ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಅಶೋಕ ನಗರದಲ್ಲಿರುವ ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬೇಲೂರು ಸೋಮಶೇಖರ್ ಅವಿರೋಧವಾಗಿ ಆಯ್ಕೆಯಾದರು.ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿಯೇ ಅತ್ಯಂತ ಹಳೆಯದಾದ ಮುದ್ರಣ ಸಹಕಾರಿ ಸಂಸ್ಥೆಯಾಗಿದ್ದು, ಮಂಡ್ಯ ಜಿಲ್ಲೆಯಲ್ಲಿ ಒಂದು ಮಾತ್ರ ಇದೆ. ಸಹಕಾರಿ ಧುರೀಣ ಸಿದ್ದಯ್ಯ ಅವರು ಸ್ಥಾಪಿಸಿದ ಸಂಸ್ಥೆ ಇಂದು ಸಹಕಾರ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳವಣಿಗೆ ಕಂಡಿದೆ. ಈ ಸಂಸ್ಥೆಯ ಅಧ್ಯಕ್ಷ ಸ್ಥಾನ ಎಲ್ಲರ ಸಹಕಾರದಿಂದ ದೊರಕಿದ್ದು, ಸಂಸ್ಥೆಯ ಹೆಸರಿಗೆ ಕಳಂಕ ಬಾರದ ರೀತಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ ಎಂದರು.
ಜನಪ್ರಿಯ ನಟ ಅಂಬರೀಶ್ ಅವರನ್ನು ನೆನೆಯುತ್ತಾ ಸಚಿವರಾದ ಎನ್.ಚಲುವರಾಯಸ್ವಾಮಿ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಪಿ.ರವಿಕುಮಾರ್, ಮಳವಳ್ಳಿಯ ಪಿ.ಎಂ.ನರೇಂದ್ರಸ್ವಾಮಿ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದ್ದಾರೆ. ಈ ಆಡಳಿತ ಮಾಂಡಳಿಯಲ್ಲಿರುವ ೧೭ ಮಂದಿ ನಿರ್ದೇಶಕರ ಸಹಕಾರ ಮತ್ತು ಹಿರಿಯ ಸಹಕಾರಿಗಳ ಮಾರ್ಗದರ್ಶನದಲ್ಲಿ ಸಂಸ್ಥೆಯನ್ನು ಅಭಿವೃದ್ಧಿ ಪಡಿಸಲು ಶ್ರಮಿಸುತ್ತೇನೆ ಎಂದರು.ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಬೇಲೂರು ಸೋಮಶೇಖರ್ ಅವರನ್ನು ನಿರ್ದೇಶಕರು ಹಾಗೂ ಹಿತೈಷಿಗಳು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಕುಮಾರ್, ರಾಜನಾಯಕ, ಎಸ್.ನಾಗೇಂದ್ರ, ಗುರುಸ್ವಾಮಿ, ಪುರುಷೋತ್ತಮ್, ಶಶಿಧರ್ ಸಂಗಾಪುರ, ಸುಗ್ಗಿಕೆಂಚಪ್ಪ, ಎಂ.ಡಿ.ಪ್ರಕಾಶ್, ದೇವರಾಜು, ದಾಸೇಗೌಡ, ಕೆ.ಜೆ.ದೇವರಾಜು, ಆರ್.ಕೆ.ಶ್ರೀಮತಿ, ಟಿ.ಬಿ.ಚೈತ್ರಾ, ಕೊಂಡಯ್ಯ, ನಂದೀಶ್, ದೀಪಕ್, ಹರೀಶ್, ಮೋಹನ್ ಹಾಗೂ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮರಿಗೌಡ, ಹೊಸಹಳ್ಳಿ ಶಿವಲಿಂಗೇಗೌಡ, ಬೋರೇಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ ಮತ್ತಿತರರಿದ್ದರು.