಕೊಲೆ ಆರೋಪಿ ಸ್ಥಳ ಮಹಜರಿಗೆ ಕರೆದೊಯ್ದಿದ್ದ ವೇಳೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ತಪ್ಪಿಸಿಕೊಳ್ಳಲು ಯತ್ನಿಸಿದಾಗ ನಗರ ಡಿವೈಎಸ್ಪಿ ಶರಣ ಬಸವೇಶ್ವರ ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿದ ಘಟನೆ ಆವರಗೆರೆ ಸಮೀಪ ಬುಧವಾರ ಸಂಜೆ ನಡೆದಿದೆ.

- ಆವರಗೆರೆ ಬಳಿ ಪಂಚನಾಮೆಗೆ ಹೋದಾಗ ಡಿವೈಎಸ್ಪಿ, ಕಾನ್‌ಸ್ಟೇಬಲ್ ಮೇಲೆ ಹಲ್ಲೆ - ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗಾಳಿಯಲ್ಲಿ ಗುಂಡು ಹಾರಿಸಿ, ಎಚ್ಚರಿಸಿ, ಫೈರಿಂಗ್‌

- ದಾವಣಗೆರೆಯಲ್ಲಿ ಕಣುಮನ ಹತ್ಯೆ ಮಾಡಿ, ಹೊಳಲ್ಕೆರೆಯಲ್ಲಿ ಶರಣಾಗಿದ್ದ ಹಂತಕರು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರೌಡಿ ಶೀಟರ್, ಕಾಂಗ್ರೆಸ್ ಮುಖಂಡ ಕಣುಮ ಅಲಿಯಾಸ್ ಕಣುಮ ಸಂತೋಷನ ಕೊಲೆ ಆರೋಪಿ ಸ್ಥಳ ಮಹಜರಿಗೆ ಕರೆದೊಯ್ದಿದ್ದ ವೇಳೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ತಪ್ಪಿಸಿಕೊಳ್ಳಲು ಯತ್ನಿಸಿದಾಗ ನಗರ ಡಿವೈಎಸ್ಪಿ ಶರಣ ಬಸವೇಶ್ವರ ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿದ ಘಟನೆ ಆವರಗೆರೆ ಸಮೀಪ ಬುಧವಾರ ಸಂಜೆ ನಡೆದಿದೆ.

ನಗರದ ಭಾರತ ಕಾಲನಿ ನಿವಾಸಿ, ಸಂತೋಷ ಅಲಿಯಾಸ್ ಚವಳಿ ಗುಂಡೇಟು ತಿಂದ ಆರೋಪಿ. ಕಣುಮ ಅಲಿಯಾಸ್ ಕಣುಮ ಸಂತೋಷನನ್ನು ಸೋಮವಾರ ಸಂಜೆ ಹದಡಿ ರಸ್ತೆಯ ಕ್ಲಬ್‌ನಲ್ಲಿ ಮಚ್ಚು, ಲಾಂಗ್‌ನಿಂದ 7ರಿಂದ 10 ಜನರ ಗುಂಪು ಹತ್ಯೆಗೈದಿತ್ತು. ಈ ಆರೋಪಿಗಳ ಪೈಕಿ ಚವಳಿ ಸಂತು ಅಲಿಯಾಸ್ ಸಂತೋಷ ಪ್ರಮುಖ ಆರೋಪಿಯಾಗಿದ್ದನು.

ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಸಂಜೆ 10 ಆರೋಪಿಗಳು ಶರಣಾಗಿದ್ದರು. ಕಾನೂನು ಪ್ರಕ್ರಿಯೆಯನ್ನು ಮುಗಿಸಿ, ದಾವಣಗೆರೆ ವಿದ್ಯಾನಗರ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದರು.

ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಚವಳಿ ಸಂತು ಮೊಬೈಲ್‌ ಬಿಸಾಕಿದ್ದನು. ಚವಳಿ ಸಂತುನನ್ನು ಪಂಚನಾಮೆಗೆಂದು ಡಿವೈಎಸ್ಪಿ ಬಿ.ಶರಣ ಬಸವೇಶ್ವರ ಹಾಗೂ ಅಧಿಕಾರಿ, ಸಿಬ್ಬಂದಿ ಆವರಗೆರೆ ಹೈಸ್ಕೂಲ್ ಬಳಿ ಪಂಚನಾಮೆಗೆಂದು ಕರೆದೊಯ್ಯಲಾಗಿತ್ತು. ಈ ವೇಳೆ ಚವಳಿ ಸಂತು ಪೊಲೀಸ್ ಅಧಿಕಾರಿ, ಕಾನ್‌ಸ್ಟೇಬಲ್‌ ಭೋಜಪ್ಪ ಮೇಲೆ ಹಲ್ಲೆ ಮಾಡಿ, ತಪ್ಪಿಸಿಕೊಳ್ಳಲು ಯತ್ನಿಸಿ, ಗುಂಡೇಟು ತಿಂದಿದ್ದಾನೆ.

ಡಿವೈಎಸ್ಪಿ ಶರಣ ಬಸವೇಶ್ವರ ತಮ್ಮ ಹಾಗೂ ಸಿಬ್ಬಂದಿ ಆತ್ಮರಕ್ಷಣೆಗಾಗಿ ಚವಳಿ ಸಂತೋಷ ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ನೀಡಿ, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆರೋಪಿ ಸೊಪ್ಪು ಹಾಕದಿದ್ದಾಗ ಚವಳಿ ಸಂತು ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಓಡಲಾಗದೇ ಕುಸಿದು ಬಿದ್ದ ಚವಳಿ ಸಂತುನನ್ನು ಪೊಲೀಸರು ವಶಕ್ಕೆ ಪಡೆದರು.

ಗಾಯಾಳು ಚವಳಿ ಸಂತೋಷನನ್ನು ದಾವಣಗೆರೆ ಜಿಲ್ಲಾಸ್ಪತ್ರೆ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆ ತಂದರು. ಡಿವೈಎಸ್ಪಿ ಶರಣ ಬಸವೇಶ್ವರ, ಕಾನ್‌ಸ್ಟೇಬಲ್‌ ಭೋಜಪ್ಪಗೂ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ.ಸಂತೋಷ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ನಗರ ಡಿವೈಎಸ್ಪಿ ಶರಣ ಬಸವೇಶ್ವರ, ಕಾನ್‌ಸ್ಟೇಬಲ್ ಭೋಜಪ್ಪ ಯೋಗಕ್ಷೇಮ ವಿಚಾರಿಸಿ, ಘಟನೆ ಬಗ್ಗೆ ಮಾಹಿತಿ ಪಡೆದರು.

- - -

(ಕೋಟ್‌)

ಎಚ್ಚರಿಕೆ ನೀಡಿ, ಫೈಯರಿಂಗ್

ರೌಡಿ ಶೀಟಲ್ ಕಣುಮ ಸಂತೋಷನ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಚವಳಿ ಸಂತೋಷ ಎಂಬಾತ ಪಂಚನಾಮೆಗೆ ಕರೆದೊಯ್ದಿದ್ದ ವೇಳೆ ನಗರ ಡಿವೈಎಸ್ಪಿ ಬಿ.ಶರಣ ಬಸವೇಶ್ವರ, ಪೇದೆ ಭೋಜಪ್ಪ ಮೇಲೆ ಹಲ್ಲೆ ಮಾಡಿ, ತಪ್ಪಿಸಿಕೊಳ್ಳಳು ಯತ್ನಿಸಿದ್ದಾನೆ. ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ನೀಡಿದರೂ ಆತ ಕೇಳಿಲ್ಲ. ಆಗ ಆತ್ಮರಕ್ಷಣೆ ಹಾಗೂ ಆರೋಪಿಯನ್ನು ಹಿಡಿಯಲು ಆತನ ಮೇಲೆ ಫೈಯರಿಂಗ್ ಮಾಡಲಾಗಿದೆ. ಚಿಕಿತ್ಸೆ ಕೊಡಿಸಲಾಗಿದೆ.

- ಉಮಾ ಪ್ರಶಾಂತ, ಜಿಲ್ಲಾ ಎಸ್‌ಪಿ

- - -

-7ಕೆಡಿವಿಜಿ7, 8, 9, 10:

ದಾವಣಗೆರೆಯ ಆವರಗೆರೆ ಬಳಿ ಪೊಲೀಸರ ಮೇಲೆ ಹಲ್ಲೆ ಮಾಡಿ, ತಪ್ಪಿಸಿಕೊಳ್ಳಲು ಯತ್ನಿಸಿದ ಚವಳಿ ಸಂತು ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದು, ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಯಿತು. -7ಕೆಡಿವಿಜಿ11: ದಾವಣಗೆರೆ ನಗರ ಡಿವೈಎಸ್ಪಿ ಬಿ.ಶರಣ ಬಸವೇಶ್ವರ, ಕಾನ್‌ಸ್ಟೇಟೇಬಲ್ ಭೋಜಪ್ಪ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.