ಸಾರಾಂಶ
ರಾಣಿಬೆನ್ನೂರು: ಆರ್ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತಕ್ಕೆ ಒಳಗಾಗಿ 11 ಅಮಾಯಕರು ಸಾವಿಗೀಡಾದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ನಗರದ ಬಸ್ ನಿಲ್ದಾಣದ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದರು.
ಈ ಸಮಯದಲ್ಲಿ ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಆರ್ಸಿಬಿ ಗೆಲುವಿನ ಶ್ರೇಯಸ್ಸನ್ನು ಕಾಂಗ್ರೆಸ್ ತನ್ನ ಪರವಾಗಿ ಬಳಕೆ ಮಾಡಿಕೊಳ್ಳಲು ತರಾತುರಿಯಲ್ಲಿ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಯಿತು. ಇದರಿಂದ ಸಣ್ಣ ಮಕ್ಕಳು ಸೇರಿದಂತೆ 11 ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಯಿತು. ಘಟನೆಗೆ ಕಾರಣರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಗೃಹ ಸಚಿವ ಡಾ. ಜಿ. ಪರಮೇಶ್ವರ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಪಕ್ಷದ ಮುಖಂಡರಾದ ಎಸ್.ಎಸ್. ರಾಮಲಿಂಗಣ್ಣನವರ, ಡಾ. ಬಸವರಾಜ ಕೇಲಗಾರ, ಭಾರತಿ ಜಂಬಗಿ, ಸಂತೋಷಕುಮಾರ ಪಾಟೀಲ, ಚೋಳಪ್ಪ ಕಸವಾಳ, ಪ್ರಕಾಶ ಪೂಜಾರ ಮಾತನಾಡಿದರು. ನಗರ ಘಟಕದ ಅಧ್ಯಕ್ಷ ಮಂಜುನಾಥ ಕಾಟಿ, ಪ್ರಧಾನ ಕಾರ್ಯದರ್ಶಿ ಅಮೋಘ ಬಾದಾಮಿ, ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಶ ಶಿರಗೇರಿ, ಎ.ಬಿ. ಪಾಟೀಲ, ಗದಿಗೆಪ್ಪ ಹೊಟ್ಟಿಗೌಡ್ರ, ಪವನಕುಮಾರ ಮಲ್ಲಾಡದ, ನಾಗರಾಜ ಗೌಳಿ, ಎಸ್.ಎಸ್. ಮುದ್ದಳ್ಳಪ್ಪನವರ, ರವಿ ತಳವಾರ, ಮಾಳಪ್ಪ ಪೂಜಾರ, ನಿಂಗರಾಜ ಕೋಡಿಹಳ್ಳಿ, ಬಸವರಾಜ ರೊಡ್ಡನವರ, ಯುವರಾಜ ಬಾರಾಟಕ್ಕೆ, ಗಿರೀಶ ಬುಡ್ಡನಗೌಡರ, ಗಿರೀಶ ವಾಲಿಶೆಟ್ಟರ, ಗಿರೀಶ ಕಮ್ಮಾರ, ಕೃಷ್ಣ ಮೆದಾರ, ನವೀನ ಅಡ್ಡಿ, ರಾಜು ಬಣಕಾರ, ಶಿವಕುಮಾರ ಹರ್ಕನಾಳ, ಕೊಟ್ರೇಶ ಕಮದೋಡ, ಲಿಂಗರಾಜ ಬೂದನೂರ, ಮಂಜುಳಾ ಹತ್ತಿ, ಸುಧಾ ಪಾಟೀಲ, ಮಂಜುನಾಥ ಕಬ್ಬಿಣದ, ಸುಜಾತಾ ಆರಾಧ್ಯಮಠ, ಗಂಗಮ್ಮ ಹಾವನೂರ, ಚಂದ್ರು ಕುಂದಾಪುರ, ಮಲ್ಲಿಕಾರ್ಜುನ ಅಂಗಡಿ, ಅನಿಲಕುಮಾರ ಸಿದ್ದಾಳಿ, ಕುಬೇರಪ್ಪ ಕೊಂಡಜ್ಜಿ, ಉಮೇಶ ಹೊನ್ನಾಳ್ಳಿ, ಅನಂತ ಇಟಗಿ, ಮೌನೇಶ ತಳವಾರ, ವಸಂತ ಪೂಜಾರ, ಅಶೋಕ ಪಾಸಿಗಾರ, ಶಿವಯೋಗಿ ಹಳ್ಳಳ್ಳಿ, ಸಂತೋಷ ತೆವರಿ, ಚನ್ನಬಸಪ್ಪ ಬಿದರಿ, ವಿಷ್ಣು ಜಿಂಗಾಡೆ, ಬಸವರಾಜ ಮೈಲಾರ, ಗೀತಾ ಜಂಬಗಿ, ಚೆನ್ನಮ್ಮ, ಅಕ್ಷತಾ ಮಾಳಗಿಮಣಿ, ಸುಮಲತಾ ಮತ್ತಿತರರಿದ್ದರು.ಪ್ರಚಾರದ ಭರದಲ್ಲಿ ಅಭಿವೃದ್ಧಿ ಕಡೆಗಣನೆ
ಹಾನಗಲ್ಲ: ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಪ್ರಚಾರದ ತೆವಲಿಗೆ ಹಲವರ ಜೀವವನ್ನೇ ಬಲಿ ತೆಗೆದುಕೊಳ್ಳುತ್ತಿದ್ದು, ಬಿಟ್ಟಿ ಪ್ರಚಾರದ ಭರದಲ್ಲಿ ರಾಜ್ಯದ ಅಭಿವೃದ್ಧಿಯನ್ನೇ ಕಡೆಗಣಿಸಿದ್ದು, ಕೂಡಲೇ ರಾಜಿನಾಮೆ ನೀಡಬೇಕು ಎಂದು ರಾಜ್ಯ ಬಿಜೆಪಿ ಪ್ರಕೋಷ್ಟಗಳ ಸಹ ಸಂಯೋಜಕ ಭೋಕರಾಜ ಕರೂದಿ ಒತ್ತಾಯಿಸಿದರು.ತಾಲೂಕು ಬಿಜೆಪಿ ವತಿಯಿಂದ ರಾಜ್ಯ ಸರ್ಕಾರ ಆರ್ಸಿಬಿ ಗೆದ್ದವರೊಂದಿಗೆ ವಿಜಯೋತ್ಸವದಲ್ಲಿ 11 ಅಮಾಯಕರು ಕಾಲ್ತುಳಿತಕ್ಕೆ ಬಲಿಯಾಗುವುದುಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ರಾಜಿನಾಮೆ ನೀಡಬೇಕು ಎಂದು ಇಲ್ಲಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸರಿಯಾದ ರಕ್ಷಣೆ ಇಲ್ಲದೆ ಸಂಭ್ರಮಿಸಲು ಹೋಗಿ 11 ಜನ ಅಮಾಯಕರ ಪ್ರಾಣಕ್ಕೆ ಸಂಚಕಾರ ಬಂದಿದೆ. ಕಾಂಗ್ರೆಸ್ ಸರ್ಕಾರ ಬೇಗ ತೊಲಗಿದಷ್ಟು ಉತ್ತಮ. ಇಲ್ಲದಿದ್ದರೆ ರಾಜ್ಯದ ಭವಿಷ್ಯವನ್ನೇ ಧೂಳಿಪಟ ಮಾಡಿ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಾರೆ. ಇದು ಈ ರಾಜ್ಯದ ಪ್ರತಿ ಪ್ರಜೆಗಳ ಗಮನಕ್ಕೆ ಬಂದಿದೆ ಎಂದರು.ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಸವರಾಜ ಹಾದಿಮನಿ, ತಾಲೂಕು ಅಧ್ಯಕ್ಷ ಮಹೇಶ ಕಮಡೊಳ್ಳಿ, ಜಿಲ್ಲಾ ಉಪಾಧ್ಯಕ್ಷ ಶಿವಲಿಂಗಪ್ಪ ತಲ್ಲೂರ, ರೈತ ಮೋರ್ಚಾ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ರಾಜು ಗೌಳಿ, ಈರಣ್ಣ ನಿಂಬಣ್ಣನವರ, ಸಂತೋಷ ಭಜಂತ್ರಿ, ಸಚಿನ್ ರಾಮಣ್ಣನವರ, ಕುಮಾರ ನಾಗೋಜಿ, ನಿಜಲಿಂಗಪ್ಪ ಮುದಿಯಪ್ಪನವರ, ರವಿ ಪಾಟೀಲ, ಪ್ರಕಾಶ ನಂದಿಕೊಪ್ಪ, ಸಂತೋಷ ಕೊರಗರ, ಪ್ರವೀಣ ಗಜಾಕೋಶ, ಬಸಣ್ಣ ಹಾದಿಮನಿ, ಸುನೀಲ್ ಬಾರ್ಕಿ, ಅಮಿತ ಷಡಗರವಳ್ಳಿ ಮೊದಲಾದವರಿದ್ದರು.