ಮಾಯಕೊಂಡಕ್ಕೆ 750 ಮನೆ ಮಂಜೂರು: ಬಸವಂತಪ್ಪ

| Published : Feb 01 2025, 12:02 AM IST

ಸಾರಾಂಶ

ಮಾಯಕೊಂಡ ವಿಧಾನಸಭಾ ಕ್ಷೇತ್ರದ ನಿರ್ಗತಿಕರು, ಬಡವರಿಗೆ ಸೂರು ಕಲ್ಪಿಸಲು ಸರ್ಕಾರ ಮತ್ತು ವಸತಿ ಸಚಿವರ ಮೇಲೆ ಒತ್ತಡ ಹಾಕಿ, ಬಸವ ವಸತಿ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್ ನಿವಾಸ ಯೋಜನೆಯಡಿ 750 ಮನೆಗಳನ್ನು ಮಂಜೂರು ಮಾಡಿಸಿದ್ದು, ಮನೆಗಳ ಹಂಚಿಕೆ ಪಾರದರ್ಶಕವಾಗಿರುವಂತೆ ಗ್ರಾಪಂ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಶಾಸಕ ಕೆ.ಎಸ್.ಬಸವಂತಪ್ಪ ಎಚ್ಚರಿಸಿದ್ದಾರೆ.

ಬಸವ, ಅಂಬೇಡ್ಕರ್‌ ನಿವಾಸದಡಿ ದಾವಣಗೆರೆ ತಾಲೂಕಿಗೆ 506, ಚನ್ನಗಿರಿಗೆ 244 ಮನೆ । ಪಾರದರ್ಶಕವಾಗಿ ಮನೆ ನೀಡಲು ಸೂಚನೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾಯಕೊಂಡ ವಿಧಾನಸಭಾ ಕ್ಷೇತ್ರದ ನಿರ್ಗತಿಕರು, ಬಡವರಿಗೆ ಸೂರು ಕಲ್ಪಿಸಲು ಸರ್ಕಾರ ಮತ್ತು ವಸತಿ ಸಚಿವರ ಮೇಲೆ ಒತ್ತಡ ಹಾಕಿ, ಬಸವ ವಸತಿ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್ ನಿವಾಸ ಯೋಜನೆಯಡಿ 750 ಮನೆಗಳನ್ನು ಮಂಜೂರು ಮಾಡಿಸಿದ್ದು, ಮನೆಗಳ ಹಂಚಿಕೆ ಪಾರದರ್ಶಕವಾಗಿರುವಂತೆ ಗ್ರಾಪಂ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಶಾಸಕ ಕೆ.ಎಸ್.ಬಸವಂತಪ್ಪ ಎಚ್ಚರಿಸಿದ್ದಾರೆ.

ರಾಜ್ಯ ಸರ್ಕಾರ ಹಾಗೂ ವಸತಿ ಸಚಿವ ಜಮೀರ್ ಅಹಮ್ಮದ್ ಮೇಲೆ ಒತ್ತಡ ಹಾಕಿ ಮಾಯಕೊಂಡ ಕ್ಷೇತ್ರಕ್ಕೆ ಒಟ್ಟು 750 ಮನೆಗಳನ್ನು ಮಂಜೂರು ಮಾಡಿಸಿದ್ದೇವೆ. ಈ ಪೈಕಿ ಕ್ಷೇತ್ರದ ದಾವಣಗೆರೆ ತಾಲೂಕಿಗೆ 506 ಮನೆಗಳು, ಚನ್ನಗಿರಿ ತಾಲೂಕಿಗೆ 244 ಮನೆಗಳ ಹಂಚಿಕೆಯಾಗಿವೆ. ಮನೆಗಳನ್ನು ಪಾರದರ್ಶಕವಾಗಿ ಹಂಚಿಕೆ ಮಾಡಲು ಗ್ರಾಪಂ ಅಧಿಕಾರಿಗಳು ಗಮನ ಹರಿಸಲಿ ಎಂದು ಸೂಚಿಸಿದ್ದಾರೆ.

ದಾವಣಗೆರೆ ತಾಲೂಕಿನ ವ್ಯಾಪ್ತಿಗೆ ಬರುವ ಗ್ರಾಪಂಗಳಿಗೆ 2022-23ನೇ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಮತ್ತು ಬಸವ ವಸತಿ ಯೋಜನೆಯಡಿ 506 ಮನೆ, ಚನ್ನಗಿರಿ ತಾಲೂಕಿನ ವ್ಯಾಪ್ತಿಯ ಗ್ರಾಪಂಗಳಿಗೆ 244 ಮನೆ ಮಂಜೂರಾಗಿವೆ. ದಾವಣಗೆರೆ ತಾಲೂಕಿನ ಆಲೂರು ಗ್ರಾಪಂಗೆ 12 ಮನೆ, ಆನಗೋಡು 31, ಅಣಜಿ 23, ಅಣಬೇರು 30, ಅತ್ತಿಗೆರೆ 18, ಬಾಡ 25, ಬಸವನಾಳು 24, ಗೋಪನಾಳು 21 ಮನೆಗಳು ತಿಳಿಸಿದ್ದಾರೆ.

ಹೆಮ್ಮನಬೇತೂರು 25, ಹೊನ್ನೂರು 20, ಹುಚ್ಚವ್ವನಹಳ್ಳಿ 23, ಐಗೂರು 5, ಕಂದಗಲ್ಲು 10, ಕಂದನಕೋವಿ 10, ಕೊಡಗನೂರು 19, ಕುರ್ಕಿ 20, ಮಳಲಕೆರೆ 20, ಮತ್ತಿ 15, ಮಾಯಕೊಂಡ 33, ನರಗನಹಳ್ಳಿ 22, ಶ್ಯಾಗಲೆ 21, ತೋಳಹುಣಸೆ 14, ನೇರ್ಲಿಗೆ 18, ಲೋಕಿಕೆರೆ 22, ಶ್ರೀರಾಮನಗರ 5 ಸೇರಿ ಒಟ್ಟು 506 ಮನೆ ಹಂಚಿಕೆಯಾಗಿದೆ. ಚನ್ನಗಿರಿ ತಾಲೂಕಿನ ಬಸವಾಪಟ್ಟಣ 34, ಬೆಳಲಗೆರೆ 18, ಚಿರಡೋಣಿ 30, ದಾಗಿನಕಟ್ಟೆ 17, ಜಿ.ಕೆ.ಹಳ್ಳಿ 8, ಕಬ್ಬಳ 5, ಕಂಸಾಗರ 14, ಕಣಿವೆಬಿಳಚಿ 2, ಕಾರಿಗನೂರು 10, ಕತ್ತಲಗೆರೆ 12, ಕೋಟೆಹಾಳ್ 11, ನಿಲೋಗಲ್ಲು 14, ತ್ಯಾವಣಿಗೆ 26, ರುದ್ರಾಪುರ 3, ನವಿಲೇಹಾಳು 16, ನಲ್ಕುದುರೆ 24 ಸೇರಿ ಒಟ್ಟು 244 ಮನೆ ಹಂಚಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸರ್ಕಾರವು ಕ್ಷೇತ್ರದ ನಿರ್ಗತಿಕರಿಗೆ ಮನೆ ನೀಡಿದೆ. ಆದರೆ, ಗ್ರಾಮ ಪಂಚಾಯಿತಿ ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಯಾವುದೇ ಕಾರಣಕ್ಕೂ ಫಲಾನುಭವಿಗಳ ಬಳಿ ಮನೆಗಳನ್ನು ನೀಡುವುದಕ್ಕೆ ಹಣ ವಸೂಲಿ ಮಾಡಬಾರದು. ಮನೆ ಪಡೆಯುವ ಫಲಾನುಭವಿಗಳು ಸಹ ಯಾರಿಗೂ ಹಣ ಕೊಡಬೇಕಾಗಿಲ್ಲ. ಒಂದು ವೇಳೆ ಯಾರಾದರೂ ಹಣವನ್ನು ವಸೂಲಿ ಮಾಡಿದರೆ, ಹಣಕ್ಕೆ ಬೇಡಿಕೆ ಇಟ್ಟರೆ ಅಂತಹ ಫಲಾನುಭವಿಗಳು ನೇರವಾಗಿ ತಮ್ಮನ್ನು ಸಂಪರ್ಕಿಸುವಂತೆ ಶಾಸಕ ಕೆ.ಎಸ್.ಬಸವಂತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.