ವಿವಿಧ ಬೇಡಿಕೆ ಈಡೇರಿಕೆಗೆ ಪೌರ ಕಾರ್ಮಿಕರ ಆಗ್ರಹ

| Published : May 30 2025, 12:18 AM IST

ಸಾರಾಂಶ

ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಅವರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಐನಾಪುರ ಪಟ್ಟಣ ಪಂಚಾಯತಿ ಮುಂದೆ ಪೌರ ಕಾರ್ಮಿಕರು ಮುಷ್ಕರ ಆರಂಭಿಸಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಅವರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಐನಾಪುರ ಪಟ್ಟಣ ಪಂಚಾಯತಿ ಮುಂದೆ ಪೌರ ಕಾರ್ಮಿಕರು ಮುಷ್ಕರ ಆರಂಭಿಸಿದರು.

ಐನಾಪುರ ಪಟ್ಟಣ ಪಂಚಾಯತಿ ಪೌರ ಕಾರ್ಮಿಕರ ನೇತೃತ್ವದಲ್ಲಿ ಶಾಖಾ ಅಧ್ಯಕ್ಷ ರವೀಂದ್ರ ತಳಕೇರಿ ಮಾತನಾಡಿ, ಸ್ಥಳೀಯ ಸಂಸ್ಥೆಗಳಲ್ಲಿ ಇತರೆ ಇಲಾಖೆಗಳಂತೆ ಸೇವೆ ಮಾಡುತ್ತಿದ್ದೇವೆ. ಆದರೆ, ಸರ್ಕಾರ ನಗರಾಭಿವೃದ್ಧಿ ಇಲಾಖೆಯ ನೌಕರರನ್ನು ಸರ್ಕಾರ ಕಡೆಗಣಿಸುತ್ತ ಬಂದಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಮಾಡುತ್ತಿದ್ದರೂ ಸರ್ಕಾರಿ ನೌಕರರಿಗೆ ಸಿಗುವ ಜ್ಯೋತಿ ಸಂಜೀವಿನಿ, ಕೆಜಿಐಡಿ ಹಾಗೂ ಇತರ ಸೌಲಭ್ಯಗಳು ಸಿಗುತ್ತಿಲ್ಲ. ಕೇಂದ್ರ ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಅನಿವಾರ್ಯವಾಗಿ ಮುಷ್ಕರಕ್ಕೆ ಇಳಿಯಬೇಕಾಗಿದೆ ಎಂದರು.ನಾವು ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದೇವೆ. ಕೂಡಲೇ ನಮ್ಮನ್ನು ಸರ್ಕಾರಿ ನೌಕಕರೆಂದು ಪರಿಗಣಿಸಬೇಕು. ಹೊರಗುತ್ತಿಗೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು, ಚಾಲಕರು, ಲೆಕ್ಕ ಸಹಾಯಕರು, ಮಾಹಿತಿ ತಂತ್ರಜ್ಞಾನ ಸಿಬ್ಬಂದಿ, ಲೋಡರ್ಸ್‌, ಕ್ಲಿನರರ್ಸ್‌, ಸ್ಯಾನಿಟರಿ ಸೂಪರವೈಸರ್, ಯುಜಿಡಿ ಸಹಾಯಕರು ಸೇರಿದಂತೆ ವಿವಿಧ ವೃಂದ ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು. ದಿನಗೂಲಿ ಕ್ಷೇಮಾಭಿವೃದ್ಧಿ ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರನ್ನು ಕಾಯಂಗೊಳಿಸುವುದು, ಎಲ್ಲ ನೌಕರರಿಗೆ ಎಸ್‌ಎಫ್‌ಸಿ ಮುಕ್ತ ನಿಧಿಯಿಂದ ವೇತನ ನೀಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಮಹೇಶ ನಡುವಿನಮನಿ, ಸಂಜಯ ಸನದಿ, ಮೀರಾಸಾಬ್‌ ಹೆರ್ಲೇಕರ, ಕಿರಣ ಶಿರಗಾಂವೆ, ಅಥರ್ವ ನಿಕ್ಕಮ್, ಬಸವರಾಜ ಪಾಟೀಲ, ಮಗೆಪ್ಪ ತೆರದಾಳ, ತನುಜಾ ನಡೀಣಿ, ಪವಿತ್ರಾ ನಡೋಣಿ, ಸುಮಿತ್ರಾ ಕಾಂಬಳೆ, ಸುರೇಖಾ ಕಾಂಬಳೆ, ಯಲ್ಲಪ್ಪ ಕಾರೆ, ಸಂತೋಷ ಕೋಳಿ, ಮನೋಹರ ಮಾಂಗ, ಶಂಕರ ಮಾಂಗ, ಸುಷಾಂತ ಮಾಂಗ, ವಿನೋದ ನಾಯಿಕ, ಪ್ರಫುಲ ತಳಕೇರಿ ರವೀಂದ್ರ ಗಾಣಿಗೇರ, ಆನಂದ ಐಹೋಳಿ ಸೇರಿದಂತೆ ಹಲವಾರು ಪೌರಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿದ್ದರು.ಸೇವೆ ಸ್ಥಗಿತ-ಪರದಾಟ:

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪೌರ ಸೇವಾ ನೌಕರರ ಸಂಘದಿಂದ ಹಮ್ಮಿಕೊಂಡಿರುವ ಮುಷ್ಕರದ ಹಿನ್ನೆಲೆಯಲ್ಲಿ ಗುರುವಾರ ಎಲ್ಲ ಶಾಖೆಗಳ ಸೇವೆ ಸ್ಥಗಿತವಾಗಿದ್ದವು. ನೌಕರರು ಹಾಗೂ ಸಿಬ್ಬಂದಿ ಕೆಲಸ ತ್ಯಜಿಸಿ ಮುಷ್ಕರದಲ್ಲಿ ಭಾಗವಹಿಸಿದ್ದರು. ಹೀಗಾಗಿ ವಿವಿಧ ಸೇವೆಗಳನ್ನು ಪಡೆದುಕೊಳ್ಳಲು ಪಟ್ಟಣ ಪಂಚಾಯತಿಗೆ ಬರುತ್ತಿದ್ದ ಸಾರ್ವಜನಿಕರು ಮುಷ್ಕರದ ಹಿನ್ನೆಲೆಯಲ್ಲಿ ಪರದಾಡಬೇಕಾಯಿತು. ಉಗಾರ, ಶೇಡಬಾಳ, ಕಾಗವಾಡದಲ್ಲಿಯೂ ಮುಷ್ಕರ

ವಿವಿಧ ಬೇಡಿಕೆಗಳಿಗಾಗಿ ಸ್ಥಳೀಯ ಸಂಸ್ಥೆಯ ನೌಕರರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿ ಸೌಲಭ್ಯಗಳನ್ನು ಒದಗಿಸಬೇಕು ಎನ್ನುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಪೌರ ನೌಕರರ ಸಂಘ ಕರೆ ನೀಡಿದ್ದ ಮುಷ್ಕರದ ಹಿನ್ನೆಲೆಯಲ್ಲಿ ಮುಷ್ಕರ ಬೆಂಬಲಿಸಿ ಉಗಾರ ಪುರಸಭೆಯ ಮುಂದೆ, ಶೇಡಬಾಳ ಹಾಗೂ ಕಾಗವಾಡ ಪಟ್ಟಣ ಪಂಚಾಯತಿಗಳ ಮುಂದೆ ಪೌರ ಕಾರ್ಮಿಕರು ಮುಷ್ಕರ ನಡೆಸಿದ್ದಾರೆ.ಕಾಗವಾಡ ತಾಲೂಕಿನ ಉಗಾರ ಪುರಸಭೆ, ಕಾಗವಾಡ, ಶೇಡಬಾಳ ಹಾಗೂ ಐನಾಪುರ ಪಟ್ಟಣ ಪಂಚಾಯತಿಗಳ ಮುಂದೆ ಪೌರ ಕಾರ್ಮಿಕರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಮ್ಮ ಮುಷ್ಕರ ನಡೆಸುತ್ತಿದ್ದಾರೆ. ಪೌರ ಕಾರ್ಮಿಕರು ತಮ್ಮ ಸೇವೆ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಪಟ್ಟಣಗಳೆಲ್ಲ ದುರ್ವಾಸನೆಯಿಂದ ನಾರುತ್ತಿವೆ. ಅದಕ್ಕಾಗಿ ಸರ್ಕಾರ ಮಧ್ಯಸ್ಥಿಕೆ ವಹಿಸಿ ಅವರಿಗೆ ನ್ಯಾಯ ಒದಿಸಬೇಕು.

-ಕಸ್ತೂರಿ ಮಡಿವಾಳರ, ಅಧ್ಯಕ್ಷರು ಪಟ್ಟಣ ಪಂಚಾಯತಿ ಐನಾಪುರ.