ಸಾರಾಂಶ
ರೇಬಿಸ್ ಮುಕ್ತ ಸಮಾಜ ಎಂಬ ವಿಷಯದ ಮೇಲೆ ಕಾರ್ಯಾಗಾರವು ನಗರದ ಹೊರವಲಯದಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆಯಿತು. 
ಕನ್ನಡಪ್ರಭ ವಾರ್ತೆ ಮಡಿಕೇರಿ
ವಿಶ್ವ ರೇಬೀಸ್ ದಿನಾಚರಣೆಯ ಅಂಗವಾಗಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಮುದಾಯ ವೈದ್ಯಶಾಸ್ತ್ರ ವಿಭಾಗದ ವತಿಯಿಂದ “ಒನ್ ಹೆಲ್ತ್ ಪರಿಕಲ್ಪನೆಯಡಿಯಲ್ಲಿ ರೇಬೀಸ್ ಮುಕ್ತ ಸಮಾಜ ಎಂಬ ವಿಷಯದ ಮೇಲೆ ಕಾರ್ಯಾಗಾರವು ನಗರದ ಹೊರ ವಲಯದಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಗುರುವಾರ ನಡೆಯಿತು. ಈ ಕಾರ್ಯಕ್ರಮವನ್ನು ವರ್ಲ್ಡ್ ಆರ್ಗನೈಸೇಶನ್ ಫಾರ್ ಅನಿಮಲ್ ಹೆಲ್ತ್ ರೆಫರೆನ್ಸ್ ಲ್ಯಾಬೊರೇಟರಿ ಫಾರ್ ರೇಬೀಸ್, ಪಶುವೈದ್ಯಕೀಯ ಮಹಾವಿದ್ಯಾಲಯ, ಕೆ.ವಿ.ಎ.ಎಫ್.ಎಸ್.ಯು., ಬೆಂಗಳೂರು, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ, ಕೊಡಗು ಜಿಲ್ಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್, ಕೊಡಗು ಘಟಕ ಮತ್ತು ಇಂಡಿಯನ್ ರೆಡ್ಕ್ರಾಸ್ ಸೊಸೈಟಿ, ಕೊಡಗು ಸಹಯೋಗದಲ್ಲಿ ಆಯೋಜಿಸಲಾಯಿತು.ಈ ಕಾರ್ಯಕ್ರಮವನ್ನು ಪಶುವೈದ್ಯಕೀಯ ಆರೋಗ್ಯ ಕ್ಷೇತ್ರದ ತಜ್ಞರಾದ ಡಾ.ಶ್ರೀಕೃಷ್ಣ ಇಶ್ಲೂರ್ ಉದ್ಘಾಟಿಸಿದರು, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ. ಲೋಕೇಶ್ ಎ.ಜೆ. ಮತ್ತು ಡಾ. ಸತೀಶ್ ಕುಮಾರ್ ಕೆ.ಎಂ. ಡಿ.ಹೆಚ್.ಒ. ಕೊಡಗು ಉಪಸ್ಥಿತಿಯಲ್ಲಿ, ಸಮುದಾಯ ವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ರಾಮಚಂದ್ರ ಕಾಮತ್, ಡಾ.ನರಸಿಂಹ ರೈ, ಡಾ.ಶಿವಣ್ಣ, ಜಂಟಿ ನಿರ್ದೇಶಕರು ಎಎಚ್ವಿಎಸ್ ಡಾ.ಶಾಮಪ್ಪಣ್ಣ, ಐಎಮ್ಎ ಕೊಡಗು, ಮತ್ತು ರವೀಂದ್ರ ರೈ ಇಂಡಿಯನ್ ರೆಡ್ ಕ್ರಾಸ್, ಇತರ ಗಣ್ಯ ಅತಿಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪಶು ವೈದ್ಯಕೀಯ ಆರೋಗ್ಯ ಕ್ಷೇತ್ರದ ತಜ್ಞ ಡಾ.ಶ್ರೀಕೃಷ್ಣ ಇಶ್ಲೂರ್ ಮತ್ತು ಡಾ.ನಿತಿನ್ ಪ್ರಭು ಹಾಗೂ ರೇಬೀಸ್ ನಿಯಂತ್ರಣ ತಜ್ಞರಾದ ಡಾ.ಡಿ.ಎಚ್.ಅಶ್ವತ್ಥ್ ನಾರಾಯಣ ಅವರು ರೇಬೀಸ್ ಸಾಂಕ್ರಾಮಿಕ ರೋಗಶಾಸ್ತ್ರ ತಡೆಗಟ್ಟುವಿಕೆ ತಂತ್ರಗಳು, ನಂತರದ-ಸಾಂದರ್ಭಿಕ ರೋಗನಿರೋಧಕ ಮತ್ತು ಇಂಟರ್ಸೆಕ್ಟರ್ ಒರಲ್ ಸಮನ್ವಯದ ಕುರಿತು ಒಳನೋಟವುಳ್ಳ ಮಾಹಿತಿ ನೀಡಿದರು. ಪದವಿ ಪೂರ್ವ ವಿದ್ಯಾರ್ಥಿಗಳಿಗೆ ರೇಬೀಸ್ ಕುರಿತು ರಾಜ್ಯ ಮಟ್ಟದ ರಸಪ್ರಶ್ನೆ ನಡೆಸಲಾಯಿತು ಮತ್ತು ನಗದು ಬಹುಮಾನ ವಿತರಿಸಲಾಯಿತು. ನಗದು ಬಹುಮಾನವನ್ನು ವೆಂಕಟನರಸಿಂಹ, ಬೆಂಗಳೂರು, ಇವರು ಸಂಸ್ಥೆಗೆ ನೀಡಿದ ದೇಣಿಗೆ ಹಣದಿಂದ ನೀಡಲಾಯಿತು. ಪ್ರಥಮ ಬಹುಮಾನವನ್ನು ಬಿ.ಜಿ.ಎಸ್. ಗ್ಲೊಬಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ದ್ವಿತಿಯ ಬಹುಮಾನ ಪಶು ವೈದ್ಯಕೀಯ ಕಾಲೇಜು ಹಾಸನ, ಹಾಗೂ ತೃತಿಯ ಬಹುಮಾನ ಕೆ ಎಮ್ ಸಿ ಮಣಿಪಾಲ್ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡರು.ಕಾರ್ಯಕ್ರಮದಲ್ಲಿ ಮನುಷ್ಯ ಮತ್ತು ಪಶು ಆರೋಗ್ಯ ತಜ್ಞರು "ಒನ್ ಹೆಲ್ತ್ " ಪರಿಕಲ್ಪನೆಯ ಮಹತ್ವ, ರೇಬೀಸ್ನ ತಡೆಗಟ್ಟುವ ಕ್ರಮಗಳು, ಲಸಿಕಾ ವಿಧಾನಗಳು ಹಾಗೂ ಮಾನವ- ಪಶು ಆರೋಗ್ಯ ಕ್ಷೇತ್ರಗಳ ಸಂಯುಕ್ತ ಕಾರ್ಯಪದ್ಧತಿ ಕುರಿತು ಉಪನ್ಯಾಸ ನೀಡಿದರು.ವೈದ್ಯಕೀಯ ಮತ್ತು ಪಶುವೈದ್ಯಕೀಯ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿದರು. ಜೀರೋ ಬೈ 2030 ಎಂಬ ಜಾಗತಿಕ ಗುರಿಯನ್ನು ಸಾಧಿಸಲು ಮಾನವ ಮತ್ತು ಪಶು ಆರೋಗ್ಯ ವಿಭಾಗಗಳ ಸಮನ್ವಯ ಅಗತ್ಯವೆಂಬ ವಿಷಯವನ್ನು ಎಲ್ಲರೂ ಒಮ್ಮತದಿಂದ ಒತ್ತಿ ಹೇಳಿದರು.ರೇಬೀಸ್ ಮುಕ್ತ ಸಮಾಜ ನಿರ್ಮಾಣದತ್ತ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಅದರ ಸಹಭಾಗಿಗಳು ಒಟ್ಟಾಗಿ ಕೆಲಸ ಮಾಡುವ ಬದ್ಧತೆಯನ್ನು ಈ ಸಂದರ್ಭದಲ್ಲಿ ಪುನಃ ದೃಢಪಡಿಸಲಾಯಿತು.;Resize=(128,128))
;Resize=(128,128))